“ಇದು ಕೇವಲ ಒಂದು ಗಡಿಯತ್ತ ನಡಿಗೆಯಲ್ಲ, ಇದು ವಿಶ್ವದ ಆತ್ಮಸಾಕ್ಷಿಯ ಕಡೆಗೆ ಒಂದು ನಡಿಗೆ, ನೇರ ಕಾರ್ಯಾಚರಣೆಯ ಶಕ್ತಿಯನ್ನು ಪುನರುಜ್ಜೀವನಗೊಳಿಸುವ ನಡಿಗೆ”
50 ಕ್ಕೂ ಹೆಚ್ಚು ದೇಶಗಳ ಕಾರ್ಮಿಕ ಸಂಘಗಳು, ಸೌಹಾರ್ದ ಚಳುವಳಿಗಳು ಮತ್ತು ಮಾನವ ಹಕ್ಕುಗಳ ಸಂಘಟನೆಗಳನ್ನು ಒಳಗೊಂಡ ಅಂತರರಾಷ್ಟ್ರೀಯ ಮೈತ್ರಿಕೂಟ ಕಾಲ್ನಡಿಗೆಯಲ್ಲಿ ಗಾಜಾ ಪಟ್ಟಿಯನ್ನು ಪ್ರವೇಶಿಸುವ ಒಂದು ಕಾರ್ಯಕ್ರಮವನ್ನು ಪ್ರಾರಂಭಿಸಿವೆ. ಗಾಜಾ ಪಟ್ಟಿಗೆ ಇಸ್ರೇಲ್ ಹಾಕಿರುವ ದಿಗ್ಬಂಧನವನ್ನು ಕೊನೆಗೊಳಿಸಲು ಮತ್ತು ಕ್ಷಾಮ ಮತ್ತು ನಿರಂತರ ಬಾಂಬ್ ದಾಳಿಯ ನಡುವೆ ಗಾಜಾ ನಿವಾಸಿಗಳು ಅನುಭವಿಸುತ್ತಿರುವ ದುರಂತ ಪರಿಸ್ಥಿತಿಗಳ ಮೇಲೆ ಬೆಳಕು ಚೆಲ್ಲಲು ಕೈರೋದಿಂದ ರಫಾ ಕ್ರಾಸಿಂಗ್ ವರೆಗೆ ನಡೆಯುವ ಕಾಲ್ನಡಿಗೆ ಜಾಥಾಕ್ಕೆ ಸಾವಿರಾರು ಅಂತರರಾಷ್ಟ್ರೀಯ ಸ್ವಯಂಸೇವಕರು ಸಜ್ಜುಗೊಳ್ಳುತ್ತಿದ್ದಾರೆ. ನರಮೇಧ
ಕೃಪೆ: ಪೀಪಲ್ಸ್ ಡಿಸ್ಪ್ಯಾಚ್
“ಗ್ಲೋಬಲ್ ಗಾಜಾ ಮಾರ್ಚ್” ( ಜಾಗತಿಕ ಗಾಜಾ ಜಾಥಾ) ಎಂಬ ಈ ಅಭಿಯಾನವು ಪ್ಯಾಲೆಸ್ಟೈನ್ನೊಂದಿಗಿನ ಅಂತರರಾಷ್ಟ್ರೀಯ ಸೌಹಾರ್ದ ಚಳುವಳಿಯಲ್ಲಿ ಒಂದು ಮಹತ್ವದ ಕ್ಷಣ ಎನ್ನಲಾಗಿದೆ. ಗಾಜಾದಲ್ಲಿನ ಕ್ಷಾಮವನ್ನು ಕೊನೆಗೊಳಿಸುವುದು, ರಫಾ ಕ್ರಾಸಿಂಗ್ನಲ್ಲಿ ತಿಂಗಳುಗಟ್ಟಲೆ ನಿಲ್ಲಿಸಲ್ಪಟ್ಟಿರುವ ಸಾವಿರಾರು ನೆರವು ಟ್ರಕ್ಗಳ ಪ್ರವೇಶವನ್ನು ಸುಗಮಗೊಳಿಸುವುದು, ಸ್ಥಿರ ಮತ್ತು ಶಾಶ್ವತ ಮಾನವೀಯ ಪ್ರವೇಶವನ್ನು ಸ್ಥಾಪಿಸುವುದು, ಇಸ್ರೇಲ್ನ ಅಪರಾಧಗಳನ್ನು ಬಯಲಿಗೆಳೆಯುವುದು ಮತ್ತು ಇದಕ್ಕೆ ಕಾರಣರಾಗಿರುವವರ ಹೊಣೆಗಾರಿಕೆಯನ್ನು ಗ್ರಹಿಸುವುದು ಈ ಜಾಗತಿಕ ಮೆರವಣಿಗೆಯ ಪ್ರಮುಖ ಉದ್ದೇಶಗಳು ಎನ್ನಲಾಗಿದೆ. ನರಮೇಧ
ಕಳೆದ 20 ತಿಂಗಳುಗಳಿಂದ, ಇಸ್ರೇಲ್ ಗಾಜಾ ಜನರ ವಿರುದ್ಧ ನರಮೇಧವನ್ನು ನಡೆಸುತ್ತಿದೆ, ಅದರ ಎದುರು ಅಂತರರಾಷ್ಟ್ರೀಯ ಮೌನವೆಂದರೆ ಅದರಲ್ಲಿ ಶಾಮೀಲಾದಂತೆಯೇ- ಮತ್ತು ಪ್ರಪಂಚದಾದ್ಯಂತದ ಜನರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಾರೆ ಎಂಬ ಸ್ಪಷ್ಟ ಸಂದೇಶದೊಂದಿಗೆ ಕಾರ್ಮಿಕ ಸಂಘಗಳು, ಹಕ್ಕುಗಳ ಗುಂಪುಗಳು, ವೈದ್ಯಕೀಯ ವಲಯಗಳು ಮತ್ತು ನಾಗರಿಕ ಸಮಾಜದಿಂದ ಬಂದ ಸಾವಿರಾರು ಮಂದಿ ಒಗ್ಗೂಡಿದ್ದಾರೆ. ನರಮೇಧ
ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಅಪಘಾತ: ಬದುಕುಳಿದ ಏಕೈಕ ವ್ಯಕ್ತಿ
‘ಜಾಗತಿಕ ಗಾಜಾ ಜಾಥಾ’ದ ಅಂತರರಾಷ್ಟ್ರೀಯ ಸಮಿತಿಯ ಸದಸ್ಯರಾದ ಸೈಫ್ ಅಬು ಕೆಶ್ಕ್, ಬ್ರೇಕ್ಥ್ರೂ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ, ಪ್ಯಾಲೆಸ್ಟೀನಿಯನ್ ಜನರ ವಿರುದ್ಧ ನಡೆಯುತ್ತಿರುವ ನರಮೇಧವನ್ನು ನಿಲ್ಲಿಸುವುದು, ಬೇಷರತ್ತಾಗಿ ಮತ್ತು ತಕ್ಷಣದ ಮಾನವೀಯ ನೆರವು ಲಭ್ಯವಾಗುವಂತೆ ನೋಡಿಕೊಳ್ಳುವುದು ಮತ್ತು ಗಾಜಾದ ಮೇಲೆ ವಿಧಿಸಲಾದ ಅಮಾನವೀಯ ದಿಗ್ಬಂಧನವನ್ನು ತೆಗೆದುಹಾಕುವಂತೆ ಒತ್ತಾಯಿಸುವುದು ಈ ಮೆರವಣಿಗೆಯ ಉದ್ದೇಶವಾಗಿದೆ ಎಂದು ಹೇಳಿದರು. ಈ ಉಪಕ್ರಮವು ಸಂಪೂರ್ಣವಾಗಿ ಮಾನವೀಯವಾಗಿದೆ, ಯಾವುದೇ ರಾಜಕೀಯ ಸಂಬಂಧಗಳು ಅಥವಾ ಅಧಿಕೃತ ಪ್ರಾಯೋಜಕತ್ವವಿಲ್ಲದೆ, ಎಲ್ಲಾ ಭಾಗವಹಿಸುವವರು ಸ್ವಯಂಸೇವಕರಾಗಿ ಮತ್ತು ಸ್ವಂತ ಹಣದಿಂದ ದರಲ್ಲಿ ಪಾಲ್ಗೊಂಡಿದ್ದಾರೆ, ಇದು ಜಾಗತಿಕ ಸೌಹಾರ್ದವನ್ನು ಬಲಪಡಿಸುವುದು ಮತ್ತು ಶಾಮೀಲಾಗಿರುವ ಅಥವಾ ಮೌನವಾಗಿರುವ ಸರ್ಕಾರಗಳ ಮೇಲೆ ಸಾಮೂಹಿಕ ಒತ್ತಡ ತರುವ ವಿಶಾಲ ಪ್ರಯತ್ನದ ಭಾಗವಾಗಿದೆ ಎಂದು ಅವರು ಒತ್ತಿ ಹೇಳಿದರು. ನರಮೇಧ
ಕೈರೋದಿಂದ ರಫಾಗೆ
ವಿವಿಧ ದೇಶಗಳ ಸ್ವಯಂಸೇವಕರು ಜೂನ್ 12 ರಂದು ಈಜಿಪ್ಟ್ನ ರಾಜಧಾನಿ ಕೈರೋಗೆ ಆಗಮಿಸಿ ನಂತರ ಅರಿಶ್ ನಗರಕ್ಕೆ ಪ್ರಯಾಣಿಸುತ್ತಾರೆ, ಅಲ್ಲಿಂದ ಅವರು ಜೂನ್ 15 ರಂದು ರಫಾಗೆ ತಮ್ಮ ಕಾಲ್ನಡಿಗೆಯನ್ನು ಪ್ರಾರಂಭಿಸುತ್ತಾರೆ. ರಫಾವನ್ನು ತಲುಪುವುದು ಮಾತ್ರವಲ್ಲದೆ, ಅದನ್ನು ತೆರೆಯಲು ಮತ್ತು ನರಳುತ್ತಿರುವ ಪ್ಯಾಲೆಸ್ಟೇನಿಯನ್ನರಿಗೆ ಬಂದಿರುವ ನೆರವಿನ ಸಾಮಗ್ರಿಗಳ ಪ್ರವೇಶಕ್ಕೆ ಅವಕಾಶ ನೀಡುವಂತೆ ಅಧಿಕಾರಿಗಳ ಮೇಲೆ ಒತ್ತಡ ತರಲು ಕ್ರಾಸಿಂಗ್ನಲ್ಲಿ ಧರಣಿ ನಡೆಸುವುದು ಸಹ ಉದ್ದೇಶವಾಗಿದೆ ಎಂದು ಸಂಘಟಕರು ಒತ್ತಿ ಹೇಳಿದ್ದಾರೆ. ಕಳೆದ ಹಲವಾರು ತಿಂಗಳುಗಳಿಂದ ಆಹಾರ, ನೀರು ಮತ್ತು ಔಷಧದಿಂದ ವಂಚಿತರಾಗಿರುವ ಮತ್ತು 20 ತಿಂಗಳುಗಳಿಂದ ನಿರಂತರ ಬಾಂಬ್ ದಾಳಿಗೆ ಒಳಗಾಗಿರುವ ಗಾಜಾ ನಿವಾಸಿಗಳೊಂದಿಗೆ ಸೌಹಾರ್ದದ ಅಭಿವ್ಯಕ್ತಿಯಾಗಿ ಅವರು ಈ ಕಷ್ಟಗಳನ್ನು ಸಹಿಸಿಕೊಳ್ಳಲು ಸಿದ್ಧರಿದ್ದಾರೆ ಎಂದು ಅವರು ಹೇಳಿದ್ದಾರೆ. ನರಮೇಧ
ಜರ್ಮನ್ ವಕೀಲೆ ಮೆಲಾನಿ ಶ್ವೀಟ್ಜರ್ ಅವರು ಮೆರವಣಿಗೆ ಸಂಪೂರ್ಣವಾಗಿ ಶಾಂತಿಯುತ ಮತ್ತು ನಾಗರಿಕ ಸ್ವರೂಪದ್ದಾಗಿದೆ, ರಾಜಕೀಯ ಮತ್ತು ಸಾಂಸ್ಕೃತಿಕ ಗಡಿಗಳನ್ನು ಮೀರಿದ ಏಕೀಕೃತ ಮಾನವೀಯ ಸಂದೇಶವನ್ನು ರವಾನಿಸಿಸುತ್ತದೆ ಎಂದಿದ್ದಾರೆ. ಜಾಥಾದ ಸಂಘಟಕರು ಈಜಿಪ್ಟಿನ ರಾಯಭಾರ ಕಚೇರಿಗಳು ಮತ್ತು ತಮ್ಮದೇ ಆದ ರಾಷ್ಟ್ರೀಯ ರಾಜತಾಂತ್ರಿಕ
ಮಿಷನ್ಗಳೊಂದಿಗೆ ಸಂಪರ್ಕದಲ್ಲಿ ಇದ್ದಾರೆ ಎಂದು ಐರಿಶ್ ಕಾರ್ಯಕರ್ತರಾದ ಕರೆನ್ ಮೊಯ್ನಿಹಾನ್ ಗಮನಿಸಿದರು. ಇದು ಈಜಿಪ್ಟ್ ಅನ್ನು ಜವಾಬುದಾರರನ್ನಾಗಿ ಮಾಡಲು ಪ್ರಯತ್ನಿಸುವುದಿಲ್ಲ, ಬದಲಿಗೆ ಸಹಕರಿಸಲು ಮತ್ತು ದಿಗ್ಬಂಧನವನ್ನು ತೆಗೆದುಹಾಕಲು ಇಸ್ರೇಲ್ ಮೇಲೆ ನಿಜವಾದ ಅಂತರರಾಷ್ಟ್ರೀಯ ಒತ್ತಡವನ್ನು ತರಲು ಪ್ರಯತ್ನಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಈ ಅಪರಾಧಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗುವ ಯಾವುದೇ ಪ್ರಭುತ್ವ ನರಮೇಧದಲ್ಲಿ ಶಾಮೀಲಾಗಿದೆ ಎಂದಾಗುತ್ತದೆ ಮತ್ತು ಇತಿಹಾಸವು ಅಂತಹ ಮೌನವನ್ನು ಕ್ಷಮಿಸುವುದಿಲ್ಲ ಎಂದು ಅವರು ಒತ್ತಿ ಹೇಳಿದರು. ನರಮೇಧ
ಇದನ್ನೂ ನೋಡಿ: ಕೊಠಡಿ ನಿರ್ಮಿಸಿ ಎಂದ ಶಿಕ್ಷಕ |ಸನ್ಮಾನಿಸುವ ಜಾಗದಲ್ಲಿ ಅಮಾನತಿನ ಬಹುಮಾನ Janashakthi Media
ಮಾನವೀಯ ನೆರವು ತಲುಪದಂತೆ ಇಸ್ರೇಲ್ನ ನಿರಂತರ ದಿಗ್ಬಂಧನ ಮತ್ತು ಇಂತಹ ನೆರವನ್ನು ವಿಶ್ವಸಂಸ್ಥೆಯ ಯುಎನ್ಆರ್ ಡಬ್ಲ್ಯುಎ ಬದಲು ಅಮೆರಿಕದ ಖಾಸಗಿ ಕಂಪನಿ ಜಿಹೆಚ್ಎಫ್ (ಗಾಜಾ ಹ್ಯುಮಾನಿಟೇರಿಯನ್ ಫೌಂಡೇಶನ್) ಗೆ ವಹಿಸುವ ಅದರ ಕಸರತ್ತಿನ ಬಗ್ಗೆ ಜಾಗತಿಕ ಟೀಕೆಗಳು ಹೆಚ್ಚುತ್ತಿವೆ. ರಫಾದಲ್ಲಿ ಸ್ಥಾಪಿಸಲಾದ ಜಿಹೆಚ್ಎಫ್ ನ ನೆರವು ವಿತರಣಾ ಕೇಂದ್ರಗಳು ಅಗತ್ಯ ಸಹಾಯವನ್ನು ವಿತರಿಸಲು ಮಾಡಿದ ಕೆಲಸ ಕಡಿಮೆ, ಬದಲಿಗೆ ಆ ಕೇಂದ್ರಗಳು ಇಸ್ರೇಲಿ ಸೈನಿಕರು ಎರಡು ಸಂದರ್ಭಗಳಲ್ಲಿ ಪ್ಯಾಲೆಸ್ಟೀನಿಯನ್ ನೆರವು ಪಡೆಯುವವರ ಮೇಲೆ ಗುಂಡು ಹಾರಿಸಿದ ಪ್ಯಾಲೆಸ್ಟೀನಿಯನ್ನರ ಹತ್ಯಾಕಾಂಡದ ಸ್ಥಳವಾದವು.
ಇಸ್ರೇಲ್ನ ದಿಗ್ಬಂಧನದಿಂದಾಗಿ ಗಾಜಾದಲ್ಲಿ ಬರಗಾಲ ಮತ್ತು ಮಾನವೀಯ ದುರಂತ ಸಂಭವಿಸಲಿದೆ ಎಂದು ಜಾಗತಿಕ ಆಕ್ರೋಶ ಹೆಚ್ಚುತ್ತಿರುವಂತೆ, ಜಾಗತಿಕ ಗಾಜಾ ಜಾಥಾ ಹಾಗೂ ಇತ್ತೀಚೆಗೆ ಗಾಜಾಗೆ ‘ಫ್ರೀಡಂ ಫ್ಲೋಟಿಲ್ಲಾ’ ದೋಣಿಯ ಪ್ರಯಾಣವು, ಗಾಜಾದ ಜನತೆ ಒಂಟಿಯಲ್ಲ ಎಂದು ತೋರಿಸಲು ಪ್ರಯತ್ನಿಸುತ್ತದೆ ದು ಈ ಕಾರ್ಯಕ್ರಮದ ಸಂಘಟಕರು ಹೇಳುತ್ತಾರೆ.
ಟುನಿಸ್ನಿಂದ ರಫಾವರೆಗೆ
ಇದಕ್ಕೆ ಮೊದಲು ಟುನೀಶಿಯಾದಲ್ಲಿ ಮೇ ಮಧ್ಯದಿಂದ, ಟುನೀಷಿಯನ್ ನಾಗರಿಕ ಸಂಘಗಳು, ಪ್ರಮುಖ ಕಾರ್ಮಿಕ ಸಂಘಗಳು, ವಿದ್ಯಾರ್ಥಿ ಗುಂಪುಗಳು ಮತ್ತು ಯುವ ಚಳುವಳಿಗಳು ಟುನೀಶಿಯಾದಿಂದ ಹೊರಟು, ಕೈರೋ ಮೂಲಕ ಹಾದು ಜಾಗತಿಕ ಗಾಜಾ ಜಾಥಾದೊಂದಿಗೆ ಸೇರಿಕೊಳ್ಳುವ ಸಿದ್ಧತೆ ತಳಮಟ್ಟದಿಂದ ಆರಂಭವಾಗಿತ್ತು.
ಜೂನ್ 9 ರಂದು ಹೊರಟ ಸಾವಿರಾರು ಟುನೀಷಿಯನ್ನರೊಂದಿಗೆ ಬಸ್ ಮತ್ತು ಇತರ ವಾಹನಗಳಲ್ಲಿ ಮಗ್ರೆಬ್ ಮತ್ತು ದಕ್ಷಿಣ ಯುರೋಪಿನ ದೇಶಗಳಾದ ಇಟಲಿ, ಸ್ಪೇನ್ ಮತ್ತು ಫ್ರಾನ್ಸ್ಗಳಿಂದ ಸ್ವಯಂಸೇವಕರು ಕೂಡ ಭಾಗವಹಿಸುತ್ತಿದ್ದಾರೆ. ಟ್ಯುನೀಶಿಯಾದ ರಾಜಧಾನಿಯಲ್ಲಿ ಮತ್ತು ಅದು ಹಾದುಹೋದ ಇತರ ನಗರಗಳಲ್ಲಿ ವಾಹನ ಜಾಥಾ ಸ್ವಾಗತ ಮತ್ತು ಬೀಳ್ಕೊಡುಗೆಗಳನ್ನು ಪಡೆಯಿತು ಎಂದು ವರದಿಯಾಗಿದೆ.
ಜೂನ್ 15 ರ ಸುಮಾರಿಗೆ ಅಥವಾ ನಂತರ ಸ್ವಲ್ಪ ಸಮಯದ ನಂತರ ರಫಾ ಕ್ರಾಸಿಂಗ್ನಲ್ಲಿ ಈ ಎರಡು ಜಾಥಾಗಳ ಸಂಗಮವು ಕೇವಲ ಒಂದು ಸಾಂಕೇತಿಕ ಮಾಧ್ಯಮ ಕಾರ್ಯಕ್ರಮವಾಗಿರದೆ ಗಡಿಯಲ್ಲಿ ಒಂದು ಬಹಿರಂಗ ಅಂತರರಾಷ್ಟ್ರೀಯ ಪ್ರತಿಭಟನಾ ಶಿಬಿರವಾಗಿ ರೂಪಾಂತರಗೊಳ್ಳುವ ನಿರೀಕ್ಷೆಯಿದೆ. ಧರಣಿ ಬ್ಯಾನರ್ಗಳು ಮತ್ತು ಘೋಷಣೆಗಳ ಮೂಲಕ, ಸರ್ಕಾರಗಳು ತಮ್ಮ ನೈತಿಕ ಮತ್ತು ರಾಜಕೀಯ ಜವಾಬ್ದಾರಿಗಳನ್ನು ನಿಭಾಯಿಸಲು ಕರೆ ನೀಡಲಾಗುತ್ತದೆ. ರಫಾವನ್ನು ತಕ್ಷಣ ಮತ್ತು ಬೇಷರತ್ತಾಗಿ ತೆರೆದು ಆಹಾರ, ಔಷಧ ಮತ್ತು ಇಂಧನವನ್ನು ಸಾಗಿಸುವ 3,000 ಕ್ಕೂ ಹೆಚ್ಚು ನೆರವು ಟ್ರಕ್ಗಳು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಈಜಿಪ್ಟಿನ ಆಡಳಿತಗಾರರಿಗೆ ಮತ್ತು ಈಜಿಪ್ಟ್ ಅಧಿಕಾರಿಗಳು ಮತ್ತು ವಿಶ್ವಸಂಸ್ಥೆಯ ಈ ಪ್ರದೇಶದ ಪ್ರತಿನಿಧಿಗಳಿಗೆ ಒಂದು ಅಂತರರಾಷ್ಟ್ರೀಯ ಮನವಿಯನ್ನು ಸಲ್ಲಿಸಲು ನಿರ್ಧರಿಸಲಾಗಿದೆ.
ಸಾಂಸ್ಕೃತಿಕ ಮತ್ತು ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಆಯೋಜಿಸಲು ಜಾಥಾ ಸಂಘಟಕರು ಯೋಜಿಸಿದ್ದಾರೆ- ಇದರಲ್ಲಿ ಚರ್ಚಾಕೂಟಗಳು, ಕಲಾ ಪ್ರದರ್ಶನಗಳು ಮತ್ತು ಅಂತರರಾಷ್ಟ್ರೀಯ ಜನಬೆಂಬಲವನ್ನು ವಿಸ್ತರಿಸಲು ಮತ್ತು ಇಸ್ರೇಲ್ನ ಅಪರಾಧಗಳನ್ನು ಜಾಗತಿಕ ಸಾರ್ವಜನಿಕ ಅಭಿಪ್ರಾಯಕ್ಕೆ ಬಹಿರಂಗಪಡಿಸಲು ನೇರ ಮಾಧ್ಯಮ ಅಭಿಯಾನಗಳು ಸೇರಿವೆ – ವಿಶೇಷವಾಗಿ ಪ್ರಮುಖ ಅಂತರರಾಷ್ಟ್ರೀಯ ಮಾಧ್ಯಮಗಳು ಈ ಕಾರ್ಯಕ್ರಮವನ್ನು ವರದಿ ಮಾಡುವ ನಿರೀಕ್ಷೆಯಿದೆ.
ಇದು ಕೇವಲ ಒಂದು ಗಡಿಯತ್ತ ನಡಿಗೆಯಲ್ಲ, ಇದು ವಿಶ್ವದ ಆತ್ಮಸಾಕ್ಷಿಯ ಕಡೆಗೆ ಒಂದು ನಡಿಗೆ, ನೇರ ಕಾರ್ಯಾಚರಣೆಯ ಶಕ್ತಿಯನ್ನು ಪುನರುಜ್ಜೀವನಗೊಳಿಸುವ ನಡಿಗೆ, ಗಾಜಾದಲ್ಲಿ ಮುತ್ತಿಗೆಗೊಳಗಾದವರಿಗೆ ನೀವು ಒಬ್ಬಂಟಿಗಳಲ್ಲ, ಟುನೀಶಿಯಾದಿಂದ ಡಬ್ಲಿನ್ವರೆಗೆ, ಕೇಪ್ ಟೌನ್ನಿಂದ ಕ್ರಾಕೋವ್ವರೆಗೆ, ಜನರು ಗಾಜಾಕ್ಕಾಗಿ ಎದ್ದುನಿಂತು, ಮುತ್ತಿಗೆ ಮತ್ತು ಅನ್ಯಾಯದ ವಿರುದ್ಧ ಸೌಹಾರ್ದದ ಮತ್ತು ಪ್ರತಿಭಟನೆಯ ಹಾದಿಗಳನ್ನು ನಿರ್ಮಿಸುತ್ತಿದ್ದಾರೆ ಎಂಬ ಸಂದೇಶವನ್ನು ನೀಡುತ್ತದೆ ಎಂದು ಸಂಘಟಕರು ಹೇಳುತ್ತಾರೆ.
‘ಫ್ರೀಡಂ ಫ್ಲೋಟಿಲ್ಲಾ’