ಬೆಂಗಳೂರು: ಮುಖ್ಯಮಂತ್ರಿಗಳು ಎಸ್ಎಸ್ಎಲ್ಸಿ ಫಲಿತಾಂಶ ಕುಸಿತದ ಬಗ್ಗೆ ಆತಂಕ ವ್ಯಕ್ತ ಪಡಿಸಿದ್ದೂ, ಮುಂದೆ ಫಲಿತಾಂಶ ಕುಸಿತ ಕಂಡರೆ ಇಲಾಖೆಯ ಉನ್ನತ ಅಧಿಕಾರಿಗಳನ್ನೇ ಹೊಣೆ ಮಾಡುವುದಾಗಿ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳನ್ನು ಕಟ್ಟುನಿಟ್ಟಾಗಿ ಕ್ಷೇತ್ರ ಕಾರ್ಯಕ್ಕೆ ಇಳಿಸಿ ಶೈಕ್ಷಣಿಕ ಸುಧಾರಣೆ ನಡೆಸಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ. ಫಲಿತಾಂಶ
ಶೈಕ್ಷಣಿಕ ಚಟುವಟಿಕೆ, ವಿದ್ಯಾರ್ಥಿಗಳ ದಾಖಲಾತಿ -ಹಾಜರಾತಿ, ಬೋಧನೆ, ಪ್ರಗತಿ, ಮಕ್ಕಳ ಸುರಕ್ಷೆ ಇತ್ಯಾದಿಯ ಜತೆಗೆ ಶೈಕ್ಷಣಿಕ ಬಲವರ್ಧನೆಯ ಚಟುವಟಿಕೆ ಗಳನ್ನು ಇಲಾಖೆಯ ಹಿರಿಯ ಅಧಿಕಾರಿ ಗಳಿಗೆ ವಹಿಸಲಾಗುತ್ತಿದೆ. ಫಲಿತಾಂಶ
ಈ ಅಧಿಕಾರಿಗಳು ಖುದ್ದು ಶಾಲೆಗಳಿಗೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸಲು ಈಗಾಗಲೇ ಇರುವ “ಮಿಂಚಿನ ಸಂಚಾರ’ ಕಾರ್ಯಕ್ರಮ ಕಟ್ಟುನಿಟ್ಟಾಗಿ ಪಾಲನೆ ಆಗಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.ಈ ಅಧಿಕಾರಿಗಳಿಂದ ಕ್ಷೇತ್ರ ಸಂಚಾರ ಮಿಂಚಿನ ಸಂಚಾರದಲ್ಲಿ ಜಿಲ್ಲಾ ಉಪ ನಿರ್ದೇಶಕರು, ಶಿಕ್ಷಣ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಭಾಗಿಯಾಗಬೇಕು ಎಂದು ಇಲಾಖೆ ಸ್ಪಷ್ಟ ನಿರ್ದೇಶನ ನೀಡಿದೆ. ಫಲಿತಾಂಶ
ಅಧಿಕಾರಿಗಳಿಗೆ ಗುರಿ
ಆಯಾ ಜಿಲ್ಲೆಗಳಲ್ಲಿ 1 ವಾರ ಕಾಲ ದಿನವೊಂದಕ್ಕೆ ತಲಾ ಒಂದು ತಾಲೂಕಿನಲ್ಲಿ ಕಡಿಮೆ ಪ್ರಗತಿ ತೋರಿರುವ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಫಲಿತಾಂಶ
ಇದನ್ನೂ ಓದಿ: ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳ ಅಮಾನತು: ನೆಟ್ಟಿಗರು ಆಕ್ರೋಶ
ಕ್ಲಸ್ಟರ್ ಹಂತದಿಂದ ಜಿಲ್ಲಾ ಹಂತದವರೆಗೆ ಸಂಬಂಧಿಸಿದ ಅಧಿಕಾರಿ, ಸಿಬಂದಿ, ತಾಲೂಕು ನೋಡಲ್ ಅಧಿಕಾರಿಗಳು ಅನಿರೀಕ್ಷಿತವಾಗಿ ದಿನವೊಂದಕ್ಕೆ 4 ಶಾಲೆಗಳನ್ನು ಸಂದರ್ಶಿಸಬೇಕು. ಸಿಆರ್ಪಿಯಿಂದ ಡಿಡಿಪಿಐಯವರೆಗೆ ವೈಯಕ್ತಿಕ ವಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಇದರ ಜತೆಗೆ ಶಾಲೆಗಳು ಹಿಂದುಳಿದಿರುವಿಕೆಗೆ ಕಾರಣ ಮತ್ತು ಪರಿಹಾರ ಗುರುತಿಸಿಕೊಳ್ಳಬೇಕು ಎಂದೂ ಸೂಚಿಸಲಾಗಿದೆ.
ಕಲಿಕಾ ಗುಣಮಟ್ಟವನ್ನಷ್ಟೇ ಪರಿಶೀಲಿಸಿ
ಶಾಲಾ ಸಂದರ್ಶನದ ಸಂದರ್ಭದಲ್ಲಿ ಶಾಲೆಯ ಬೋಧನಾ ಕಲಿಕಾ ಚಟುವಟಿಕೆಗಳ ತಪಾಸಣೆ ನಡೆಸಬೇಕು. ಆಡಳಿತಾತ್ಮಕ ವಿಚಾರಗಳ ಬಗ್ಗೆ ಗಮನ ಹರಿಸುವ ಅಗತ್ಯವಿಲ್ಲ. ಕಲಿಕೆಯಲ್ಲಿ ಹಿಂದುಳಿದಿರುವ ಶಾಲೆಗೆ ಆದ್ಯತೆಯ ಮೇಲೆ ಭೇಟಿ ನೀಡಬೇಕು.
ಸಂದರ್ಶನ ಸಮಯದಲ್ಲಿ ಕಡ್ಡಾಯವಾಗಿ ವಿಷಯವಾರು ಸಂಪನ್ಮೂಲ ಶಿಕ್ಷಕರನ್ನು ಒಳಗೊಂಡ ತಂಡ ತಂಡ ರಚಿಸಿಕೊಂಡು ಶಾಲೆಗಳ ಸಂದರ್ಶನ ನೀಡಿ ಬೋಧನಾ ಕಲಿಕಾ ಚಟುವಟಿಕೆಯನ್ನು ಪರಿಶೀಲಿಸಿ ಮಾರ್ಗದರ್ಶನ ನೀಡಬೇಕು ಎಂದು ಸೂಚಿಸಲಾಗಿದೆ.
ಭೇಟಿ ರೂಪರೇಖೆ ಹೇಗಿದೆ?
ಸಂಚಾರ ಮಾರ್ಗನಕ್ಷೆಯನ್ನು ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗುರುತಿಸಿ ಉಪ ನಿರ್ದೇಶಕರಿಗೆ ನೀಡಬೇಕು. ಬಳಿಕ ಉಪನಿರ್ದೇಶಕರು ಪ್ರತೀ ತಂಡಕ್ಕೆ ಎರಡು ಪ್ರಾಥಮಿಕ ಮತ್ತು ಒಂದು ಪ್ರೌಢಶಾಲೆಯಂತೆ ಸಂದರ್ಶಿಸಬೇಕಾದ ಶಾಲೆಗಳ ಮಾರ್ಗದ ನಕ್ಷೆಯನ್ನು ನೀಡ ಬೇಕು.
ಒಂದು ವಾರ ಕಾಲ ಎಲ್ಲ 10 ತಂಡಗಳು ಏಕಕಾಲಕ್ಕೆ ಪ್ರತೀ ದಿನ ಒಂದೊಂದು ತಾಲೂಕಿಗೆ ಅನಿರೀಕ್ಷಿತ ಸಂದರ್ಶನ ನೀಡಬೇಕು. ಈ ಮೂಲಕ ದಿನವೊಂದಕ್ಕೆ ಒಂದು ತಾಲೂಕಿನ 30 ಶಾಲೆಗಳಿಗೆ ಭೇಟಿ ನೀಡಿದಂತಾಗುತ್ತದೆ. 6 ದಿನಗಳಿಗೆ ಡಿಡಿಪಿಐ ವ್ಯಾಪ್ತಿಯಲ್ಲಿ 5 ತಾಲೂಕು ಇದ್ದಲ್ಲಿ ಜಿಲ್ಲೆಗೆ ಒಟ್ಟು 150 ಶಾಲೆಗಳ ಶೈಕ್ಷಣಿಕ ತಪಾಸಣೆ ನಡೆದಂತಾಗುತ್ತದೆ.
ತಂಡದ ಮುಖ್ಯಸ್ಥರ ಹೊಣೆಗಾರಿಕೆ
ಪ್ರತೀ ತಂಡದಲ್ಲಿ ಕಡ್ಡಾಯವಾಗಿ ತಂಡದ ಮುಖ್ಯಸ್ಥರಾಗಿ ಡಿಡಿಪಿಐ, ಬಿಇಒ, ಇಒ ಇರಬೇಕು. ಪಾಠದಲ್ಲಿ ನ್ಯೂನತೆ ಇದ್ದಲ್ಲಿ ಸ್ಥಳದಲ್ಲೇ ಮಾದರಿ ಪಾಠ ಮಾಡುವ ಜತೆಗೆ ಸೂಕ್ತ ಸಲಹೆ, ಮಾರ್ಗದರ್ಶನ ನೀಡಬೇಕು.
ಶಾಲಾ ಸಂದರ್ಶನ ಸಮಯದಲ್ಲಿ ಮಾಹಿತಿ ಸಂಗ್ರಹಿಸಿ ಕ್ರೋಡೀಕರಿಸಿ ಪ್ರಗತಿ ವರದಿ ಆಧರಿಸಿ ಶಾಲೆಯನ್ನು ಶ್ರೇಣೀಕರಿಸಿ ಗೂಗಲ್ ಶೀಟ್ನಲ್ಲಿ ಮಾಹಿತಿ ಹಾಕಬೇಕು. ಕಡಿಮೆ/ ಸಾಧಾರಣ ಸಾಧನೆಗೈದ ಶಾಲೆಗಳ ಪಟ್ಟಿ ತಯಾರಿಸಿ ಮುಂದಿನ ಶಾಲಾ ಸಂದರ್ಶನದಲ್ಲಿ ಆದ್ಯತೆ ಮೇಲೆ ಅದೇ ಶಾಲೆಗಳಿಗೆ ಸಂದರ್ಶನ ನೀಡಿ ಶೈಕ್ಷಣಿಕ ಸುಧಾರಣೆ ಕಂಡುಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಮಿಂಚಿನ ಸಂಚಾರಕ್ಕೆ ಕಾರಣವೇನು?
-ಈ ಬಾರಿ ಎಸೆಸೆಲ್ಸಿ ಪರೀಕ್ಷೆ -1ರ ಫಲಿತಾಂಶ ನಿರೀಕ್ಷೆಗಿಂತ ಕಡಿಮೆ
-ಕೇವಲ ಶೇ.62.34 ಫಲಿತಾಂಶ, ಕೃಪಾಂಕ ನೀಡಿದ್ದರ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ
-ಶೇ.70ಕ್ಕೂ ಅಧಿಕ ಫಲಿತಾಂಶದ ಗುರಿ, ಕಡಿಮೆ ಫಲಿತಾಂಶಕ್ಕೆ ಡಿಡಿಪಿಐಗಳೇ ಹೊಣೆ
-ಸಿಎಂ ಕಠಿನ ಎಚ್ಚರಿಕೆ ಬೆನ್ನಲ್ಲೇ “ಮಿಂಚಿನ ಸಂಚಾರ’ ಯೋಜನೆಯಡಿ ಸಂಚಾರ
-ಒಂದು ವಾರದಲ್ಲಿ 10 ತಂಡ ಗಳಿಂದ ಏಕಕಾಲಕ್ಕೆ ದಿನಕ್ಕೊಂದು ತಾಲೂಕಿನಲ್ಲಿ ಪರಿಶೀಲನೆ
2017ರಿಂದಲೇ ಸಂಚಾರ
“ಮಿಂಚಿನ ಸಂಚಾರ” ಕಾರ್ಯಕ್ರಮ 2017ರಿಂದಲೇ ಶಿಕ್ಷಣ ಇಲಾಖೆಯಲ್ಲಿ ಜಾರಿಯಲ್ಲಿದೆ. ಶಾಲೆಗಳು ತೆರೆಯಲ್ಪಟ್ಟಿವೆಯೇ, ಶೈಕ್ಷಣಿಕ ಚಟುವಟಿಕೆ ಆರಂಭವಾಗಿದೆಯೇ ಎಂಬುದನ್ನು ಪರಿಶೀಲಿಸಲು ಇದು ಸೀಮಿತವಾಗಿತ್ತು. ಜಿಲ್ಲಾ ಮಟ್ಟದಲ್ಲಿ ಎರಡು ಮತ್ತು ತಾಲೂಕು ಮಟ್ಟದಲ್ಲಿ ಒಂದು ತಂಡ ಮಿಂಚಿನ ಸಂಚಾರ ನಡೆಸುತ್ತಿತ್ತು. ಆ ಬಳಿಕ 2024ರಲ್ಲಿ “ಮಿಂಚಿನ ಸಂಚಾರ” ವನ್ನು ಪರಿಷ್ಕರಿಸಿ ಆದೇಶಿಸಲಾಗಿತ್ತು. ಆದರೆ ನಿರೀಕ್ಷಿತ ಫಲ ಸಿಕ್ಕಿರಲಿಲ್ಲ.
ಇದನ್ನೂ ನೋಡಿ: ‘ಬೂಕರ್’ ಅನುಭವವನ್ನು ಬಿಚ್ಚಿಟ್ಟ ಬಾನು ಮುಷ್ತಾಕ್ Janashakthi Media