ಮಂಡ್ಯ| ಜಿಲ್ಲೆಯಲ್ಲಿ ಮತ್ತೆ ಹೆಣ್ಣು ಭ್ರೂಣ ಹತ್ಯೆ; ಮೂವರು ಅರೆಸ್ಟ್

ಮಂಡ್ಯ: ಜಿಲ್ಲೆಯಲ್ಲಿ ಮತ್ತೆ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಆಲೆಮನೆ, ಹೆಲ್ತ್ ಕ್ವಾಟ್ರಸ್ ಬಳಿಕ ಇದೀಗ ನಾಗಮಂಗಲದ ಮಾವಿನಕೆರೆ ತೋಟದ ಮನೆಯಲ್ಲಿ ಭ್ರೂಣ ಹತ್ಯೆ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದ್ದು, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಂಡ್ಯ

ನಿನ್ನೆ, 15 ಆಗಸ್ಟ್‌, ತಡ‌ ರಾತ್ರಿ ಡಿ.ಹೆಚ್.ಓ ಡಾ. ಮೋಹನ್ ‌ನೇತೃತ್ವದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ವೇಳೆ ಅಬಾರ್ಷನ್ ಕಿಟ್, ಸ್ಕ್ಯಾನಿಂಗ್ ಮಷಿನ್ ಪತ್ತೆಯಾಗಿವೆ. ದಾಳಿ ವೇಳೆ ಹಾಸನ ಮೂಲದ ಗರ್ಭಿಣಿ ಮಹಿಳೆ ಸ್ಥಳದಲ್ಲಿ‌ದ್ದರು. ಭ್ರೂಣ ಲಿಂಗ ಪತ್ತೆಗಾಗಿ ಈ ಗ್ಯಾಂಗ್ ಗರ್ಭಿಣಿ ಮಹಿಳೆಯನ್ನ ಕರೆತಂದಿದ್ದರು.

ಇದನ್ನೂ ಓದಿ: ದಾವಣಗೆರೆ : ವಿದ್ಯುತ್ ಶಾಕ್‌ ತಗುಲಿ ದಂಪತಿ ಮೃತ

 ಇದನ್ನೂ ನೋಡಿ: ಒಳ ಮೀಸಲಾತಿ; ಒಡಲಾಳದ ಕೂಗಿಗೆ ಸಿಕ್ಕಿತೇ‌ ನ್ಯಾಯ..? Janashakthi Media

Donate Janashakthi Media

Leave a Reply

Your email address will not be published. Required fields are marked *