ಸಾರ್ವಜನಿಕರ ಹಣ ವಂಚನೆ: ಅಧ್ಯಕ್ಷ ಡಿ.ಕೆ. ಸಿದ್ರಾಮ ಬಂಧನ

ಬೀದರ್‌: ಮೇ 9 ಶುಕ್ರವಾರದಂದು ನಗರದ ಡಿಸಿಸಿ ಬ್ಯಾಂಕಿಗೆ ಸುಳ್ಳು ಮಾಹಿತಿ ಕೊಟ್ಟು, ಸಾರ್ವಜನಿಕರ ಹಣ ವಂಚಿಸಿರುವ ಆರೋಪದಡಿ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ (ಎನ್‌ಎಸ್‌ಎಸ್‌ಕೆ) ಅಧ್ಯಕ್ಷ ಡಿ.ಕೆ. ಸಿದ್ರಾಮ ರನ್ನು ಪೊಲೀಸರು ಬಂಧಿಸಿದ್ದಾರೆ.

ಜನವಾಡ ಠಾಣೆ ಪೊಲೀಸರು ಶುಕ್ರವಾರ ಬೆಳಿಗ್ಗೆ ಭಾಲ್ಕಿಗೆ ತೆರಳಿ, ಡಿ.ಕೆ. ಸಿದ್ರಾಮ ರನ್ನು ಅವರ ನಿವಾಸದಲ್ಲಿ ವಶಕ್ಕೆ ಪಡೆದರು. ಆನಂತರ ಅವರನ್ನು ಬೀದರ್‌ ಜಿಲ್ಲಾ ನ್ಯಾಯಾಲಯದ ಎದುರು ಹಾಜರುಪಡಿಸಿದರು. ನ್ಯಾಯಾಲಯವು ಸಿದ್ರಾಮ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತು.

ಇದನ್ನೂ ಓದಿ: ವಲಸೆ ಕಾರ್ಮಿಕರ ಮೇಲೆ ದೌರ್ಜನ್ಯ: ಸಿಐಟಿಯು ಖಂಡನೆ

ಯಾರ್‍ಯಾರ ವಿರುದ್ಧ ಪ್ರಕರಣ?

ಹಣ ವಂಚನೆಗೆ ಸಂಬಂಧಿಸಿದಂತೆ ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಡಿ.ಕೆ. ಸಿದ್ರಾಮ, ಮಾಜಿ ವ್ಯವಸ್ಥಾಪಕ ಅಪರಂಜಿ ಬಿ.ಎಸ್‌., ಡಿಸಿಸಿ ಬ್ಯಾಂಕಿನ ಮಾಜಿ ಸಿಇಒ ಮಹಾಜನ್‌ ಮಲ್ಲಿಕಾರ್ಜುನ, ಬ್ಯಾಂಕಿನ ಮಾಜಿ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಮಿ, ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕ ಸದಾಶಿವ ಪಾಟೀಲ, ಇಮಾಮಪುರ ಡಿಸಿಸಿ ಬ್ಯಾಂಕಿನ ಶಾಖೆ ಮಾಜಿ ವ್ಯವಸ್ಥಾಪಕ ಸೈಯದ್‌ ರಾಹಿಲ್‌ ಅಹಮ್ಮದ್‌, ಎನ್‌ಎಸ್‌ಎಸ್‌ಕೆ ಇತರೆ ನಿರ್ದೇಶಕರ ವಿರುದ್ಧ ಜನವಾಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ನೋಡಿ: ಪಿಚ್ಚರ್‌ ಪಯಣ 157|‌ ‘ಫುಲೆ’ ಚಿತ್ರ ವಿಮರ್ಶೆ | ಎಮ್.ನಾಗರಾಜ ಶೆಟ್ಟಿ Janashakthi Media

Donate Janashakthi Media

Leave a Reply

Your email address will not be published. Required fields are marked *