ಬೆಂಗಳೂರು : ಹನಿಟ್ರ್ಯಾಪ್ ಹಗರಣದಿಂದ ಕರ್ನಾಟಕ ವಿಧಾನಸಭೆಯ ಅಧಿವೇಶನದಲ್ಲಿ ಕಲಹ ಉಂಟಾಯಿತು.
ವಿಪಕ್ಷದ ಸದಸ್ಯರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ವಿಧಾನಸಭೆಯ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಈ ವಿಚಾರವಾಗಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಬೇಡಿಕೆ ಇಟ್ಟರು.
ಇದನ್ನು ಓದಿ :- ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಜಿಯೋ ಮತ್ತು ಏರ್ಟೆಲ್
ಈ ಸಮಯದಲ್ಲಿ, ವಿರೋಧ ಪಕ್ಷದ ನಾಯಕರು ಸರ್ಕಾರದ ನಿರ್ಲಕ್ಷ್ಯವನ್ನು ವಿರುದ್ಧವಾಗಿ ಟೀಕಿಸಿದರು. ಬಿಜೆಪಿ ಶಾಸಕ ಅಶೋಕ್ ಹಾಗೂ ಸುನಿಲ್ ಕುಮಾರ್ ಸರ್ಕಾರವನ್ನು ಗಂಭೀರ ಆರೋಪಗಳಲ್ಲಿ ತರಾಟೆಗೆ ತೆಗೆದುಕೊಂಡರು. ಸಚಿವರ ವಿರುದ್ಧ ಹನಿಟ್ರ್ಯಾಪ್ ಆಕ್ಷೇಪಣೆಗಳನ್ನು ಮುಂದುವರಿಸಿದರೂ ಸರ್ಕಾರದಿಂದ ಯಾವುದೇ ಸ್ಪಷ್ಟ ಉತ್ತರ ನೀಡಲಾಗಿಲ್ಲ.
ಇದನ್ನು ಓದಿ :-ಬಜೆಟ್ ಅಂಗೀಕಾರದ ಮುನ್ಸೂಚನೆ: ಬಿಜೆಪಿಯಿಂದ ಸಂಸದರಿಗೆ ಮೂರು ಸಾಲಿನ ವಿಪ್!
ಹನಿಟ್ರ್ಯಾಪ್ ಹಗರಣವು ರಾಜ್ಯದಲ್ಲಿ ರಾಜಕೀಯ ತಿರುವುಗಳನ್ನು ಉಂಟುಮಾಡಿದ್ದು, ಪ್ರತಿಪಕ್ಷಗಳು ಸದಾ ಈ ವಿಚಾರವನ್ನು ಮುನ್ನಡೆಸಲು ಮುಂದಾಗಿವೆ. ವಿಧಾನಸಭೆಯ ಅವಧಿಯ ಕೊನೆ ದಿನದಂದು ಹೋರಾಟದ ಮೂಲಕ ಈ ವಿಚಾರವನ್ನು ಹೆಚ್ಚಿಸಲು ವಿಪಕ್ಷಗಳು ಪ್ರಾರಂಭಿಸಿದ್ದು, ಸ್ಫೀಕರ್ಗ ಹಾಗೂ ಮುಖ್ಯಮಂತ್ರಿಗಳ ಮೇಲೆ ಪೇಪರ್ ಎಸೆದು ಕೋಲಾಹಲ ಸೃಷ್ಟಿಯಾಯಿತು.