ದೇಶಕ್ಕೆ ಆರ್​ಎಸ್​ಎಸ್​ನವರ ಕೊಡುಗೆ ನಗಣ್ಯ, ಅವರಿಗೆ ಸಮಾಜದಲ್ಲಿ ಬದಲಾವಣೆ ಬೇಕಿಲ್ಲ: ಸಿದ್ಧರಾಮಯ್ಯ

ಮೈಸೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್​ಎಸ್​ಎಸ್)ದವರಿಗೆ ಸಮಾಜದಲ್ಲಿ ಬದಲಾವಣೆ ಬೇಕಿಲ್ಲ. ಅವರಿಂದ ದೇಶಕ್ಕೆ ಕೊಡುಗೆ ಏನೇನೂ ಇಲ್ಲ. ಆರ್​ಎಸ್​ಎಸ್‌ನ ಒಬ್ಬ ಸ್ವಾತಂತ್ರ್ಯ ಹೋರಾಟಗಾರರನ್ನ ತೋರಿಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆರ್​​ಎಸ್​​ಎಸ್​ ವಿರುದ್ಧ ಮತ್ತೆ ತೀವ್ರ ವಾಗ್ದಾಳಿ ನಡೆಸಿದರು.

ಕುರುಬ ಸಂಘದಿಂದ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮ ಭಾಗವಹಿಸಿ ಮಾತನಾಡಿ ಸಿದ್ದರಾಮಯ್ಯ, ಸಾಮಾಜಿಕ ಅವ್ಯವಸ್ಥೆ ವಿರುದ್ಧ ಎಲ್ಲರೂ ಧ್ವನಿ ಎತ್ತಬೇಕು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸಂಗೊಳ್ಳಿ ರಾಯಣ್ಣ ದೇಶಭಕ್ತ. ಅಸಮಾನತೆಯನ್ನು ಹಾಗೆಯೇ ಉಳಿಸುವ ಮೂಲಕ ಶೋಷಣೆ ಮಾಡಲು ದಾರಿಮಾಡಿಕೊಳ್ಳಲಾಗುತ್ತಿದೆ. ಮುಸ್ಲಿಮರನ್ನು ಬೆದರು ಗೊಂಬೆಯಾಗಿಟ್ಟುಕೊಂಡು‌ ದೇಶ ಇಬ್ಭಾಗ ಮಾಡಿದರು ಎಂದರು.

1988ರಲ್ಲಿ ಸಾರಿಗೆ ಇಲಾಖೆ ಸಚಿವನಾಗಿದ್ದ ಸಂದರ್ಭದಲ್ಲಿ ಕನಕದಾಸರ ಕೃತಿ ಕಡಿಮೆ ದರದಲ್ಲಿ ಹಂಚುವ ಕೆಲಸ ಮಾಡಿದ್ದೆ. ಬಳಿಕ ಎಲ್ಲ ಜಿಲ್ಲೆ ಹಾಗೂ ತಾಲೂಕಿನಲ್ಲಿ ಕನಕದಾಸರ ಜಯಂತಿ ಆಚರಣೆ ಆರಂಭವಾಯಿತು. ಬಳಿಕ ನಮ್ಮ ಕುರುಬ ಸಮಾಜ ಜಾಗೃತಿಗೊಂಡಿತು. 1971-72ರಲ್ಲಿ ಕಾಳಿದಾಸ ವಿದ್ಯಾರ್ಥಿ ಬಳಗವನ್ನು ಆರಂಭಿಸಿದೆವು. ಹೆಚ್.ವಿಶ್ವನಾಥ್ ಮತ್ತು ನಾನು ವಿದ್ಯಾರ್ಥಿ ಬಳಗವನ್ನು ಆರಂಭಿಸಿದೇವು ಎಂದು ನೆನಪಿಸಿಕೊಂಡರು.

ಇತಿಹಾಸ ಗೊತ್ತಿಲ್ಲದವರು ಇತಿಹಾಸವನ್ನು ನಿರ್ಮಿಸಲು ಸಾಧ್ಯವಿಲ್ಲ. ಅಸಮಾನತೆ ವಿರುದ್ಧ ಧ್ವನಿ ಎತ್ತಿದವರು ಕನಕದಾಸರು, ಬುದ್ಧ, ಬಸವಣ್ಣ ಅಂತಹ ಮಹಾನ್‌ ವ್ಯಕ್ತಿಗಳು. ಹಿಂದುಳಿದವರು ಇಂದು ಉನ್ನತ ಸ್ಥಾನಕ್ಕೇರಲು ಸಂವಿಧಾನ​​ ಕಾರಣ ಎಂದು ತಿಳಿಸಿದರು.

ಸಿದ್ದರಾಮಯ್ಯಗೆ ಮತ್ತೆ ಮುಖ್ಯಮಂತ್ರಿ ಆಗುವ ಅವಕಾಶವಿದೆ ಎಂದು ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ಹೇಳಿದರು. ಸಿದ್ದರಾಮಯ್ಯ ಬಗ್ಗೆ ಯುವಕನೋರ್ವ ಬರೆದ ಪುಸ್ತಕವನ್ನು ಓದಿದೆ. ಮೊದಲ ಮತ ಹಾಕಿದ ವ್ಯಕ್ತಿ ಮುಖ್ಯಮಂತ್ರಿ ಆಗಿದ್ದಾರೆ ಎಂದು ಬರೆದಿದ್ದಾನೆ. ಸದ್ಯ ಯುವಕರಿಗೆ ಮತ್ತೊಂದು ಅವಕಾಶವಿದೆ. ಹೀಗಾಗಿ ಯುವಕರು ಮತ್ತೊಮ್ಮೆ ಸಿದ್ದರಾಮಯ್ಯಗೆ ಮತ ಹಾಕಿ. ಕನಕದಾಸರ ಜಯಂತಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹುಟ್ಟುಹಬ್ಬ ಎರಡನ್ನು ಒಟ್ಟಿಗೆ ಆಚರಣೆ ಮಾಡಲಾಗಿದೆ.

75ನೇ ವರ್ಷಕ್ಕೆ 75 ಕೆಜಿ ತೂಕದ ಕೇಕ್ ಕಟ್ ಮಾಡಿದ್ದಾರೆ. ಸಿದ್ದರಾಮಯ್ಯ ಸ್ವಾಭಿಮಾನದ ಪ್ರತೀಕ. ಅನ್ನವಿಲ್ಲದೆ ಬದುಕಬಹುದು, ಆದರೆ ಸ್ವಾಭಿಮಾವಿಲ್ಲದೆ ಬದುಕಲಾರದು. ಸಿದ್ದರಾಮಯ್ಯ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ ಎಂದು ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *