ಮೈಸೂರು | ನಿವೃತ್ತರ ಪಿಂಚಣಿ ಹಣಕ್ಕೆ ಪರದಾಟ : ಸರ್ಕಾರದ ಮೊರೆ ಹೋಗಲು ‘ಮೈಸೂರು ಜಿಲ್ಲಾ ನಿವೃತ್ತ ನೌಕರರ ಸಂಘ’ ನಿರ್ಣಯ

ಮೈಸೂರು: ರಾಜ್ಯ ಸರ್ಕಾರಿ ಸೇವೆಯಿಂದ ನಿವೃತ್ತರಾದ ಹಿರಿಯ ನಾಗರಿಕರಿಗೆ ಮೈಸೂರಿನಲ್ಲಿ ಪಿಂಚಣಿ ಹಣ ಪಡೆಯುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರತಿ ತಿಂಗಳು ಸರ್ಕಾರದಿಂದ ಪಿಂಚಣಿ ಹಣ ಬಿಡುಗಡೆಯಾಗುವುದು ವಿಳಂಬವಾಗುತ್ತಿರುವುದರಿಂದ ಜಿಲ್ಲೆಯ ಸಾವಿರಾರು ನಿವೃತ್ತ ನೌಕರರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಮೈಸೂರು

ಸಾಮಾನ್ಯವಾಗಿ ಪ್ರತಿ ತಿಂಗಳ ಮೊದಲ ದಿನಾಂಕದಂದು ಪಿಂಚಣಿ ಹಣ ಬ್ಯಾಂಕ್ ಖಾತೆಗೆ ಜಮೆಯಾಗ ಬೇಕಿದೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ಇದು 5 ರಿಂದ 10 ದಿನಗಳಷ್ಟು ವಿಳಂಬವಾಗುತ್ತಿದೆ.

ಇದನ್ನೂ ಓದಿ : ಕಬ್ಬಿಣ ಅದಿರು ಅಕ್ರಮವಾಗಿ ರಫ್ತು: ಕರ್ನಾಟಕ ಮತ್ತು ಹರಿಯಾಣದ ಹಲವು ಸ್ಥಳಗಳಿಗೆ ಇ.ಡಿ ದಾಳಿ

ಪಿಂಚಣಿ ತಡವಾಗಿ ಬಿಡುಗಡೆಯಾಗಲು ಸರ್ಕಾರದಿಂದಲೇ ಹಣಕಾಸು ಇಲಾಖೆಯ ನಿರ್ಬಂಧ (Financial Constraint) ಮತ್ತು ಅನುದಾನ ಬಿಡುಗಡೆ ವಿಳಂಬವೇ ಮುಖ್ಯ ಕಾರಣ ಎಂದು ಬ್ಯಾಂಕ್ ಮತ್ತು ಖಜಾನೆ ಮೂಲಗಳು ತಿಳಿಸಿವೆ.

ಈ ವಿಳಂಬದಿಂದಾಗಿ ನಿವೃತ್ತ ನೌಕರರು ತಮ್ಮ ಮಾಸಿಕ ಅಗತ್ಯಗಳಾದ ಔಷಧಿ, ಮನೆ ಬಾಡಿಗೆ, ಮತ್ತು ಮಕ್ಕಳ ಶಿಕ್ಷಣದ ಶುಲ್ಕ ಪಾವತಿಸಲು ಪರದಾಡುತ್ತಿದ್ದಾರೆ. “ನಮ್ಮ ಇಳಿವಯಸ್ಸಿನಲ್ಲಿ ಸಕಾಲಕ್ಕೆ ಪಿಂಚಣಿ ಸಿಗದಿದ್ದರೆ ಬದುಕುವುದು ಹೇಗೆ?” ಎಂದು ಹಿರಿಯ ನಾಗರಿಕರು ಪ್ರಶ್ನಿಸಿದ್ದಾರೆ.

ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಗುರುವಾರ ನಡೆದ ಮೈಸೂರು ಜಿಲ್ಲಾ ನಿವೃತ್ತ ನೌಕರರ ಸಂಘ ಮಹತ್ವದ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಪಿಂಚಣಿ ವಿತರಣೆಯಲ್ಲಿನ ವಿಳಂಬಕ್ಕೆ ಕಾರಣವಾದ ಹಣಕಾಸು ಇಲಾಖೆ ವಿರುದ್ಧ ರಾಜ್ಯ ಸರ್ಕಾರಕ್ಕೆ ತಕ್ಷಣವೇ ಮನವಿ ಸಲ್ಲಿಸಿ, ಖಜಾನೆಯಲ್ಲಿ ಅಗತ್ಯ ಹಣ ಲಭ್ಯವಾಗುವಂತೆ ನೋಡಿಕೊಳ್ಳಲು ಒತ್ತಾಯಿಸುವುದು.

ಮುಖ್ಯಮಂತ್ರಿಗಳಿಗೆ ಮತ್ತು ಹಣಕಾಸು ಸಚಿವರಿಗೆ ನೇರವಾಗಿ ಪತ್ರ ಬರೆದು ನಿವೃತ್ತರ ಸಂಕಷ್ಟವನ್ನು ವಿವರಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ಸರ್ಕಾರವು ಒಂದು ವಾರದೊಳಗೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ, ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲು ಸಂಘವು ಎಚ್ಚರಿಕೆ ನೀಡಿದೆ.

ಸಂಘದ ಅಧ್ಯಕ್ಷರಾದ ಶ್ರೀ ರಾಮಕೃಷ್ಣಯ್ಯ ಮಾತನಾಡಿ, “ದೇಶಕ್ಕಾಗಿ ದುಡಿದ ಹಿರಿಯ ನಾಗರಿಕರಿಗೆ ಇಂತಹ ಹೀನಾಯ ಪರಿಸ್ಥಿತಿ ಉಂಟಾಗಿರುವುದು ನಾಚಿಕೆಗೇಡಿನ ಸಂಗತಿ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಪಿಂಚಣಿ ಬಿಡುಗಡೆಗೆ ಸೂಕ್ತ ವ್ಯವಸ್ಥೆ ಮಾಡಬೇಕು” ಎಂದು ಒತ್ತಾಯಿಸಿದರು.

ಇದನ್ನೂ ನೋಡಿ : ಉತ್ತರ ಕನ್ನಡ | ಎಮರ್ಜೆನ್ಸಿಯಲ್ಲಿ ಜೀವ ಉಳಿಸಿಕೊಳ್ಳಲು ಸುಸಜ್ಜಿತ ಆಸ್ಪತ್ರೆ ಇಲ್ಲ | ಯಮುನಾ ಗಾಂವ್ಕರ್

Donate Janashakthi Media

Leave a Reply

Your email address will not be published. Required fields are marked *