ಫೆ.19ರಂದು ಡಿವೈಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಎ.ಎ. ರಹೀಮ್‌ ಅವರಿಂದ ಕಾಮಣ್ಣ ರೈ ಭವನ ನವೀಕೃತ ಕಟ್ಟಡ ಉದ್ಘಾಟನೆ

ಮಂಗಳೂರು: ತಾಲೂಕಿನ ಹರೇಕಳ ಗ್ರಾಮದಲ್ಲಿ ಗೇಣಿದಾರ ರೈತರ, ಹೆಂಚು, ನೇಯ್ಗೆ, ಬೀಡಿ ಕಾರ್ಮಿಕರ ಹೋರಾಟದ ನೇತೃತ್ವ ವಹಿಸಿ ಕಮ್ಯೂನಿಸ್ಟ್‌ ಪಕ್ಷವನ್ನು ಮುನ್ನಡೆಸಿದ್ದ ಹಿರಿಯ ಸಂಗಾತಿ ಕಡೆಂಜ ಕಾಮಣ್ಣ ರೈಗಳ ಸ್ಮರಣಾರ್ಥವಾಗಿ ಹರೇಕಳದಲ್ಲಿ ಕಾಂ. ಕಾಮಣ್ಣ ರೈ ಭವನ ಸಿದ್ದಗೊಂಡಿದೆ.

ನವೀಕೃತ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಫೆಬ್ರವರಿ 19 ರಂದು ಸಂಜೆ 4 ಗಂಟೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌(ಡಿವೈಎಫ್ಐ) ಉಳ್ಳಾಲ ವಲಯ ಕಾರ್ಯದರ್ಶಿ ಸುನೀಲ್ ತೇವುಲ ಪ್ರಕಟನೆ ನೀಡಿದ್ದು ಡಿವೈಎಫ್ಐ ಕಾರ್ಯಕರ್ತರು ಗ್ರಾಮಸ್ಥರ ಸಂಪೂರ್ಣ ಬೆಂಬಲದಿಂದ ಹಗಲಿರುಳು ದುಡಿದು ನಿರ್ಮಿಸಿದ ಕಾಂ.‌ ಕಾಮಣ್ಣ ರೈ ಭವನ ಉದ್ಘಾಟನೆಯನ್ನು ಡಿವೈಎಫ್ಐ ಅಖಿಲ ಭಾರತ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಎ ಎ ರಹೀಂ ನೆರವೇರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಡಿವೈಎಫ್‌ಐ ವತಿಯಿಂದ ಸುಭಾಶ್‌ ಚಂದ್ರಬೋಸ್‌ ಜನ್ಮದಿನ ಆಚರಣೆ

ಕಾರ್ಯಕ್ರಮದಲ್ಲಿ ಡಿವೈಎಫ್ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಕಾರ್ಮಿಕ ಮುಖಂಡ ಸುನೀಲ್ ಕುಮಾರ್ ಬಜಾಲ್, ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್, ಕಾರ್ಯದರ್ಶಿ ಸಂತೋಷ್ ಬಜಾಲ್, ಪಾವೂರು ಗ್ರಾಮ ಪಂಚಾಯತಿ ಮಾಜಿ ಸದಸ್ಯ  ವಿವೇಕ್ ರೈ, ಉದ್ಯಮಿ ಕಡೆಂಜ ಸುರಕ್ಷಿತ್ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿವೈಎಫ್ಐ ಉಳ್ಳಾಲ ವಲಯದ ಅಧ್ಯಕ್ಷರಾದ ರಫೀಕ್ ಹರೇಕಳ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪದ್ಮಶ್ರೀ ವಿಜೇತ ಹರೇಕಳ ಹಾಜಬ್ಬ ಮತ್ತು ಹೈನುಗಾರಿಕೆಯ ಸಾಧಕಿ ಮೈಮುನಾ ಅಬ್ದುಲ್ ಮಜೀದ್ ರಾಜ್ ಕಮಲ್ ಅವರನ್ನು ಸನ್ಮಾನಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಜೂಜುಕೇಂದ್ರಗಳು ಮುಚ್ಚುವವರೆಗೆ ಹಲವು ಹಂತದ ಹೋರಾಟಕ್ಕೆ ಡಿವೈಎಫ್‌ಐ ಕರೆ

ಕಟ್ಟಡ ಉದ್ಘಾಟನೆ ಸಂದರ್ಭ ಎಲ್ಲಾ ವಿಭಾಗದ ಯುವಜನರನ್ನು ಒಳಗೊಂಡು ಬೃಹತ್ ಸಾಮರಸ್ಯ ಸಮಾವೇಶ ಮತ್ತು ಉದ್ಘಾಟನೆ ಕಾರ್ಯಕ್ರಮವು ನಡೆಯಲಿದೆ ಮತ್ತು ಹರೇಕಳ ಕಡವಿನ ಬಳಿಯಿಂದ ನಡೆಯುವ ಆಕರ್ಷಕ ಯುವಜನ ಮೆರವಣಿಗೆಯಲ್ಲಿ ಜಿಲ್ಲೆಯ ಯುವಜನತೆ ಭಾಗವಹಿಸಬೇಕೆಂದು ಡಿವೈಎಫ್‌ಐ ಸಂಘಟನೆಯು ಕರೆ ನೀಡಿದೆ.

ಕಾಮ್ರೇಡ್ ಕಾಮಣ್ಣ ರೈ

ಕರಾವಳಿ ಜಿಲ್ಲೆಯಲ್ಲಿ ರೈತ-ಕಾರ್ಮಿಕರ ದುಡಿಯುವ ವರ್ಗದ ಚಳುವಳಿಯನ್ನು ಹರೇಕಳ ಪಾವೂರು ಗ್ರಾಮದಲ್ಲಿ ಭದ್ರ ಬುನಾದಿಯನ್ನು ಹಾಕಿದ್ದ ಹಲವರಲ್ಲಿ ಕಡೆಂಜ ಕಾ.ಕಾಮಣ್ಣ ರೈಗಳು ಪ್ರಮುಖರು.ಅವರ ಹೆಸರಿನಲ್ಲಿ ಹರೇಕಳ ಗ್ರಾಮದಲ್ಲಿ ನಿರ್ಮಾಣಗೊಂಡಿದ್ದ ಡಿವೈಎಫ್‌ಐ ಕಟ್ಟಡ ಕಳೆದ ಹಲವು ವರ್ಷಗಳಲ್ಲಿ ಊರಿನ ಜನತೆಯ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಪ್ರೀತಿಯ ಸೌಧವಾಗಿ ಪರಿವರ್ತನೆಗೊಂಡಿದೆ.

ಡಿವೈಎಫ್‌ಐ ಸಂಘಟನೆಯು 90 ರ ದಶಕದಲ್ಲಿ ಕಾಮಣ್ಣ ರೈ ನೆನಪಿನಲ್ಲಿ ಸ್ವಂತ ಕಟ್ಟಡವನ್ನು ಕಟ್ಟಿತು. ಈ ಕಟ್ಟಡ ನಂತರ ಗ್ರಾಮದ ಎಲ್ಲಾ ಜನಪರ ಹೋರಾಟಗಳ ಕೇಂದ್ರವಾಯಿತು. ಈಗ ಗ್ರಾಮದ ಹೊಸ ಪೀಳಿಗೆ ಡಿವೈಎಫ್ಐ ಸಂಘಟನೆಯಲ್ಲಿ ತೊಡಗಿಸಿಕೊಂಡಿದೆ. ಹೊಸಕಾಲದ ಅಗತ್ಯಗಳನ್ನು ಮನಗಂಡು ಹಳೆಯ ಕಟ್ಟಡದ ಜಾಗದಲ್ಲಿ ಹೊಸ ಕಟ್ಟಡ ಕಟ್ಟಲು ತೀರ್ಮಾನಿಸಿತು. ಗ್ರಾಮಸ್ಥರ ಪೂರ್ಣ ಬೆಂಬಲದಿಂದ ಅತ್ಯಂತ ತ್ವರಿತವಾಗಿ ಕಾಮಣ್ಣ ರೈ ನೆನಪಿನ ಭವನ ವಿಶಾಲವಾಗಿ ಎದ್ದು ನಿಂತಿದೆ. ಇದು ಮುಂದಿನ ದಿನಗಳಲ್ಲಿ ಗ್ರಾಮದ ವಿದ್ಯಾರ್ಥಿ, ಯುವಜನರನ್ನು ಆರೋಗ್ಯಕರವಾದ ವೈವಿಧ್ಯಮಯ ಚಟುವಟಿಕೆಗಳಲ್ಲಿ ತೊಡಗಿಸುವ ಮಾರ್ಗದರ್ಶನ ಕೇಂದ್ರವಾಗಿ, ಸರಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸುವ ಮಾಹಿತಿ ಕೇಂದ್ರವಾಗಿ ಕಾರ್ಯಾಚರಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಡಿವೈಎಫ್‌ಐ ನ ಚಟುವಟಿಕೆಗಳು ಊರಿನಲ್ಲಿ ಹಾಗೂ ಅಕ್ಕಪಕ್ಕದ ಪ್ರದೇಶಗಳಲ್ಲೂ ಮನೆಮಾತಾಗಿದೆ.ಚಟುವಟಿಕೆ ಚಳುವಳಿ ಹೋರಾಟಗಳನ್ನು ಇನ್ನಷ್ಟು ವಿಸ್ತರಿಸಲು ಊರಿನ ಸಮಸ್ತ ಜನತೆಯ ಸಹಕಾರದೊಂದಿಗೆ ಕಟ್ಟಡದ ನವೀಕರಣ ಪ್ರಕ್ರಿಯೆ ಪೂರ್ಣಗೊಂಡಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *