ಪಶ್ಚಿಮ ಬಂಗಾಳ ಗಲಭೆಯಲ್ಲಿ ಗಾಯಗೊಂಡ ಯೋಧ ಎಂದು ಬಿಜೆಪಿಯಿಂದ ಜಾರ್ಖಂಡ್‌ನ ಫೋಟೊ ಶೇರ್‌

ಏಪ್ರಿಲ್‌ 10ರಂದು ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನದ ವೇಳೆಯಲ್ಲಿ ಕೂಚ್ ಬೆಹಾರ್ ಜಿಲ್ಲೆಯ ಸಿತಾಲ್​ಗುಚಿ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳು ಹಾರಿಸಿದ ಗುಂಡಿಗೆ ನಾಲ್ಕು ಜನರು ಬಲಿಯಾಗಿದ್ದರು. ಯೋಧರು ಗುಂಡು ಹಾರಿಸಿದ್ದು ಸ್ವಯಂ ರಕ್ಷಣೆಗಾಗಿ ಎಂದು ಕೂಚ್ ಬೆಹಾರ್ ಪೊಲೀಸ್ ಅಧಿಕಾರಿ ಹೇಳಿದ್ದರು.

ಕೂಚ್‌ ಬೆಹಾರ್‌ ನಲ್ಲಿ ಯೋಧರು ನಾಗರಿಕರ ಮೇಲೆ ಗುಂಡು ಹಾರಿಸಿದ ಘಟನೆ ಕುರಿತು ಬಿಜೆಪಿ ನಾಯಕರು ಗಾಯಗೊಂಡಿರುವ ಸಿಐಎಸ್ಎಫ್ ಯೋಧ  ಎಂಬ ಶೀರ್ಷಿಕೆಯೊಂದಿಗೆ ಫೋಟೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದಾರೆ.

ಬಿಜೆಪಿ ನಾಯಕ, ಸಂಸದ ಸೌಮಿತ್ರ ಖಾನ್ ಅವರು ಇದೇ ಫೋಟೊವನ್ನು ಶೇರ್ ಮಾಡಿ ಸಿತಾಲ್​ಗುಚಿ ಗಲಭೆಯಲ್ಲಿ ಗಾಯಗೊಂಡ ಯೋಧ ಎಂದು ಹೇಳಿದ್ದಾರೆ.

’ಇದೇ ಫೋಟೊನ್ನು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಕೂಡಾ ಶೇರ್ ಮಾಡಿದ್ದರು. ಬಿಜೆಪಿ ಸಂಸದ ಅರ್ಜುನ್ ಸಿಂಗ್ ಇದೇ ಫೋಟೊವನ್ನು ಫೇಸ್​ಬುಕ್ ಮತ್ತು ಟ್ವಿಟರ್​ನಲ್ಲಿ ಶೇರ್ ಮಾಡಿದ್ದು, ಆಮೇಲೆ ಡಿಲೀಟ್ ಮಾಡಿದ್ದಾರೆ.

ಆದರೆ ಬಿಜೆಪಿ ನಾಯಕರು ಈ ಗಲಭೆಯಲ್ಲಿ ನಾಲ್ವರು ನಾಗರಿಕರು ಬಲಿಯಾದ್ದಾರೆ ಎಂದು ಉಲ್ಲೇಖಿಸಿಲ್ಲ. ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷ ಸಂತೋಷ್ ರಂಜನ್ ರೈ ಅವರು ಕೂಡಾ ಅದೇ ಫೋಟೊ ಟ್ವೀಟ್ ಮಾಡಿಕೊಂಡಿದ್ದಾರೆ.

ಫ್ಯಾಕ್ಟ್ ಚೆಕ್

ಈ ಫೋಟೊ ಬಗ್ಗೆ ಫ್ಯಾಕ್ಟ್​ಚೆಕ್ ಮಾಡಿದ ಆಲ್ಟ್ ನ್ಯೂಸ್ ಬಿಜೆಪಿ ನಾಯಕರು ಟ್ವೀಟ್ ಮಾಡಿರುವ ಈ ಫೋಟೋ ಸಿತಾಲ್​ಗುಚಿಯಲ್ಲಿ ನಡೆದ ಗಲಭೆಯದ್ದಲ್ಲ ಮತ್ತು ಗಾಯಗೊಂಡ ಯೋಧನ ಫೋಟೊ ಅಲ್ಲ ಎಂದು ಹೇಳಿದೆ.

ಈ ಫೋಟೊ 2021 ಏಪ್ರಿಲ್ 10ರಂದು ದೈನಿಕ್ ಜಾಗರಣ್​ನಲ್ಲಿ ಪ್ರಕಟವಾದ ಒಂದು  ವರದಿ ಫೋಟೋವಾಗಿದೆ.

ದೈನಿಕ್ ಜಾಗರಣ್ ಸುದ್ದಿ

ವರದಿ ಪ್ರಕಾರ ಇದು ಎಎಸ್ಐ ಎಸ್.ಪಿ .ಶರ್ಮಾ ಅವರದ್ದು. ಜಾರ್ಖಂಡ್​ನ ಭೀಮಕನರಿ ಸಿಐಎಸ್ಎಫ್ ಶಿಬಿರದಲ್ಲಿ ಕರ್ತವ್ಯ ನಿರತರಾಗಿದ್ದಾಗ ಲಂಗೂರ್ ದಾಳಿ ಮಾಡಿತ್ತು. ನಾಲ್ಕು ಲಂಗೂರ್​ಗಳು (ಮಂಗ)  ಶರ್ಮಾ ಅವರ ಮೇಲೆ ದಾಳಿ ನಡೆಸಿದ್ದು, ಅವರ ಕುತ್ತಿಗೆಗೆ ಗಾಯಗಳಾಗಿತ್ತು. ಶರ್ಮಾ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿಯಲ್ಲಿದೆ.

ಧನಬಾದ್​ನಲ್ಲಿರುವ ಸಿಐಎಸ್​ಎಫ್ ಪ್ರಧಾನ ಕಚೇರಿ ಕೂಡಾ ಬಘಮರದಲ್ಲಿ ಎಸ್.ಪಿ ಶರ್ಮಾ ಅವರ ಮೇಲೆ ಲಂಗೂರ್ ಗಳು ದಾಳಿ ಮಾಡಿದ ಫೋಟೊ ಇದು ಎಂದು ಬೂಮ್ ಲೈವ್​ಗೆ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *