ಗೌರಿ ಲಂಕೇಶ್‌ ಹೆಸರಿನಲ್ಲಿ ವಲಸೆ ಕಾರ್ಮಿಕರಿಗೆಗಾಗಿ ಉಚಿತ ಅಂಬುಲೆನ್ಸ್‌ ಸೇವೆ

ಬೆಂಗಳೂರು: ಕನ್ನಡದ ಹೆಸರಾಂತ ದಿಟ್ಟ ಪತ್ರಕರ್ತೆ ಹುತಾತ್ಮ ಗೌರಿ ಲಂಕೇಶ್‌ ರವರ ಹೆಸರಿನಲ್ಲಿ ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದಿಂದ ಬೆಂಗಳೂರಿಗೆ ವಲಸೆ ಬಂದು ನೆಲೆಸಿರುವ ಬಡ ವಲಸೆ ಕಾರ್ಮಿಕರಿಗೆ ಅನುಕೂಲವಾಗಲೆಂದು ಉಚಿತ ಅಂಬುಲೆನ್ಸ್‌ ಸೇವೆ ಆರಂಭವಾಗಿದೆ.

ಅಖಿಲ ಭಾರತ ಶ್ರಮಿಕ ಸ್ವರಾಜ್‌ ಕೇಂದ್ರ-ಕರ್ನಾಟಕ ವತಿಯಿಂದ ಈ ಸೇವೆಯನ್ನು ಆರಂಭಿಸಲಾಗಿದ್ದು, ಅಂಬುಲೆನ್ಸ್‌ ಸೇವೆಯನ್ನು ಗೌರಿ ಲಂಕೇಶ್‌ ರವರ ಸಹೋದರಿ ಸಿನಿಮಾ ನಿರ್ದೇಶಕಿ ಕವಿತಾ ಲಂಕೇಶ್‌ ಚಾಲನೆ ನೀಡಿದರು.

Donate Janashakthi Media

Leave a Reply

Your email address will not be published. Required fields are marked *