ಹಲ್ಲಾ ಬೋಲ್ ಪುಸ್ತಕ ಬಿಡುಗಡೆ

ಧಾರವಾಡ: ಧಾರವಾಡದ ಸಾಹಿತ್ಯ ಭವನದಲ್ಲಿ “ಹಲ್ಲಾ ಬೋಲ್ ”  ಸಫ್ದರ್ ಹಾಶ್ಮಿ ಸಾವು ಮತ್ತು ಬದುಕು ” ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.  ಕಾರ್ಯಕ್ರಮವನ್ನು ಸಮುದಾಯ ಕರ್ನಾಟಕ ಸಂಘಟನೆ ಆಯೋಜಿಸಿತ್ತು.

ಪದ್ಮಶ್ರೀ ಡಾ. ಜಿ.ಎನ್.ದೇವಿ ಪುಸ್ತಕವನ್ನು ಬಿಡುಗಡೆ ಮಾಡಿದರು. ಪುಸ್ತಕ ಕುರಿತು ಡಾ. ಶ್ಯಾಮಸುಂದರ ಬಿದರಕುಂದಿ ಮಾತನಾಡಿದರು.
“ವರ್ತಮಾನಗಳ ಬಿಕ್ಕಟ್ಟುಗಳೆದುರು ಬೀದಿನಾಟಕಗಳ ಸಾಧ್ಯತೆಗಳು” ಕುರಿತು ವಿಮಲಾ ಕೆ.ಎಸ್.ಮಾತನಾಡಿದರು.

ಸಂವಾದದಲ್ಲಿ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಡಾ. ಶಿವಾನಂದ ಶೆಟ್ಟರ, ಪ್ರಕಾಶ ಉಡಿಕೇರಿ, ಮಹಾದೇವ ಹಡಪದ ಅಭಿಪ್ರಾಯ ಹಂಚಿಕೊಂಡರು.
ಬಿ.ಐ.ಈಳಿಗೇರ ಅಧ್ಯಕ್ಷತೆ ವಹಿಸಿದ್ದರು.
ಕಾರ್ಮಿಕನೊಬ್ಬನ ಸಹಜ ಸಾವು ಬೀದಿನಾಟಕ ಪ್ರದರ್ಶನ ನಡೆಯಿತು.

Donate Janashakthi Media

Leave a Reply

Your email address will not be published. Required fields are marked *