ರೈಲಿನಲ್ಲಿ ದ್ವೇಷ ಕೃತ್ಯಕ್ಕೆ ಖಂಡನೆ: “ವಿಷಕಾರಿ ಅಜೆಂಡಾ ದೇಶವನ್ನು ಆಳವಾದ ಪ್ರಪಾತಕ್ಕೆ ಕೊಂಡೊಯ್ಯುತ್ತಿರುವುದರ ಎಚ್ಚರಿಕೆಯ ಗಂಟೆ”

ಮುಂಬೈಗೆ ತೆರಳುತ್ತಿದ್ದ ರೈಲಿನಲ್ಲಿ ಒಬ್ಬ ರೈಲ್ವೇ ಪೋಲೀಸ್ ಫೋರ್ಸ್(ಆರ್‌ ಪಿ ಎಫ್‍) ಕಾನ್ಸ್‌ಟೇಬಲ್ ತನ್ನ ಮೇಲಧಿಕಾರಿ ಮತ್ತು ಇತರ ಮೂವರು ಪ್ರಯಾಣಿಕರನ್ನು ಹತ್ಯೆಗೈದ ಭಯಾನಕ ಘಟನೆ ವರದಿಯಾಗಿದೆ. ಅದನ್ನು ತನಿಖೆ ಮಾಡುವುದಾಗಿ ಹೇಳಿದ ಅಧಿಕಾರಿಗಳ ಆರಂಭಿಕ ವಿವರಣೆಯಂತೆ ಇದನ್ನು ವಿಚಲಿತ ಮನಸ್ಸಿನ ಕ್ರಿಯೆಗಳಾಗಿ ನೋಡಬಾರದು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ. ಕೊಲ್ಲಲ್ಪಟ್ಟ ಎಲ್ಲಾ ಪ್ರಯಾಣಿಕರು ಮುಸ್ಲಿಮರು. ಕಾನ್‌ಸ್ಟೆಬಲ್ ಒಂದು ಕೋಚ್‌ನಿಂದ ಇನ್ನೊಂದು ಕೋಚ್‌ಗೆ ಹೋಗಿ ಉದ್ದೇಶಪೂರ್ವಕವಾಗಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದ್ದಾನೆ.

ಅಧಿಕಾರದಲ್ಲಿರುವವರು ಹಗಲಿರುಳು ಮಾಡುತ್ತಿರುವ ದ್ವೇಷ ಭಾಷಣಗಳು, ಮುಸ್ಲಿಂ ಸಮುದಾಯವನ್ನು ರಾಕ್ಷಸರೆಂಬಂತೆ ಚಿತ್ರಿಸುವುದು ಮತ್ತು ಅವರ ವಿರುದ್ಧ ಕೋಮುವಾದದ ನಿಘಂಟಿನಲ್ಲಿರುವ ಪ್ರತಿಯೊಂದು ನಿಂದನೆಯ ಪದಗಳನ್ನು ಬಳಸುತ್ತಿರುವುದರ ನೇರ ಪರಿಣಾಮ ಇದು. ಇನ್ನೂ ದೃಢೀಕರಿಸಬೇಕಾದ ವೀಡಿಯೊವೊಂದು, ವ್ಯಕ್ತಿಯೊಬ್ಬ  ಮುಸ್ಲಿಮರನ್ನು ಪಾಕಿಸ್ತಾನ ಮುನ್ನಡೆಸುತ್ತಿದೆ ಮತ್ತು ಅವರು ಭಾರತದಲ್ಲಿ ಬದುಕ ಬಯಸಿದರೆ ಮೋದಿ ಮತ್ತು ಯೋಗಿಗೆ ಮತ ಹಾಕಬೇಕು ಎಂದು ನಿರ್ದಿಷ್ಟವಾಗಿ ಉಲ್ಲೇಖಿಸಿರುವುದನ್ನು ತೋರಿಸುತ್ತದೆ. ಬಿಜೆಪಿ ನಾಯಕರು ಬಳಸುವ ಭಾಷೆಯನ್ನೇ ಆ ವ್ಯಕ್ತಿ ಪ್ರತಿಧ್ವನಿಸುತ್ತಿದ್ದ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಟಿಪ್ಪಣಿ ಮಾಡಿದೆ.

ಇದನ್ನೂ ಓದಿ:ಮಧ್ಯಪ್ರದೇಶ: ದೇವಸ್ಥಾನದ ಆವರಣದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಗುಂಪು ಅತ್ಯಾಚಾರ

ದ್ವೇಷದ ಭಾಷಣವು ದೇಶಕ್ಕೆ ವಿನಾಶಕಾರಿಯಾಗುವ  ಪರಿಣಾಮಗಳತ್ತ ಒಯ್ಯುತ್ತದೆ, ಇದರ ವಿರುದ್ಧ ಕಠಿಣವಾಗಿ  ವ್ಯವಹರಿಸಬೇಕು ಎಂದು ಸುಪ್ರೀಂ ಕೋರ್ಟ್ ಪದೇ ಪದೇ ಎಚ್ಚರಿಸಿದೆ. ಇನ್ನೂ ಆತಂಕಕಾರಿ ಸಂಗತಿಯೆಂದರೆ, ಇಂತಹ ಕೋಮುವಾದಿ ಚಿಂತನೆಯು ಅಧಿಕೃತವಾಗಿ ಭದ್ರತೆಯನ್ನು ಒದಗಿಸುವ  ಕರ್ತವ್ಯಕ್ಕೆ ನೇಮಕರಾರದವರ  ಮೇಲೆ ಪರಿಣಾಮ ಬೀರುತ್ತಿದೆ ಎಂಬುದನ್ನು ಈ ಘಟನೆಯು ಸ್ಪಷ್ಟವಾಗಿ ತೋರಿಸುತ್ತದೆ ಎಂದಿರುವ ಪೊಲಿಟ್‍ ಬ್ಯುರೊ  ಈ ಖಂಡನೀಯ ಘಟನೆಯು ಭಾರತಕ್ಕೆ, ಹಿಂದುತ್ವ ಶಕ್ತಿಗಳ ವಿಷಕಾರಿ ಅಜೆಂಡಾ ದೇಶವನ್ನು ಆಳವಾದ ಪ್ರಪಾತಕ್ಕೆ ಕೊಂಡೊಯ್ಯುತ್ತಿದೆ ಎಂಬುದರ ಎಚ್ಚರಿಕೆಯ ಗಂಟೆಯಾಗಿದೆ ಎಂದು ಹೇಳಿದೆ.

ಇದನ್ನೂ ಓದಿದ್ವೇಷಾಪರಾಧ: 3 ಮುಸ್ಲಿಮರಿಗೆ ಗುಂಡಿಕ್ಕಿ ‘ಭಾರತದಲ್ಲಿರಬೇಕಾದರೆ ಮೋದಿ ಯೋಗಿಗೆ ಮತಹಾಕಿ’ ಎಂದ ರೈಲ್ವೆ ಪೊಲೀಸ್ ಅಧಿಕಾರಿ!

Donate Janashakthi Media

Leave a Reply

Your email address will not be published. Required fields are marked *