‘ಜೈಭೀಮ್’ ಖ್ಯಾತಿಯ ಸೂರಿಯ ಅವರಿಂದ  ರೂ.15 ಲಕ್ಷ ಕೊಡುಗೆ

ಚೆನ್ನೈ :  ವ್ಯಾಪಕ ಪ್ರಶಂಸೆ ಗಳಿಸಿರುವ ‘ಜೈಭೀಮ್’ ಚಿತ್ರದ ನಟ ಮತ್ತು ನಿರ್ಮಾಪಕ ಸೂರಿಯ ಅವರು ಪೋಲೀಸರ ಚಿತ್ರಹಿಂಸೆಗೆ ಬಲಿಯಾದ ರಾಜಕಣ್ಣುರವರ ಪತ್ನಿ ಪಾರ್ವತಿ ಅಮ್ಮಾಳ್‍ಗೆ 15ಲಕ್ಷ ರೂ.ನ ಒಂದು ಚೆಕ್ಕನ್ನು ನವಂಬರ್ 16ರಂದು ನೀಡಿದರು. ಈ ವೇಳೆಯಲ್ಲಿ ತಮಿಳುನಾಡಿನ ಹಿರಿಯ ರಾಜಕಾರಣಿ ಮತ್ತು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‍ ಬ್ಯುರೊ ಸದಸ್ಯರಾದ ಜಿ.ರಾಮಕೃಷ್ಣನ್ ಮತ್ತು ರಾಜ್ಯ ಕಾರ್ಯದರ್ಶಿ ಕೆ.ಬಾಲಕೃಷ್ಣನ್ ಹಾಜರಿದ್ದರು. ಅವರು ಪಕ್ಷದ ತಮಿಳುನಾಡು ರಾಜ್ಯಸಮಿತಿಯ ಪರವಾಗಿ ಸೂರಿಯ ಅವರಿಗೆ ಧನ್ಯವಾದ ಅರ್ಪಿಸಿದರು. ಈ ಚಿತ್ರದಲ್ಲಿನ ಅಂಶಗಳನ್ನೆತ್ತಿ  ಜಾತ್ಯಂಧರು ಮತ್ತು ಬಲಪಂಥೀಯರ ದಾಳಿಗಳ ವಿರುದ್ಧ ಪಕ್ಷ  ಅವರ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಅವರು ಹೇಳಿದರು.

ತಮಿಳುನಾಡು ರಾಜ್ಯ ಸರಕಾರ, ಪಿಎಂಕೆ ಮತ್ತು ಬಲಪಂಥೀಯ ಗುಂಪುಗಳ ಬೆದರಿಕೆಯ ನಂತರ, ಸೂರಿಯ ರವರ ನಿವಾಸಕ್ಕೆ ಭದ್ರತೆ ಒದಗಿಸಿದ್ದಾರೆ ಎಂದು ವರದಿಯಾಗಿದೆ.

Donate Janashakthi Media

Leave a Reply

Your email address will not be published. Required fields are marked *