ಸಮುದಾಯ ರಾಜ್ಯ ಸಮ್ಮೇಳನ ಲಾಂಛನ ಬಿಡುಗಡೆ ಕಾರ್ಯಕ್ರಮ

ಬೆಂಗಳೂರು: ಸಮುದಾಯ ರಾಜ್ಯ ಸಮ್ಮೇಳನ ಲಾಂಛನ ಬಿಡುಗಡೆ ಕಾರ್ಯಕ್ರಮವು ನವೆಂಬರ್‌ 18-2023 ಶನಿವಾರ ಮಧ್ಯಾಹ್ನ 3ಕ್ಕೆ  ಬೆಂಗಳೂರಿನ ಸೌಹಾರ್ದದಲ್ಲಿ ನಡೆಯಲಿದೆ.

ಅಚ್ಯುತ, ಅಗ್ರಹಾರ ಕೃಷ್ಣಮೂರ್ತಿ, ಸಿ.ಕೆ.ಗುಂಡಣ್ಣ ಮಂಜುಳಾ, ಸುಕನ್ಯಕೆ, ಲಕ್ಷ್ಮಿ ಚಂದ್ರಶೇಖ‌ ಲಾಂಛನ ಬಿಡುಗಡೆ ಮಾಡಲಿದ್ದು ,  ಸಾಂಸ್ಕೃತಿಕ ಕಾರ್ಯಕ್ರಮವನ್ನು ಎಚ್‌.ಜಿ.ಜಯಲಕ್ಷ್ಮಿ ನಡೆಸಿಕೊಡಲಿದ್ದಾರೆ.

ವಿಚಾರ ಗೋಷ್ಠಿ ಉದ್ಘಾಟನೆಯನ್ನು ಮೂಡ್ನಾಕೂಡು ಚಿನ್ನಸ್ವಾಮಿ ಮಾಡಲಿದ್ದು, ವಿಷಯ ವಿಸ್ತರಣೆ ಬಿ.ಸುರೇಶ್‌ ಹಾಗೂ ಈ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ಜಿ.ರಾಮಕೃಷ್ನ ವಹಿಸಲಿದ್ದಾರೆ. ಜೆ.ಲೋಕೇಶ್‌, ಶಶಿಕಾಂತ ಯಡಹಳ್ಳಿ, ಗೌರಿ ದತ್ತು ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.

ಇದೇ ವೇಳೆ ಬಹುಭಾಷಾ ಕವಿಗೋಷ್ಠಿ ನಡೆಯಲಿದ್ದು, ಡಾ.ಕೆ.ಷರೀಫಾ, ಪ್ರೊ.ಕಾಶಿನಾಥ ಅಂಬಲಗಿ, ಅಜಮ್ ಶಾಹೀದ್ ಬೇಗ್, ಚಾಂದಿನಿ, ಕೆ.ಮಹಂತೇಶ್ ಗಿರಿಧರ ಕಾರ್ಕಳ, ಎಸ್‌.ಮಂಜುನಾಥ್‌, ಡಾ.ಶಿವಣ್ಣ, ಪ್ರಮೋದ್.ಕೆ.ಎಂ., ರಮೀಝ್.ಎಸ್ ರವರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಕಲಮಸ್ಸೆರಿ ಸ್ಫೋಟ | ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಕೇರಳ ಸರ್ಕಾರ

ವಿಡಿಯೋ ನೋಡಿ: ದೀಪಾವಳಿ ಹಬ್ಬದ ವಿಶೇಷ ಕವಿತೆ : ನನ್ನ ಹಣತೆ – ಡಾ. ಜಿ.ಎಸ್.‌ ಶಿವರುದ್ರಪ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *