ಕೇರಳ: ಕೇರಳ ಇದೀಗ ಇತಿಹಾಸ ಸೃಷ್ಠಿಸಿದೆ ತೀವ್ರ ಬಡತನ ನಿರ್ಮೂಲನೆ ಮಾಡಿದ ದೇಶದ ಮೊದಲ ರಾಜ್ಯವಾಗಿ ಕೇರಳ ಇಂತಹ ಸಾಧನೆ ಮಾಡಿದ ಎರಡನೇ ಪ್ರದೇಶವಾಗಿದೆ. ಇದನ್ನು ಸ್ವತ ಕೇರಳ ಸಿಎಂ ಪಿಣರಾಯಿ ವಿಜಯನ್ ಶನಿವಾರ ಅಧಿಕೃತ ಘೋಷಣೆ ಮಾಡಿದ್ದಾರೆ. ಕೇರಳ
ಇದನ್ನೂ ಓದಿ : ವಯನಾಡ್ ಪ್ರವಾಸೋದ್ಯಮದ ಪರ ಜಾಹೀರಾತು: ವರದಿ ನೀಡುವಂತೆ ಕೆಎಸ್ಟಿಡಿಸಿಗೆ ಸರ್ಕಾರ ಸೂಚನೆ
ಇದು ಕೇವಲ ಅಂಕಿಅಂಶಗಳ ವಿಷಯವಲ್ಲ. ಮಾನವ ವಿಜಯ ಎಂದು ಶನಿವಾರ ನಡೆದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಪಿಣರಾಯಿ ವಿಜಯನ್ ಘೋಷಿಸಿದರು. ಕೇರಳ
2021ರಲ್ಲಿ, ಸರ್ಕಾರವು ತನ್ನ ಮೊದಲ ಸಚಿವ ಸಂಪುಟ ಸಭೆಯಲ್ಲಿ “ತೀವ್ರ ಬಡತನ ನಿರ್ಮೂಲನೆ” ಗುರಿಯನ್ನು ಹೊಂದಲು ನಿರ್ಧರಿಸಿತು. ಇದರ ಪರಿಣಾಮವಾಗಿ, 4 ಲಕ್ಷ ಗಣತಿದಾರರು ರಾಜ್ಯಾದ್ಯಂತ ತೀವ್ರ ಬಡತನದಲ್ಲಿ ವಾಸಿಸುತ್ತಿರುವ 1,03,099 ಜನರನ್ನು ಗುರುತಿಸಿದರು. ಪ್ರತಿ ಕುಟುಂಬಕ್ಕೂ ಪ್ರತ್ಯೇಕ ಸೂಕ್ಷ್ಮ ಯೋಜನೆಯನ್ನು ಸಿದ್ಧಪಡಿಸಲಾಯಿತು ಮತ್ತು ಅದನ್ನು ಕುಟುಂಬಶ್ರೀ (ಕುಟುಂಬ ಕಲ್ಯಾಣ), ಸ್ಥಳೀಯ ಸಂಸ್ಥೆಗಳು ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಜಾರಿಗೆ ತರಲಾಯಿತು. ಈ ಮೂಲಕ ಬಡತನ ನಿರ್ಮೂಲನೆ ಮಾಡುವುದಕ್ಕೆ ಸಹಾಯವಾಯಿತು ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ನೋಡಿ : ಧರ್ಮಸ್ಥಳ ಪ್ರಕರಣ | ಎಸ್ಐಟಿ ಪೊಲೀಸರು ದೌರ್ಜನ್ಯ ಮಾಡುವಂತಿಲ್ಲ- ಹೈಕೋರ್ಟ್ ಆದೇಶ Janashakthi Media
