ಹೊಸದಿಲ್ಲಿ: ವಕೀಲರೊಬ್ಬರು ಸುಪ್ರೀಂಕೋರ್ಟ್ ವಿಚಾರಣೆ ಸಂದರ್ಭದಲ್ಲಿ ತಮ್ಮತ್ತ ಶೂ ಎಸೆದ ಘಟನೆ ಕುರಿತಂತೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಸಿಜೆಐ ಬಿಆರ್ ಗವಾಯಿ, ಆ ಕ್ಷಣವನ್ನು “ಆಘಾತಕಾರಿ” ಎಂದು ಹೇಳಿದ್ದಾರೆ. ಹೊಸದಿಲ್ಲಿ
ಭಾರತದ ಮುಖ್ಯ ನ್ಯಾಯಮೂರ್ತಿ ಅವರತ್ತ ಶೂ ಎಸೆಯುವುದು ತಮಾಷೆಯ ವಿಷಯವಲ್ಲ. ಹಲವು ವರ್ಷಗಳ ಅವರ ಅಪಾರ ಅನುಭವ ಮತ್ತು ಭಾರತದ ನ್ಯಾಯ ವ್ಯವಸ್ಥೆಗೆ ಗೌರವ ನೀಡುವುದು ನಮ್ಮೆಲ್ಲರ ಜವಾಬ್ದಾರಿ. ಆದರೆ ನ್ಯಾ. ಭುಯಾನ್ ಅವರು ಘಟನೆಯನ್ನು ಬಗ್ಗೆ ತೀಕ್ಷ್ಣ ಅಭಿಪ್ರಾಯಗಳನ್ನು ಹೊರಹಾಕುತ್ತಾ ಈ ಘಟನೆಯನ್ನು ಹಗುರವಾಗಿ ಪರಿಗಣಿಸಬಾರದು” ಎಂದು ಹೇಳಿದರು. ಹೊಸದಿಲ್ಲಿ
ಇದನ್ನೂ ಓದಿ : ನನ್ನತ್ತ ಶೂ ಎಸೆಯುವ ಮೂಲಕ ನೀ ಕುಬ್ಜನಾಗಿಬಿಟ್ಟೆ : ಕೆ.ಮಹಾಂತೇಶ್
ಈ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೂಡ. ಸಿಜೆಐ ಮೇಲೆ ನಡೆದಿರುವ ದಾಳಿಯನ್ನು ತೀವ್ರವಾಗಿ ಖಂಡಿಸಿದರು. ಘಟನೆಯನ್ನು “ಕ್ಷಮೆಗೆ ಅರ್ಹವಲ್ಲದ್ದು” ಎಂದಿರುವ ತುಷಾರ್ ಮೆಹ್ತಾ, ತಮ್ಮತ್ತ ಶೂ ಎಸೆದ ವಕೀಲನ ಮೇಲೆ ಸಿಜೆಐ ಬಿಆರ್ ಗವಾಯಿ ಅವರು ತೋರಿರುವ ಔದಾರ್ಯ ಶ್ಲಾಘನೀಯ ಎಂದು ಬಣ್ಣಿಸಿದರು.
“ತಮ್ಮತ್ತ ಶೂ ಎಸೆದ ವಕೀಲನ ಮೇಲೆ ಸಿಜೆಐ ಬಿಆರ್ ಗವಾಯಿ ಅವರು ಔದಾರ್ಯ ತೋರಿದ್ದಾರೆ. ಅಲ್ಲದೇ ಘಟನೆ ನಡೆದಾಗ ಅವರು ಸಂಯಮದಿಂದ ವರ್ತಿಸಿ ಪರಿಸ್ಥಿತಿ ಬಿಗಡಾಯಿಸದಂತೆ ನೋಡಿಕೊಂಡರು. ಇದು ನಿಜಕ್ಕೂ ಅವರ ವ್ಯಕ್ತಿತ್ವವನ್ನು ಬಣ್ಣಿಸುತ್ತದೆ” ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.
ಕಳೆದ ಸೋಮವಾರ (ಅ.06)ರಂದು ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ ರಾಕೇಶ್ ಕಿಶೋರ್ ಎಂಬುವವರು, ಸಿಜೆಐ ಬಿಆರ್ ಗವಾಯಿ ಅವರು ಕುಳಿತಿದ್ದ ಪೀಠದತ್ತ ತಮ್ಮ ಶೂ ಎಸೆದಿದ್ದರು. ಭಗವಾನ್ ವಿಷ್ಣುವಿನ ಮೂರ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಬಿಆರ್ ಗವಾಯಿ ನೀಡಿದ್ದ ಹೇಳಿಕೆಯನ್ನು ಖಂಡಿಸಿ, ಅವರತ್ತ ಶೂ ಎಸೆದಿದ್ದಾಗಿ ವಕೀಲ ರಾಕೇಶ್ದ ಕಿಶೋರ್ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದರು.
ಕೂಡಲೇ ರಾಕೇಶ್ ಕಿಶೋರ್ ಅವರನ್ನು ವಶಕ್ಕೆ ಪಡೆದಿದ್ದ ಭದ್ರತಾ ಸಿಬ್ಬಂದಿ, ಅವರನ್ನು ದೆಹಲಿ ಪೊಲೀಸರಿಗೆ ಒಪ್ಪಿಸಿದ್ದರು. ಅದರೆ ಘಟನೆಯಿಂದ ವಿಚಲಿತರಾಗದ ಸಿಜೆಐ ಗವಾಯಿ, ತಮ್ಮತ್ತ ಶೂ ಎಸೆದ ವಕೀಲನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಸೂಚಿಸಿದ್ದರು. ಅದರಂತೆ ದೆಹಲಿ ಪೊಲೀಸರು ಯಾವುದೇ ಪ್ರಕರಣದ ದಾಖಲಿಸದೇ ವಕೀಲ ರಾಕೇಶ್ ಕಿಶೋರ್ ಅವರನ್ನು ಬಿಡುಗಡೆ ಮಾಡಿದ್ದರು.
ಈ ಘಟನೆ ಇಡೀ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಸಿಜೆಐ ಮೇಲಿನ ದಾಳಿ ಪ್ರಧಾನಿ ಮೋದಿ ಖಂಡನೆ ವ್ಯಕ್ತಪಡಿಸಿದ್ದರು. ಪ್ರತಿಪಕ್ಷಗಳ ಅನೇಕ ನಾಯಕರೂ ಕೂಡ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದರು.
ಇದನ್ನೂ ನೋಡಿ : ಅವನು ಎಸೆದ ಚಪ್ಪಲಿ ಗವಾಯಿವರ ಸಮುದಾಯದ ಶ್ರಮ ಸಂಸ್ಕೃತಿJanashakthi Media
