ಅಮಾನವೀಯತೆ: ದಲಿತ ಬೆಳದಿದ್ದ 2 ಎಕ್ಕರೆ ಕಾಫಿ ಗಿಡ ಕಡಿದು ಹಾಕಿದ ಅರಣ್ಯ ಇಲಾಖೆ

ಸಕಲೇಶಪುರ: ದಲಿತ ರೈತನೊಬ್ಬ ಬೆಳದಿದ್ದ 2 ಎಕ್ಕರೆ ಕಾಫಿ ಗಿಡಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಡಿದು ಹಾಕಿರುವ ಅಮಾನವೀಯ ಪ್ರಕರಣ ಸಕಲೇಶಪುರ ತಾಲ್ಲೂಕು ಉಚ್ಚಂಗಿ ಗ್ರಾಮದಲ್ಲಿ ನಡೆದಿದೆ.

ರುದ್ರಯ್ಯ ಲೇಟ್ ತಿಪ್ಪಯ್ಯ ಎಂಬವರು  ಯಸಳೂರು ಹೋಬಳಿ, ಉಚ್ಚಂಗಿ ಗ್ರಾಮದಲ್ಲಿ ಸರ್ವೆ ನಂ.2ನ ಎರಡು ಎಕ್ಕರೆ ವಿಸ್ತೀರ್ಣದ ಜಮೀನು ಹೊಂದಿದ್ದು, ಈ ಜಮೀನಿನಲ್ಲಿ ಕಾಫಿ, ಕಾಳುಮೆಣಸು, ಬಾಳೆ ಸಾಗು ಮಾಡಿದ್ದು, ಹಲಸು, ಮಾವು ಜಾತಿಯ ಮರಗಳನ್ನು ಬೆಳೆಸಿದ್ದಾರೆ.

ಸದರಿ ಜಮೀನು, ರುದ್ರಯ್ಯ ರವರೆಗೆ ಬಗುರ್ ಹುಕುಂ ಮೂಲಕ ಮಂಜೂರಿಯಾಗಿರುತ್ತದೆ ಹಾಗೂ ಈ ಜಮೀನಿಗೆ ಸಂಬಂಧಪಟ್ಟಂತೆ ಎಂ.ಆರ್. ಹೆಚ್12/2015-17ರಂತೆ ಖಾತೆ, ಪಹಣಿ ಹಾಗೂ ಇತರೆ ವಿಶಿಷ್ಟ ಸರ್ಕಾರಿ ದಾಖಲಾತಿಗಳು ಕ್ರಮಬದ್ದವಾಗಿ ಇವೆ. ಆದರೆ,  ದುರುದ್ದೇಶದಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಮರಗಳನ್ನು ಕಡಿದುಹಾಕಿದ್ದಾರೆ ಎಂದು ರುದ್ರಯ್ಯ ಆರೋಪಿಸಿದರು.

ಈ ಅನ್ಯಾಯವನ್ನು ಸರಿಪಡಿಸಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಹಾಗೂ ತಪ್ಪಿತಸ್ಥರ ವಿರುದ್ಧದ ಕಠಿಣ ಕ್ರಮ ಕೈಗೋಳ್ಳದಿದ್ದರೆ, ಉಗ್ರ ಪ್ರತಿಭಟನೆ ನಡೆಸುವುದಾಗಿ ಹಿರಿಯ ದಲಿತ ಮುಖಂಡ ಎಸ್ ಎನ್ ಮಲ್ಲಪ್ಪ, ವಕೀಲ ವೇಣು ಕುಮಾರ್, ಭೀಮ ದ್ವನಿ ಸಂಘದ ಅಧ್ಯಕ್ಷ ನಾಗೇಶ್ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *