ಹಿರಿಯ ರೈತ ನಾಯಕರ ನಿಧನ: ಸಂಯುಕ್ತ ಹೋರಾಟ-ಕರ್ನಾಟಕ ಕಂಬನಿ

ಬೆಂಗಳೂರು: ಕರ್ನಾಟಕ ರಾಜ್ಯ ರೈತ ಸಂಘ ಕಾರ್ಯಾಧ್ಯಕ್ಷರಾದ ರಾಮು ಹಾಗೂ ಹಿರಿಯ ಉಪಾಧ್ಯಕ್ಷರಾದ ಜಿ.ಟಿ.ರಾಮಸ್ವಾಮಿರವರ ನಿಧನರಾಗಿರುವುದು ಅಘಾತಕಾರಿ ಹಾಗೂ ರಾಜ್ಯದ ರೈತ ಚಳುವಳಿಗೆ ಆದ ನಷ್ಟ ಎಂದು ಸಂಯುಕ್ತ ಹೋರಾಟ-ಕರ್ನಾಟಕವು ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಇದನ್ನು ಓದಿ: ರಸ್ತೆ ಅಪಘಾತ ರೈತ ನಾಯಕರ ಸಾವು

ನರಗುಂದ ರೈತ ಬಂಡಾಯ ಹುತಾತ್ಮ ದಿನಾಚರಣೆಯಲ್ಲಿ ಭಾಗವಹಿಸಿ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಆದ ರಸ್ತೆ ಅಪಘಾತದಿಂದ ಈ ಇಬ್ಬರೂ ರೈತ ನಾಯಕರು ನಿಧನ ಹೊಂದಿರುವುದು ರಾಜ್ಯ ರೈತ ಚಳುವಳಿ ಸಕ್ರೀಯ ಮುಖಂಡರನ್ನು ಕಳೆದುಕೊಂಡಂತಾಗಿದೆ ಎಂದು ಸಂಯುಕ್ತ ಹೋರಾಟ ಕರ್ನಾಟಕ ತನ್ನ ಅಪಾರ ದುಃಖ ವ್ಯಕ್ತಪಡಿಸಿದೆ.

ನಿರಂತರವಾಗಿ ರೈತ ಹೋರಾಟದಲ್ಲಿ ಹಾಗೂ ಕೃಷಿ ಕಾಯ್ದೆಗಳ ವಿರುದ್ಧದ ಸಂಯುಕ್ತ ರೈತ ಆಂದೋಲನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಸಕ್ರೀಯರಾಗಿದ್ದ ಈ ಇಬ್ಬರೂ ಹಿರಿಯ ನಾಯಕರ ಸಾವಿನಿಂದ ಅಘಾತಕ್ಕೆ ಒಳಗಾಗಿರುವ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಸಮಿತಿಗೆ ಹಾಗೂ ಅಪಾರ ಬಂಧು ಬಳಗ ಕ್ಕೆ ಸಂಯುಕ್ತ ಹೋರಾಟ-ಕರ್ನಾಟಕದ ಪರವಾಗಿ ಸಂಯೋಜಕರಾದ ಬಡಗಲಪುರ ನಾಗೇಂದ್ರ ಹಾಗೂ ಜಿ.ಸಿ.ಬಯ್ಯಾರೆಡ್ಡಿ ಅವರು ಸಂತಾಪವನ್ನು ಸೂಚಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *