ಇಬ್ಬರು ಪುತ್ರರೊಂದಿಗೆ ವೈದ್ಯ- ವಕೀಲೆ ಆತ್ಮಹತ್ಯೆ

ಚೆನ್ನೈ:ಚೆನ್ನೈನ ಅಣ್ಣಾನಗರದಲ್ಲಿರುವ ಮನೆಯೊಂದರಲ್ಲಿ ವೈದ್ಯರ ಕುಟುಂಬವೊಂದು ಶವವಾಗಿ ಪತ್ತೆಯಾಗಿದೆ. ವೈದ್ಯ, ಅವರ ಪತ್ನಿ ಮತ್ತು ಇಬ್ಬರು ಪುತ್ರರು ಸಾವನ್ನಪ್ಪಿದ್ದಾರೆ.

ಬಾಲಮುರುಗನ್, ಸೋನಾಲಜಿಸ್ಟ್, ಅವರ ವಕೀಲೆ ಪತ್ನಿ ಸುಮತಿ ಮತ್ತು ಅವರ ಪುತ್ರರಾದ ನೀಟ್ ಆಕಾಂಕ್ಷಿ ಜಸ್ವಂತ್ ಕುಮಾರ್ ಮತ್ತು 11 ನೇ ತರಗತಿ ವಿದ್ಯಾರ್ಥಿ ಲಿಂಗೇಶ್ ಕುಮಾರ್ ಎರಡು ಕೊಠಡಿಗಳಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆರ್ಥಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಇದನ್ನು ಓದಿ :-ರಾಜ್ಯ ಬಜೆಟ್: ಸಾರ್ವಜನಿಕ – ಖಾಸಗಿ ಸಹಭಾಗಿತ್ವದ ಬಜೆಟ್

ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಾವು ಶಂಕಿಸುತ್ತೇವೆ. ಅವರು ಅಪಾರ ಪ್ರಮಾಣದಲ್ಲಿ ಸಾಲ ಮಾಡಿಕೊಂಡಿದ್ದರು,. ನಾವು ತನಿಖೆ ನಡೆಸುತ್ತಿದ್ದೇವೆ. ಇದುವರೆಗೆ ಯಾರಿಂದಲೂ ಔಪಚಾರಿಕ ದೂರು ಬಂದಿಲ್ಲ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕುಟುಂಬವು ಯಾವುದೇ ಡೆತ್ ನೋಟ್ ಬಿಟ್ಟು ಹೋಗಿಲ್ಲ ಅಥವಾ ಸಾಲಗಾರರಿಂದ ಯಾವುದೇ ಒತ್ತಡಕ್ಕೆ ಒಳಗಾಗಿದ್ದರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ನಗರದಲ್ಲಿ ಹಲವಾರು ಅಲ್ಟ್ರಾಸೌಂಡ್ ಕೇಂದ್ರಗಳನ್ನು ನಡೆಸುತ್ತಿದ್ದ ಡಾ.ಬಾಲಮುರುಗನ್ ಅವರು ಭಾರಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ, ಇಂದು ಬೆಳಿಗ್ಗೆ, ವೈದ್ಯರ ಡ್ರೈವರ್ ಮನೆಗೆ ಬಂದಾಗ, ಯಾರೂ ಪ್ರತಿಕ್ರಿಯಿಸದಿದ್ದಾಗ ಅನುಮಾನ ಮೂಡಿದೆ. ಯಾರು ಬಾಗಿಲು ತೆರೆಯದ ಕಾರಣ ಅವರು ಪೊಲೀಸರ ಮೊರೆ ಹೋಗಿದ್ದು, ಬಾಲಮುರುಗನ್ (52), ಅವರ ಪತ್ನಿ ಸುಮತಿ (47) ಮತ್ತು ಅವರ ಪುತ್ರರ ಶವಗಳು ಪತ್ತೆಯಾಗಿವೆ.

 

Donate Janashakthi Media

Leave a Reply

Your email address will not be published. Required fields are marked *