ಕನ್ನಡ ನಾಡು ನುಡಿಯ ತಲ್ಲಣಗಳನ್ನು ಕಡೆಗಣಿಸಿರುವ ಸಾಹಿತ್ಯ ಸಮ್ಮೇಳನ: ಸಿಪಿಐ(ಎಂ)

ಬೆಂಗಳೂರು: ಕನ್ನಡ ನಾಡು ನುಡಿಯ ಮೇಲೆ ಭಾರತ ಒಕ್ಕೂಟ ಹಾಗೂ ರಾಜ್ಯ ಸರ್ಕಾರಗಳ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರ ನೀತಿಗಳಿಂದಾಗಿ ರಾಜ್ಯದಲ್ಲಿ ಉಸಿರು ಕಟ್ಟಿದ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಒಟ್ಟಾರೆ ಜನತೆಯ ಜನವಿಚಾರಗಳನ್ನು ಕನ್ನಡ ಸಾಹಿತ್ಯ ಸಮ್ಮೇಳನ ಕಡೆಗಣಿಸಿದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಕರ್ನಾಟಕ ರಾಜ್ಯ ಸಮಿತಿ ತಿಳಿಸಿದೆ.

ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಅವರು, `ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಶ್ವ ಜನ ಕವಿ ಪಾಬ್ಲೋ ನೆರೂದ’ನ ನೋವುಂಡು ಆಕ್ರೋಶಿಸಿದಂತೆ, “ನೋಡಿ ಬೀದಿಯ ಮೇಲೆ ರಕ್ತವಿದೆ ! ರಕ್ತವಿದೆ ಬೀದಿಯ ಮೇಲೆ’’ ಎಂಬಂತಹ ಗಂಭೀರ ಸನ್ನಿವೇಶದಲ್ಲಿ ಹಾವೇರಿ ನಗರದಲ್ಲಿ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಆದರೆ, ಇಂತಹ ಜ್ವಲಂತ ಪ್ರಶ್ನೆಗಳನ್ನು ಸಾಹಿತ್ಯ ಸಮ್ಮೇಳನ ಒಳಗೊಳ್ಳದಿರುವುದು ವಿಷಾಧಕರ ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಕನ್ನಡದ ಪರವಾಗಿ ಧ್ವನಿ ಎತ್ತಿ- ನಾಯಕತ್ವ ನೀಡುವ ಅರ್ಹತೆಯನ್ನು ಕಸಾಪ ಕಳೆದುಕೊಂಡಿದೆ

ಕೃಷಿ, ಕೈಗಾರಿಕಾ ಬಿಕ್ಕಟ್ಟು, ನೈಸರ್ಗಿಕ ಪ್ರಕೋಪಗಳಿಂದಾಗಿ ಜನತೆ ತತ್ತರಿಸುತ್ತಿದೆ, ಸೌಹಾರ್ದತೆ ಕದಡಿದೆ. ಒಕ್ಕೂಟ ಹಾಗೂ ರಾಜ್ಯ ಸರಕಾರಗಳು ನಮ್ಮ ನುಡಿಯ ಮೇಲೆ ಗಂಭೀರ ಧಾಳಿಗಳನ್ನು ಹರಿಬಿಟ್ಟಿವೆ. ಶಿಕ್ಷಣದ ವ್ಯಾಪಾರೀಕರಣ, ಕೋಮುವಾದೀಕರಣದ ಮೂಲಕ ಸಾರ್ವಜನಿಕ ಶಿಕ್ಷಣ ಹಾಗೂ ಕನ್ನಡ ಮಾಧ್ಯಮ ಶಾಲೆಗಳನ್ನು ಕೊನೆಗೊಳಿಸುವ ಮತ್ತು ರಾಜ್ಯದ ಭವಿಷ್ಯವಾಗಿರುವ ಎಳೆಯ ಮನಸ್ಸುಗಳೊಳಗೆ, ಕರ್ನಾಟಕದ ಸಮಗ್ರತೆಗೆ ಭಂಗ ಉಂಟುಮಾಡುವ ವಿಷವನ್ನು ಪ್ರಕ್ರಿಯೆಗಳು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಆರಂಭವಾಗಿವೆ. ಕನ್ನಡ ಭಾಷೆಯನ್ನು ಒಂದು ರಾಷ್ಟ್ರೀಯ ಭಾಷೆಯೆಂದು ಸಂವಿಧಾನ ಒಪ್ಪಿಕೊಂಡಿರುವಾಗ ಕನ್ನಡ ಹಾಗೂ ಅದರ ಸೋದರ ಭಾಷೆಗಳ ಮೇಲೆ ಮತ್ತೊಂದು ರಾಷ್ಟ್ರೀಯ ಭಾಷೆಯಾದ ಹಿಂದಿ ಭಾಷೆಯನ್ನು ಹೇರಲಾಗುತ್ತಿದೆ ಎಂದು ಹೇಳಿದ್ದಾರೆ.

ಕಾರ್ಪೋರೇಟ್ ಕಂಪನಿಗಳಿಗೆ ಕನ್ನಡದ ಅನ್ನದಾತರನ್ನು ನಗ್ನ ಲೂಟಿಗೊಳಪಡಿಸಲು ಮತ್ತು ದೌರ್ಜನ್ಯದ ಮೂಲಕ ಭೂಕಬಳಿಕೆ ನಡೆಸುವುದನ್ನು ಸಿಪಿಐ(ಎಂ) ಪಕ್ಷ ಉಗ್ರವಾಗಿ ಖಂಡಿಸುತ್ತದೆ ಮತ್ತು ಕಳೆದ ಒಂದು ಶತಮಾನದಿಂದ ಗಳಿಸಿದ ನಮ್ಮ ಶ್ರಮಿಕರ ಹಕ್ಕುಗಳನ್ನು ಕಿತ್ತುಕೊಂಡು ಅವರ ಮೇಲೆ ಗುಲಾಮಿತನ ಹೇರುವುದನ್ನು ಪಕ್ಷವು ಸಹಿಸುವುದಿಲ್ಲ.

ನೊಂದು, ನಾಡು-ನುಡಿಯ ದುಸ್ಥಿತಿಯ ಕುರಿತು ತೆರೆದುಕೊಂಡ ಕಾವ್ಯ ಹಾಗೂ ಸಾಹಿತ್ಯವನ್ನು ಮತ್ತು  ತೆರೆದುಕೊಂಡ ಬಾಯಿಗಳನ್ನು ಮುಚ್ಚಿಸಲಾಗುತ್ತಿದೆ. ಕೋಮು ದ್ವೇಷವನ್ನೇ ಜೀವನವನ್ನಾಗಿಸುತ್ತಾ, ಬೀದಿಗಿಳಿದ ಜನ ಚಳುವಳಿಗಳ ದಿಕ್ಕು ತಪ್ಪಿಸುವ, ಅವರ ಧ್ವನಿಯನ್ನಡಗಿಸುವ ಕೆಲಸವನ್ನು ದಾರಿ ತಪ್ಪಿದ ಯುವಜನರ ಪ್ರಧಾನ ವೃತ್ತಿಯನ್ನಾಗಿಸಲು ಹೊರಡುತ್ತಿರುವುದು ವಿಪರ್ಯಾಸದಿಂದ ಕೂಡಿದೆ.

ಇದನ್ನು ಓದಿ: ಜನ ಸಾಹಿತ್ಯ ಸಮ್ಮೇಳನ – ಔಚಿತ್ಯ ಪ್ರಸ್ತುತತೆಗಳ ನಡುವೆ

ಜಾತಿ ತಾರತಮ್ಯ, ಅಸ್ಪೃಶ್ಯಾಚರಣೆ, ಕೋಮುವಾದ ಕೋರೆ ದಾಡಿಗಳಿಗೆ ಕಾನೂನಿನ ರಕ್ಷಣೆ ನೀಡಿ ಮೊನಚು ಮಾಡಲಾಗಿದೆ. ʻಕುರುಡು ಕಾಂಚಾಣದ ಕ್ರೌರ್ಯದ ಕುಣಿತʼ ಕ್ಕೆ ಬೆಂಬಲ ನೀಡುತ್ತಿರುವುದನ್ನು ಸಿಪಿಐ(ಎಂ) ಪಕ್ಷ ಖಂಡಿಸುತ್ತದೆ ಎಂದು ಯು. ಬಸವರಾಜ ಅವರು ವಿವರಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ಇಂತಹ ಎಲ್ಲ ಜ್ವಲಂತ ಪ್ರಶ್ನೆಗಳಿಗೆ ಕಿವಿಯಾಗಿ ಸಮ್ಮೇಳನದ ಧ್ವನಿಯಾಗಬೇಕಿತ್ತು. ಕನ್ನಡ ನಾಡು, ನುಡಿಗಾಗಿ ನೈಜ ಕಾಳಜಿಯಿಂದ ಶ್ರಮಿಸುತ್ತಿರುವ ಬಹುತೇಕ ಪ್ರಮುಖ ಧ್ವನಿಗಳನ್ನು ಒಳಗೊಳ್ಳಬೇಕಿತ್ತು. ಕನ್ನಡಕ್ಕೆ ಜಾತಿ ಧರ್ಮಗಳ ತಾರತಮ್ಯವಿಲ್ಲ. ಇದಕ್ಕೆ ಕಳಂಕ ಬಾರದಂತೆ ಕ್ರಮ ವಹಿಸಬೇಕಿತ್ತು ಮತ್ತು ಸಂಕುಚಿತ ರಾಜಕಾರಣದ ಪೊರೆಯನ್ನೊದ್ದಿದೆ ಎಂಬ ಆಪಾದನೆಯಿಂದ ಕನ್ನಡ ಸಾಹಿತ್ಯ ಮುಕ್ತಗೊಳ್ಳಗೊಳ್ಳಬೇಕು ಎಂದು ಸಿಪಿಐ(ಎಂ) ಅಭಿಪ್ರಾಯ ವ್ಯಕ್ತಪಡಿಸಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *