ಮುಡಾ ಹಗರಣ ಬೆನ್ನಲ್ಲೇ ಮೈಸೂರು ಜಿಲ್ಲಾಧಿಕಾರಿ ಸೇರಿ 21 ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಮುಡಾ ಹಗರಣವನ್ನು ಸರ್ಕಾರದ ಗಮನಕ್ಕೆ ತಂದಿದ್ದ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೇರಿದಂತೆ 21 ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮೈಸೂರು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರನ್ನು ಪ್ರವಾಸೋದ್ಯಮ ನಿರ್ದೇಶಕರಾಗಿ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಮೈಸೂರು ಜಿಲ್ಲಾಧಿಕಾರಿಯಾಗಿ ಲಕ್ಷ್ಮೀಕಾಂತ್​ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ. ಲಕ್ಷ್ಮಿಕಾಂತ್ ಅವರು ಈ ಹಿಂದೆ ಮೈಸೂರು ಪಾಲಿಕೆ ಆಯುಕ್ತರಾಗಿದ್ದರು.

ಕೆ.ವಿ.ರಾಜೇಂದ್ರ ಅವರು 2022ರ ಅಕ್ಟೋಬರ್ 27 ರಂದು ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಎರಡು ವರ್ಷಕ್ಕೂ ಮುನ್ನವೇ ಅವರನ್ನು ದಿಢೀರ್ ವರ್ಗಾವಣೆ ಮಾಡಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಲೋಕಸಭೆ ಚುನಾವಣೆ ಮುಗಿದ ಬಳಿಕ ಕರ್ನಾಟಕ ಸರ್ಕಾರದ ಆಡಳಿತ ವರ್ಗದಲ್ಲಿ ಬಹಳ ದೊಡ್ಡ​ ಬದಲಾವಣೆ ನಡೆಯುತ್ತಿದೆ. ಸಿದ್ದರಾಮಯ್ಯ ಸರ್ಕಾರ 25 ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಇದೀಗ, ಮತ್ತೆ ಕರ್ನಾಟಕ ಸರ್ಕಾರ 21 ಐಎಎಸ್ (IAS) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇದರ ಹಿಂದೆ ಏನೋ ಹುನ್ನಾರ ಇದೆ ಎಂಬ ಚರ್ಚೆಗಳು ಕೇಳಿ ಬರುತ್ತಿದೆ.

ವರ್ಗಾವಣೆಯಾದ ಇತರ ಐಎಎಸ್ ಅಧಿಕಾರಿಗಳು, ನಿಯುಕ್ತಗೊಂಡ ಇಲಾಖೆಗಳು ಹೀಗಿವೆ

  1. ಡಾ.ರಾಮ್ ಪ್ರಸಾತ್ ಮನೋಹರ್ ವಿ.-ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು.
  2. ನಿತೇಶ್ ಪಾಟೀಲ್:ನಿರ್ದೇಶಕರು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಇಲಾಖೆ, ಬೆಂಗಳೂರು.
  3. ಡಾ.ಅರುಂಧತಿ ಚಂದ್ರಶೇಖರ್ –ಆಯುಕ್ತೆ, ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು.
  4. ಜ್ಯೋತಿ ಕೆ.-ಆಯುಕ್ತೆ, ಜವಳಿ ಅಭಿವೃದ್ಧಿ ಮತ್ತು ಕೈಮಗ್ಗ ಮತ್ತು ಜವಳಿ ಇಲಾಖೆ, ಬೆಂಗಳೂರು.
  5. ಶ್ರೀಧರ ಸಿ.ಎನ್.-ನಿರ್ದೇಶಕರು, ಸಾಮಾಜಿಕ ಲೆಕ್ಕ ಪರಿಶೋಧನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು.
  6. ರಾಮ್ ಪ್ರಸಾತ್ ಮನೋಹರ್– ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಬೆಂಗಳೂರು.
  7. ಚಂದ್ರಶೇಖರ ನಾಯಕ ಎಲ್.– ಆಯುಕ್ತರು, ವಾಣಿಜ್ಯ ತೆರಿಗೆಗಳ ಹೆಚ್ಚುವರಿ (ಜಾರಿ), ಬೆಂಗಳೂರು.
  8. ವಿಜಯಮಹಾಂತೇಶ ಬಿ.ದಾನಮ್ಮನವರ್– ಉಪ ಆಯುಕ್ತ, ಹಾವೇರಿ ಜಿಲ್ಲೆ
  9. ಗೋವಿಂದ ರೆಡ್ಡಿ– ಉಪ ಆಯುಕ್ತ, ಬೀದರ್ ಜಿಲ್ಲೆ.
  10. ರಘುನಂದನ್ ಮೂರ್ತಿ-ಆಯುಕ್ತರು, ಖಜಾನೆಗಳು ಮತ್ತು ಲೆಕ್ಕಪತ್ರ ಇಲಾಖೆ, ಬೆಂಗಳೂರು.
  11. ಡಾ. ಗಂಗಾಧರಸ್ವಾಮಿ ಜಿ.ಎಂ:ಉಪ ಆಯುಕ್ತ, ದಾವಣಗೆರೆ ಜಿಲ್ಲೆ.
  12. ನಿತೀಶ್ ಕೆ.-ಉಪ ಆಯುಕ್ತ, ರಾಯಚೂರು ಜಿಲ್ಲೆ.
  13. ಮೊಹಮ್ಮದ್ ರೋಶನ್-ಉಪ ಆಯುಕ್ತ, ಬೆಳಗಾವಿ ಜಿಲ್ಲೆ.
  14. ಶಿಲ್ಪಾ ಶರ್ಮಾ-ಉಪ ಆಯುಕ್ತೆ, ಬೀದರ್ ಜಿಲ್ಲೆ.
  15. ಡಾ ದಿಲೀಶ್ ಸಸಿ-ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಸಿಟಿಜನ್ ಸೇವೆಗಳ ಎಲೆಕ್ಟ್ರಾನಿಕ್ ವಿತರಣೆ (EDCS), ಸಿಬ್ಬಂದಿ ಇಲಾಖೆ ಮತ್ತು ಆಡಳಿತಾತ್ಮಕ ಸುಧಾರಣೆಗಳು (ಇ-ಆಡಳಿತ) ಕೇಂದ್ರ, ಬೆಂಗಳೂರು.
  16. ಲೋಖಂಡೆ ಸ್ನೇಹಲ್ ಸುಧಾಕರ್-ನಿರ್ದೇಶಕ, ಕರ್ನಾಟಕ ವಿದ್ಯುತ್ ವ್ಯವಸ್ಥಾಪಕ ಕಾರ್ಖಾನೆ ಲಿಮಿಟೆಡ್.
  17. ಶ್ರೀರೂಪ-ಆಯುಕ್ತೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೆಂಗಳೂರು, ನಿರ್ದೇಶರು ಕರ್ನಾಟಕ ರಾಜ್ಯ ರೇಷ್ಮೆ ಕೃಷಿ ಸಂಶೋಧನೆ ಅಭಿವೃದ್ಧಿ ಸಂಸ್ಥೆ
  18. ಗಿಟ್ಟೆ ಮಾಧವ್ ವಿಠ್ಠಲ್ ರಾವ್-ಪ್ರಧಾನ ವ್ಯವಸ್ಥಾಪಕರು, (ಪುನರ್ವಸತಿ ಮತ್ತು ಪುನರ್ವಸತಿ), ಬಾಗಲಕೋಟೆ ಜಿಲ್ಲೆ.
  19. ಹೇಮಂತ್ ಎನ್.-ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಶಿವಮೊಗ್ಗ.
  20. ಮೊಹಮ್ಮದ್ ಅಲಿ ಅಕ್ರಮ್ ಶಾ-ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ವಿಜಯನಗರ ಜಿಲ್ಲೆ.

 

Donate Janashakthi Media

Leave a Reply

Your email address will not be published. Required fields are marked *