ಚುನಾವಣಾ ಹರಟೆ : ಮಲ್ಲಣ್ಣ – ಬಸ್ಸಣ್ಣ ಏನ್‌ ಹೇಳ್ತಾರ ಕೇಳ್ರಿ

ಗುರುರಾಜ ದೇಸಾಯಿ

ನಮಸ್ಕಾರಾಪ ಬಸ್ಸಣ್ಣ…

ಓಹ್‌ ನಮಸ್ಕಾರೋ ಮಲ್ಲಣ್ಣ, ಅರಾಮ ಅದಿಯೇನು?

ಏನೋ ಅರಾಮೋ ಏನೋ  ಬಸ್ಸಣ್ಣ, ನಂಗಂತೂ ದೇಶದ್ದ ಚಿಂತಿ ಆಗೈತಿ ನೋಡು..

ದೇಶದ ಚಿಂತಿ ಯಾಕೋ ಮಾಡ್ತಿ… ಓಟಾಕೋದು ನಮ್ಮ ಕರ್ತವ್ಯ ಓಟ್‌ ಹಾಕೀವಿ

ಓಟ ಹಾಕಿದ್ವಿ ಖರೆ ನಾವು ಹಾಕಿದ ಅಬ್ಯರ್ಥಿ ಗೆಲ್ತಾನಾ , ಬ್ಯಾರೆಯವರು ಗೆಲ್ತಾರ ಅಂತ ಯೋಚನೆ ಆಗೈತಿ..

ಒಟ್ನ್ಯಾಗ ಯಾರೋ ಗೆಲ್ತಾರೆ ಬಿಡು ಮರಾಯ… ಹಾಂ,, ಎರಡ್ಮೂರು ದಿನದಿಂದ ಒಂದು ಸುದ್ದಿ ಓಡಾಡ್ತು ಗಮನಸಿಯೇನು ಬಸ್ಸಣ್ಣ..

ಏನ್‌ ಮಲ್ಲಣ್ಣ ಅದು, ನಂಗ ಗೊತ್ತಿಲ್ಲ ನಿಂಗ ಗೊತ್ತಿದ್ರ  ಹೇಳಲ,

ಆದಾನಿ, ಅಂಬಾನಿ, ಅಂತ ಅದಾರಲ….

ಯೇ ಅವರ ಸುದ್ದಿ ನಮಗ್ಯಾಕಪ..  ಕಾರ್ಮಿಕರ ರಕ್ತ ಹೀರಿ ಶ್ರೀಮಂತರಾದೋರು ಅವರು.. ಇಂತ ತಂಪೊತ್ನ್ಯಾಗ ಅವರನ್ನ ಯಾಕ ನೆನಸ್ತಿ..

ನಾ ಅವರ್ನ ನೆನಸ ಕತ್ತಿಲ್ಲ ಮರಾಯ, ನಾ ಪೂರ್ತಿ ಹೇಳೋದ್ನ ಕೇಳು, ಬಾಳ ಅವಸರಗೇಡಿ ಮನಷ್ಯ ಅದಿ ನೀನು…

ಆತ ಆತ ಹೇಳಪ…..

ಅದಾನಿ, ಅಂಬಾನಿ ಬಗ್ಗೆ ರಾಹುಲ್‌ ಗಾಂಧಿ ಯಾಕ ಮಾತಾಡಕತ್ತಿಲ್ಲ, ಅವ ಇವರಿಗೆ ಎಲೆಕ್ಷನ್‌ಗೆ ಅಂತ ರೊಕ್ಕ ಕೊಟ್ಟಾನ ಅಂತ….

ಯೇ.. ಅವ ರಾಹುಲ್‌ ಗಾಂಧಿಗೆ ಯಾಕೋ ಕೊಡ್ತಾನ… ವಿಶ್ವಗುರು ಮೋದಿ ಸಾಹೇಬ್ರ ಖಾಸಾ ದೋಸ್ತ ಅವ, ಸಾಹೇಬ್ರನ ಬಿಟ್ಟು ಅವರಿಗ್ಯಾಕ ಕೊಡ್ತಾನ ತಲೆ ಬರೋಬ್ಬರ ಐತಿಲ್ಲ ನಿಂದ…

ಮರಾಯ ನನ್ನ ಪೂರ್ತಿ ಮಾತಾಡಕ ಬಿಡು… ನಿಮ್ಮ ಮೋದಿ ಸಾಹೇಬ್ನ ಈ ಮಾತ ಹೇಳ್ಯಾನ ಸುಳ್ಳ ಹೇಳಿದ್ರ ನೋಡಿಲ್ಲಿ ವಿಡಿಯೋ ತೋರಸ್ತಿನಿ…. (ವಿಡಿಯೋ)

ಯಪ್ಪೋ… ಯಪ್ಪೋ… ಏನ್‌ ಬಸಣ್ಣ ಇದು ಒಂದು ತಿಳವಲ್ದು.. ದೋಸ್ತಗ ಹಿಂಗ ಬೈತನಾಲ ಮೊದಿ ಸಾಹೇಬ್‌ ಹೆಂಗ ಅಂತಿನಿ…

ಇದು ರಾಜಕೀಯ ಮರಾಯ ಇಲ್ಲಿ ಹೆಂಗ ಬೇಕಾದ್ರು ನಡಿತೈತಿ.. 10 ವರ್ಷ ಇಬ್ಬರಗೂ ದೋಸ್ತಿ ಬೇಕಿತ್ತು.. ಕಳ್ಳ ದೋಸ್ತಿ ಬೇರೆ ಅಲ್ವಾ ಹಂಗಾಗಿ ಎಷ್ಟು ಅಂತ ಮುಂದುವರಿತೈತಿ, ಅದಕ್ಕ ಈಗ ರಾಹುಲ್‌ ಗಾಂಧಿ ಕಡೆ ಪ್ರೀತಿ ಬಂದೈತಿ, ಆ ರಾಹುಲ್‌ ಬೇರೆ ಪ್ರೀತಿ ಅಂಗಡಿ ತಗಿತಿನಿ, ಪ್ರಿತಿ ಅಂಗಡಿ ತಗಿತೀನಿ ಅಂತಿದ್ದ, ಅದೇನ್‌ ಪ್ರೀತಿ ಅಂತ ನೋಡಬಿಡೋಣ ಅಂತ ಈ ಕಡೆ ಬಂದಂಗ ಕಾಣಕತ್ತೈತಿ.

ಹಂಗಂತಿ… ಹಂಗದ್ರ ಈ ಸಾರಿ ಮೋದಿ ಸಾಹೇಬ್ರು ಗೆಲ್ಲಲ್ಲ ಅಂತ ಆಯ್ತು..

ಯೇ ಅಷ್ಟು ಕರೆಕ್ಟ್‌ಆಗಿ ಹೆಂಗ ಹೇಳ್ತಿ ಮಲ್ಲಣ್ಣ..

ಖಾಸಾ ದೋಸ್ತ ಕೈ ಕೊಟ್ಟನ ಅಂತ ಮೋದಿ ಸಾಹೇಬ್ರ ಮಾತ ಕೇಳಿದ್ರ ಗೊತ್ತಾಕ್ಕೈತಿ, ಸಣ್ಣ ಹುಡ್ಗುರ್ಗು ಗೊತ್ತಾಕ್ಕೈತಿ, ನಿಂಗ ಗೊತ್ತಾಗವಲ್ತಾ ಬಸ್ಸಣ್ಣ

ಇದ್ರು ಇರಬಹುದು ಮಲ್ಲಣ್ಣ, ಯಾವ ಹುತ್ತದಾಗ ಯಾವ ಹಾವ ಇರತೈತಿ ಅಂತ ಹೆಂಗ ಗೊತ್ತಾಕ್ಕೈತಿ ಹೇಳು..

ಮೊದಿ ಸಾಹೇಬ್ರ ಮಾತ ಕೇಳಿದ್ರ ಒಂದಂತು ಗೊತ್ತಾತು.. ಈ ಶ್ರಿಮಂತರ ಅದಾರಲ್ಲ ಅವರ ನಮ್ಮ ಸರ್ಕಾರ ಯಾವದ ಇರಬೇಕು ಅಂತ ತೀರ್ಮಾನ ಮಾಡೋರು ಅನ್ನೋದು ಗೊತ್ತಾತ ನೋಡು ಬಸ್ಸಣ್ಣ..

ಖರೇ ಹೇಳಿದಿ ಮಲ್ಲಣ್ಣ.. ನಂಗೂ ಹಂಗ ಅನ್ಸ ಕತ್ತೈತಿ..

ಊಪ್‌ ಇನ್ನೋಂದ ಸುದ್ದಿ ಫೆಸ್ಬುಕ್ಕದಾಗ ಓಡ್ಯಾಡಕತ್ತೈತಿ, ನೋಡಿಯನೂ ಬಸ್ಸಣ್ಣ..

ಏನ್‌ ವಿಡಿಯೋನೋ ಮರಾಯ… ಆ ಗೌಡ, ಸ್ವಾಮಿ ದಿನಾ ಟಿವ್ಯಾಗ ಬಂದ ಹೇಳ್ತಾರಲ ಅದು ಅನ…

ಯಪ್ಪ ಅದಲ್ಲೋ ಮರಾಯ…

ಮತ್ಯಾವದು ಹೇಳೋ ಮಲ್ಲಣ್ಣ..

ನಮ್ಮ ಚಕ್ಕು ಅಣ್ಣ ಗೊತ್ತಲ್ಲ.. ನಿಂಗ

ಚಕ್ಕ ಅಣ್ಣ ಗೊತ್ತಿಲ್ಲಪ ನಂಗ, ಚಿಕ್ಕು ಹಣ್ಣಾದ್ರ ಗೊತ್ತೈತಿ ನೊಡಿ..

ಚಿಕ್ಕು ಹಣ್ಣು ಅಲ್ಲೊ ಮರಾಯ.. ಚಕ್ರವರ್ತಿ ಸೂಲಿಬೇಲಿ ಅಂತ ಅದಾನಲ..

ಹು. ಹು ಗೊತ್ತಳ. ಮಾತೆತ್ತಿದ್ರ ಸಾಕು ಮೋದಿಯವರು ಹಣ ಡಬಲ್‌ ಮಾಡಿದ್ರು.. ಒಂದ ಕ್ಲಿಕ್‌ ಮಾಡಿದ್ರ ಇಡೀ ದೇಶದಾಗ ಏನ್‌ ಅಕ್ಕೈತಿ ಅಂತ ಮೋದಿಯವರಿಗೆ ಗೊತ್ತಾಕ್ಕೈತಿ ಅಂತ ಸುಳ್ಳ ಹೇಳ್ತಿದ್ನಲ ಆತ ಹೌದಿಲ್ಲ..

ಹು ಜಾಣ,, ಆತ್ನ ನೀಡು, ಅದಗ ಪ್ರಿತಿಯಿಂದ ಚಕ್ಕು ಅಣ್ಣ ಅಂತ ಕರೀತಾರ… ಆತಂದು ಒಂದು ವಿಡಿಯೋ ಐತಿ ನನ್ನ ಹತ್ರ ಬಾ ತೋರಸ್ತಿನಿ..

ಹೌದಾ ತೋರ್ಸು ಮರಾಯ ಏನು ಅಂತ ನೋಡ ಬಿಡೋಣ (ವಿಡಿಯೋ)

ಯಪ್ಪಾ ಎದಿ ಸೀಳಿದ್ರ ಕಮಲ ಕಾಣತೈತಿ, ಇನ್ನೊಂದಿಷ್ಟು ಮುಂದಕ್ಕ ಹೋದ್ರ ವಿಶ್ವಗುರು ಕಾಣ್ತಾನ ಅಂತಿದ್ದ ಚಕ್ರವರ್ತಿ ಕಾಂಗ್ರೆಸ್‌ ಹೋಗಳ ಕತ್ತಾನ್‌ ಯಪ್ಪಾ ತಲೆ ಚಿಟ್ಟಿ ಹಿಡಸಿದಿ ನೊಡು ಈಗ ನಂದು..

ಹಿಂಗಂದ್ರ ಹೆಂಗೊ ಮರಾಯ ವಿಶ್ವಗುರುನ ಹೋಗಳ್ತಾ ಇದ್ದೋರು ಈಗ ಬೈಯಾಕ ಚಾಲು ಮಾಡ್ಯಾರ ಅಂದ್ರ ಮುಂದೈತಿ ಹಬ್ಬ ಅಂತ ಆತು..

ನಂಗ ಹಂಗ ಅನ್ಸ ಕತ್ತೈತಿ ಮರಾಯ ಜೂನ್‌ ನಾಲ್ಕ್‌ ಯಾವಾಗ ಬರತೈತಿ ಅಂತ ಕಾಯಕತ್ತೀನಿ ನೋಡು..

ಆತ ಆತ ಬಾ ಬಾ ನಮ್ಮ ಮನ್ಯಾಗ ಬಾಡೂಟ ಮಾಡ್ಯಾರ ತಿಂದು ಹೊಲಕ್ಕ ಹೋಗೋಣ ನಡಿ..

ಆತ ನಡಿಯಪ್ಪ..

 

Donate Janashakthi Media

Leave a Reply

Your email address will not be published. Required fields are marked *