ಭೋಪಾಲ್: ಸರ್ಕಾರಿ ಶಾಲಾ ಮಕ್ಕಳು ತಟ್ಟೆಗಳ ಬದಲಿಗೆ ಕಾಗದದ ತುಂಡುಗಳ ಮೇಲೆ ಊಟ ಮಾಡುತ್ತಿರುವ ಘಟನೆ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲೆಡೆ ಹರಿದಾಡುತ್ತಿದ್ದೂ, ಮಾಹತಿಗಳ ಪ್ರಕಾರ ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿ ನಡೆದಿರುವುದಾಗಿ ತಿಳಿದು ಬಂದಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಈ ಕ್ಲಿಪ್ನಲ್ಲಿ ವಿಜಯಪುರ ಬ್ಲಾಕ್ನ ಹುಲ್ಪುರ್ ಗ್ರಾಮದ ಮಧ್ಯಮ ಶಾಲೆಯ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತಿರುವುದನ್ನು ತೋರಿಸಲಾಗಿದೆ.
ಇದನ್ನೂ ಓದಿ: ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಕಬ್ಬು ಬೆಳೆಗಾರರ ಸಭೆ
ಅವರು ಕಾಗದದ ತುಂಡುಗಳಲ್ಲಿ ಬಡಿಸಿದ ಆಹಾರವನ್ನು ತಿನ್ನುತ್ತಿದ್ದಾರೆ. ಮಕ್ಕಳು ಯಾವುದೇ ಆಶ್ರಯವಿಲ್ಲದೆ ಶಾಲೆಯ ಕಾಂಪೌಂಡ್ ನೆಲದ ಮೇಲೆ ಕುಳಿತು ತಟ್ಟೆಗಳ ಬದಲಿಗೆ ಹರಿದ ಕಾಗದದ ತುಂಡುಗಳಿಂದ ಊಟ ಮಾಡುವುದನ್ನು ಸಹ ವೀಡಿಯೊ ತೋರಿಸುತ್ತದೆ.
ವಿಷಯ ಬೆಳಕಿಗೆ ಬಂದ ನಂತರ, ಶಿಯೋಪುರ್ ಜಿಲ್ಲಾ ಕಲೆಕ್ಟರ್ ಅರ್ಪಿತ್ ವರ್ಮಾ ಅವರು ತಕ್ಷಣದ ತನಿಖೆಗೆ ಆದೇಶಿಸಿದರು. ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಘಟನೆಯನ್ನು ದೃಢಪಡಿಸಿದರು.
ಈ ಸಂಬಂಧ ಶಾಲಾ ಪ್ರಾಂಶುಪಾಲರಿಗೆ ಶೋ-ಕಾಸ್ ನೋಟಿಸ್ ನೀಡಲಾಯಿತು. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪೌಷ್ಟಿಕ ಮತ್ತು ಆರೋಗ್ಯಕರ ಊಟವನ್ನು ಒದಗಿಸುವ ಗುರಿಯನ್ನು ಹೊಂದಿರುವ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ (PM ಪೋಷಣ್) ಯೋಜನೆಯ ಅನುಷ್ಠಾನದಲ್ಲಿನ ಲೋಪದೋಷಗಳನ್ನು ಈ ಘಟನೆ ಬಹಿರಂಗಪಡಿಸಿದೆ.
ಇದನ್ನೂ ನೋಡಿ: ಕಾರ್ಮಿಕರ ಮಕ್ಕಳ ʼಶಿಕ್ಷಾದೀಪʼ ಸಿoಘ್ವಿ ಚಾರಿಟೇಬಲ್ ಟ್ರಸ್ಟ್ Janashakthi Media
