ದೆಹಲಿ | ಉಪರಾಷ್ಟ್ರಪತಿ ಹುದ್ದೆಗೆ ಇಂದು ಚುನಾವಣೆ

ದೆಹಲಿ : ಉಪರಾಷ್ಟ್ರಪತಿ ಹುದ್ದೆಗೆ ಮಂಗಳವಾರ ಚುನಾವಣೆ ನಡೆಯಲಿದೆ. ಮಾಜಿ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರು ಜುಲೈ 21ರಂದು ದಿಢೀರ್‌ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಈ ಚುನಾವಣೆ ನಡೆಯಲಿದೆ. ದೆಹಲಿ

ಎನ್‌ಡಿಎ ಮೈತ್ರಿಕೂಟದ ಬಳಿ ಬಹುಮತ ಇರುವುದಿಂದ ಸಿ.ಪಿ. ರಾಧಾಕೃಷ್ಣನ್‌ ಅವರ ಗೆಲುವು ಬಹುತೇಕ ಖಚಿತವಾಗಿದೆ. ಆದರೆ, 1962ರಿಂದ ಇಲ್ಲಿಯವರೆಗೂ ವಿರೋಧ ಪಕ್ಷಗಳ ಅಭ್ಯರ್ಥಿಗೆ ಸಿಕ್ಕ ಮತಗಳ ಹೋಲಿಕೆಯಲ್ಲಿ ಈ ಬಾರಿ ನ್ಯಾ. ಸುದರ್ಶನ ರೆಡ್ಡಿ ಅವರಿಗೆ ಅತಿ ಹೆಚ್ಚು ಮತಗಳು ಲಭಿಸುವ ಸಾಧ್ಯತೆ ಹೆಚ್ಚು. ಎರಡೂ ಮೈತ್ರಿಕೂಟಗಳು ಸಭೆಗಳನ್ನು ನಡೆಸಿ ಒಗ್ಗಟ್ಟು ಪ್ರದರ್ಶಿಸಿವೆ ಮತ್ತು ಅಣಕು ಮತದಾನದ ಕಾರ್ಯಾಗಾರವನ್ನೂ ನಡೆಸಿವೆ.ದೆಹಲಿ

ಇದನ್ನೂ ಓದಿ: ಹುಬ್ಬಳ್ಳಿ| ದೇಶ ಅಪ್ನಾಯೇನ್‌ ಸಹಯೋಗ ಫೌಂಡೇಷನ್‌ನಿಂದ್‌ ಸರಕಾರಿ ಶಾಲೆ ಮಕ್ಕಳಿಗೆ ಶೈಕ್ಷಣಿಕ ಮಹತ್ವದ ಅರಿವು ದೆಹಲಿ

‘ಮೈತ್ರಿ’ಯಲ್ಲಿ ಇಲ್ಲದವರ ನಡೆ

  • ವೈಆರ್‌ಎಸ್‌ ಕಾಂಗ್ರೆಸ್‌ ಪಕ್ಷವು ಎನ್‌ಡಿಎ ಅಭ್ಯರ್ಥಿಗೆ ಮತ ಹಾಕಲು ನಿರ್ಧರಿಸಿದೆ. ಈ ಪಕ್ಷದಲ್ಲಿರುವ ಒಟ್ಟು ಸಂಸದರು 11. ಲೋಕಸಭೆಯಲ್ಲಿ 4, ರಾಜ್ಯಸಭೆಯಲ್ಲಿ 7
  • ಬಿಆರ್‌ಎಸ್‌ ಚುನಾವಣೆಯಲ್ಲಿ ತಟಸ್ಥವಾಗಿರುವುದಾಗಿ ಹೇಳಿದೆ. ಈ ಪಕ್ಷದಲ್ಲಿ ಒಟ್ಟು 4 ರಾಜ್ಯಸಭೆ ಸಂಸದರಿದ್ದಾರೆ. ಲೋಕಸಭೆಯಲ್ಲಿ ಸಂಸದರು ಇಲ್ಲ
  • ಬಿಜೆಡಿ ಪಕ್ಷವು ಚುನಾವಣೆಯಲ್ಲಿ ತಟಸ್ಥವಾಗಿರುವುದಾಗಿ ಹೇಳಿದೆ. ಈ ಪಕ್ಷದಲ್ಲಿ ಒಟ್ಟು 7 ರಾಜ್ಯಸಭೆ ಸಂಸದರಿದ್ದಾರೆ. ಲೋಕಸಭೆಯಲ್ಲಿ ಸಂಸದರು ಇಲ್ಲ
  • ಅಕಾಲಿ ದಳ ಪಕ್ಷದ ಒಬ್ಬ ಸಂಸದನು ಚುನಾವಣೆಯಲ್ಲಿ ತಟಸ್ಥವಾಗಿರುವುದಾಗಿ ಹೇಳಿದ್ದಾರೆ

ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ – ಮತದಾನದ ಅವಧಿ

ಸಂಜೆ 6 – ಮತ ಎಣಿಕೆ

  • ಒಂದು ಮತಕ್ಕೆ ಒಂದು ಮತದ ಮೌಲ್ಯ
  • ಚುನಾವಣಾಧಿಕಾರಿ ನೀಡಿದ ವಿಶೇಷ ಪೆನ್‌ ಮೂಲಕವೇ ಮತದಾನ ಮಾಡಬೇಕು. ಬ್ಯಾಲಟ್‌ ಪೇಪರ್‌ನಲ್ಲಿ ಮತದಾನ
  • ಇಂಥವರಿಗೇ ಮತ ಹಾಕಬೇಕು ಎಂದು ಪಕ್ಷಗಳು ವಿಪ್‌ ಜಾರಿ ಮಾಡಲು ಬರುವುದಿಲ್ಲ

ಅಭ್ಯರ್ಥಿಗಳು

ಸಿ.ಪಿ. ರಾಧಾಕೃಷ್ಣನ್‌ (ಎನ್‌ಡಿಎ ಅಭ್ಯರ್ಥಿ)

Donate Janashakthi Media

Leave a Reply

Your email address will not be published. Required fields are marked *