ಬಾಣಂತಿ ಹಾಗೂ ಹಸುಗೂಸಿನ ಮೇಲೆ ಫೈನಾನ್ಸ್ ಸಿಬ್ಬಂದಿ ದರ್ಪ

ದಾವಣಗೆರೆ: ಒಂದೂವರೆ ತಿಂಗಳ ಬಾಣಂತಿ ಹಾಗೂ ಹಸುಗೂಸನ್ನು ಕಚೇರಿಗೆ ಕರೆ ತಂದು ಕೂರಿಸಿ ಸಾಲ ಕಟ್ಟಿ ಕರೆದುಕೊಂಡು ಹೋಗುವಂತೆ ಫೈನಾನ್ಸ್ ಸಿಬ್ಬಂದಿ ದರ್ಪ ತೋರಿರುವ ಅಮಾನವೀಯ ಘಟನೆ ದಾವಣಗೆರೆಯ ಹೊನ್ನಾಳಿ ಪಟ್ಟಣದಲ್ಲಿ ನಡೆದಿದೆ.

ಬೆಲ್ ಸ್ಟಾರ್ ಫೈನಾನ್ಸ್ ಕಚೇರಿಗೆ ಬಾಣಂತಿ ಹಾಗೂ ಮಗುವನ್ನು ಕರೆ ತಂದು ಸಾಲ ಕಟ್ಟುವಂತೆ ಒತ್ತಾಯ ಮಾಡಲಾಗಿದ್ದು, ಸುಮಾರು ಸತತ ಮೂರು ಗಂಟೆಗಳ ಕಾಲ ಆಫೀಸ್ ನಲ್ಲಿ ಕೂರಿಸಿ ಹಣ ಕಟ್ಟುವಂತೆ ಒತ್ತಾಯ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ಇದನ್ನು ಓದಿ : ಬರ್ಬರತೆಯ ಪ್ರಪಾತಕ್ಕೆ ಬಂಡವಾಳಶಾಹಿ

ಮಗುವನ್ನ ಕಂಕುಳಲ್ಲಿಟ್ಟುಕೊಂಡು ತಾಯಿ ಫೈನಾನ್ಸ್ ಕಚೇರಿಯಲ್ಲಿ ಕಾಲ ಕಳೆದಿದ್ದು, ಘಟನೆ ಸಂಬಂಧ ಸಾಮಾಜಿಕ ಹೋರಾಟಗಾರ ಹನುಮಂತಪ್ಪ ಸೊರಟೂರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಬೆನ್ನಲ್ಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಫೈನಾನ್ಸ್ ಸಿಬ್ಬಂದಿಗೆ ಬುದ್ದಿ ಹೇಳಿ ವಾಪಸ್ ಮಹಿಳೆಯನ್ನು ಕರೆದುಕೊಂಡು ಬಂದಿದ್ದಾರೆ.

ಮಾನವೀಯತೆಯನ್ನ ಮರೆತು ಅಮಾನವೀಯವಾಗಿ ವರ್ತಿಸಿದ ಫೈನಾನ್ಸ್ ಸಿಬ್ಬಂದಿಗಳ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದ್ದು, ಫೈನಾನ್ಸ್ ಕಂಪನಿ ವಿರುದ್ಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದಾರೆ.

ಇದನ್ನು ನೋಡಿ : ನಿರುದ್ಯೋಗ ಸಮಸ್ಯೆಗೂ ಕೋಮುವಾದಕ್ಕೂ ಲಿಂಕ್ ಇದೆ: ಜಸ್ಟೀಸ್ ಎಚ್.ಎನ್ ನಾಗಮೋಹನದಾಸ್ Janashakthi Media

Donate Janashakthi Media

Leave a Reply

Your email address will not be published. Required fields are marked *