ಜೂನ್ 26 ಕ್ಕೆ ಮೀಸಲಾತಿ ಭ್ರಮೆ ಮತ್ತು ವಾಸ್ತವ ಕೃತಿ ಬಿಡುಗಡೆ

ಬೆಂಗಳೂರು : ನಿವೃತ್ತ ನ್ಯಾಯಮೂರ್ತಿ  ಹೆಚ್‌.ಎನ್.‌ ನಾಗಮೋಹನದಾಸ್‌ ಅವರ ಮೀಸಲಾತಿ ಭ್ರಮೆ ಮತ್ತು ವಾಸ್ತವ  ಕನ್ನಡ ಮತ್ತು ಇಂಗ್ಲೀಷ್‌ ಆವೃತ್ತಿಗಳ ಬಿಡುಗಡೆ ಸಮಾರಂಭವು ಜೂನ್‌ 26,2022 ಬೆಳಗ್ಗೆ 10: 30ಕ್ಕೆ ಆರಂಭಗೊಳ್ಳಲಿದೆ.

ಈ ಕಾರ್ಯಕ್ರಮವು ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದ್ದು, ಈ ಕಾರ್ಯಾಕ್ರಮದಲ್ಲಿ ಕೃತಿಯನ್ನು  ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಬಿಡುಗಡೆಮಾಡಲಿದ್ದಾರೆ. ಇನ್ನು ಮುಖ್ಯ ಅಥಿತಿಗಳಾಗಿ ಹಿರಿಯ ಸಾಹಿತಿ ದೇವನೂರು ಮಹದೇವ ಮತ್ತು ಪ್ರಸಿದ್ದ ಸಂಗೀತ ನಿರ್ದೇಶಕ ನಾದಬ್ರಹ್ಮಃ  ಹಂಸಲೇಖ ಹಾಗೂ ಸಂಸ್ಕೃತಿ ಚಿಂತಕರಾದಂತಹ ಬಂಜಗೆರೆ ಜಯಪ್ರಕಾಶ್‌. ಚಿಂತಕಿ ಮೀನಾಕ್ಷಿ ಬಾಳಿ, ಪತ್ರಕರ್ತ ಬಿ.ಎಂ.ಹನೀಫ್‌ ಭಾಗವಹಿಸಲಿದ್ದು, ನಿವೃತ್ತ ನ್ಯಾಯಮೂರ್ತಿ ಹೆಚ್. ಎನ್.‌ ನಾಗಮೋಹನದಾಸ್‌ ಮತ್ತು ಆರ್ಥಿಕ ತಜ್ಞ  ಟಿ.ಆರ್.ಚಂದ್ರಶೇಖರಮೂರ್ತಿ, ಬಿ. ರಾಜಶೇಕರಮೂರ್ತಿ, ಕಿಗ್ಗ ರಾಜಶೇಖರ್‌ ಮತ್ತು ಇತರರು ಉಪಸ್ಥಿತರಿರುತ್ತಾರೆ.

Donate Janashakthi Media

Leave a Reply

Your email address will not be published. Required fields are marked *