ಇಸ್ರೇಲ್ – ಹಮಾಸ್ ಸಂಘರ್ಷ ಕೊನೆಗೊಳಿಸಿ, ನರಮೇಧ ನಿಲ್ಲಿಸಿ – ಸಿಪಿಐಎಂ ಒತ್ತಾಯ

ಬೆಂಗಳೂರು: ಇಸ್ರೇಲ್- ಹಮಾಸ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದ್ದು, ಈ ಸಂಘರ್ಷ ಕೊನೆಯಾಗಬೇಕು ಹಾಗೂ ನರಮೇಧ ನಿಲ್ಲಬೇಕು ಎಂದು ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸಿದೆ.

ಈ ಕುರಿತು ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಪತ್ರಿಕಾ ಹೇಳಿಕೆ ನೀಡಿದ್ದು,  ಹಮಾಸ್ ಹಾಗೂ ಇಸ್ರೆಲ್ ದೇಶಗಳ ನಡುವಿನ ದಾಳಿ ಹಾಗೂ ಪ್ರತಿಧಾಳಿಗಳನ್ನು ಸಿಪಿಐಎಂ ಬಲವಾಗಿ ಖಂಡಿಸುತ್ತದೆ ಮತ್ತು ಅವುಗಳನ್ನು ಈ ಕೂಡಲೇ ನಿಲ್ಲಿಸುವಂತೆ ಬಲವಾಗಿ ಒತ್ತಾಯಿಸುತ್ತದೆ ಎಂದು ತಿಳಿಸಿದ್ದಾರೆ.

ಸಂಘರ್ಷದಿಂದಾಗಿ  ಎರಡು ದೇಶಗಳ ಹಲವು ಸಾವಿರ ನಾಗರೀಕರು, ಮಕ್ಕಳು ಕೊಲ್ಲಲ್ಪಡುತ್ತಿದ್ದಾರೆ ಹಾಗೂ ಆಸ್ತಿಪಾಸ್ತಿಗಳ ನಾಶಕ್ಕೆ ಈ ದಾಳಿಗಳು ಕಾರಣವಾಗುತ್ತಿವೆ. ವಿಶ್ವ ಸಂಸ್ಥೆಯ ನಿರ್ಣಯಗಳನ್ನು ನಿರಂತರವಾಗಿ ಉಲ್ಲಂಘಿಸುತ್ತಿರುವ ಇಸ್ರೇಲ್ ದೇಶ ಪ್ಯಾಲಸ್ಥೇನ ದೇಶದ ಸ್ವತಂತ್ರ್ಯವನ್ನು ಒಪ್ಪದಿರುವುದು ಮತ್ತು ಅವರ ನೆಲಗಳನ್ನು ಬೇಕಾಬಿಟ್ಟಿಯಾಗಿ ಆಕ್ರಮಿಸಿಕೊಂಡಿರುವುದು ಮತ್ತು ಪಶ್ಚಿಮ ದಂಡೆಯಲ್ಲಿ ಯಹೂದಿ ವಸಾಹತು ಸ್ಥಾಪನೆಗೆ ಕ್ರಮವಹಿಸುತ್ತಿರುವುದು ಸಂಘರ್ಷದ ಮೂಲವಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಹಮಾಸ್ ಇಸ್ರೇಲ್ ಯುದ್ಧ – ಹಲವು ಪ್ರಶ್ನೆಗಳು

ವಿಶ್ವ ಸಂಸ್ಥೆಯು, ಪ್ಯಾಲೆಸ್ಟೇನಿಯನ್ ಜನರ ನೆಲೆನಾಡು ಹೊಂದುವ ಹಕ್ಕನ್ನು ಖಾತರಿ ಪಡಿಸಬೇಕು. ಇಲ್ಲಿನ ಎಲ್ಲಾ ಇಸ್ರೆಲ್ ಆಕ್ರಮ ವಸಾಹತುಗಳನ್ನು ಮತ್ತು ಪ್ಯಾಲೆಸ್ಟೈನ್ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ಹಿಂತೆಗೆದುಕೊಳ್ಳುವಂತೆ ಮಾಡಬೇಕು. ಎರಡೂ ರಾಷ್ಟ್ರಗಳ ಪರಿಹಾರದ ಭದ್ರತಾ ಮಂಡಳಿಯ ನಿರ್ಣಯದ ಅನುಷ್ಠಾನವನ್ನು ಖಚಿತಪಡಿಸಬೇಕು. ಅದೇ ರೀತಿ, ಪ್ಯಾಲೇಸ್ತಾನ ದೇಶಕ್ಕೆ ಪೂರ್ವ ಜೆರುಸಲೇಂ ರಾಜಧಾನಿಯಾಗಿರಬೇಕು ಎಂಬ ನಿರ್ಣಯಗಳನ್ನು ಜಾರಿಗೆ ತರಬೇಕು ಎಂದರು.

ವಿಶ್ವ ಸಂಸ್ಥೆ ಹಾಗೂ ಭಾರತವು ಸೇರಿದಂತೆ ಎಲ್ಲ ಅಂತರ್ರಾಷ್ಟ್ರೀಯ ಸಮುದಾಯಗಳು ಈ ಸಂಘರ್ಷ ತಕ್ಷಣ ನಿಲ್ಲುವಂತೆ ಖಚಿತ ಪಡಿಸಬೇಕು. ಅದೇ ರೀತಿ, ವಿಶ್ವ ಸಂಸ್ಥೆಯ ನಿರ್ಣಯದ ಜಾರಿಗೆ ಕೆಲಸ ಮಾಡಬೇಕೆಂದು ಸಿಪಿಐಎಂ ಒತ್ತಾಯಿಸುತ್ತದೆ ಎಂದು ತಿಳಿಸಿದ್ದಾರೆ.

ವಿಡಿಯೋ ನೋಡಿ: ದೇಶವನ್ನು ಆಳವಾಗಿ ಘಾಸಿಗೊಳಿಸಿದ ಎರಡು ಘಟನೆಗಳು Janashakthi Media

Donate Janashakthi Media

Leave a Reply

Your email address will not be published. Required fields are marked *