ಬೆಂಗಳೂರು: ಜೂನ್ 14 ಶನಿವಾರ ಸಂಜೆ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಕನ್ನಡ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದುಹಾಕಿದರು ಎಂದು ಆರೋಪ ಮಾಡಿ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಬೆಂಗಳೂರು
ಆರ್ವಿ ಲರ್ನಿಂಗ್ ಹಬ್ ಎಂಬ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿದ್ದ ರೂಪೇಶ್ ಪುತ್ತೂರು ವಿದ್ಯಾರ್ಥಿಯೊಬ್ಬ ಕನ್ನಡದಲ್ಲಿ ಕೇಳಿದ ಗೊಂದಲದ ಬಗ್ಗೆ ಕನ್ನಡದಲ್ಲಿ ಉತ್ತರಿಸಿದ್ದಾರೆ.
ಇದನ್ನೂ ಓದಿ: ಸಾಲ ಪಾವತಿ ವಿಳಂಬ: ಕುಟುಂಬಸ್ಥರನ್ನು ಹೊರಗೆ ಹಾಕಿದ ಖಾಸಗಿ ಫೈನಾನ್ಸ್
ಆದರೆ ಇದೇ ಸಮಯಕ್ಕೆ ವಿದ್ಯಾರ್ಥಿನಿಯೊಬ್ಬಳು ದನಿ ಎತ್ತಿ ಕನ್ನಡದಲ್ಲಿ ಸಂವಹಿಸದಂತೆ ತಾಕೀತು ಮಾಡಿದ್ದಾಳೆ. ಏನೇ ಮಾತನಾಡುವುದಿದ್ದರೂ ಇಂಗ್ಲಿಷ್ನಲ್ಲೇ ಮಾತನಾಡಿ, ತನಗೆ ಕನ್ನಡ ಬರುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕನ್ನಡ ಕ್ರಿಮಿನಲ್ ಭಾಷೆಯಲ್ಲ, ಇಷ್ಟು ದ್ವೇಷ ಬೇಡ ಎಂದು ಪ್ರಾಧ್ಯಾಪಕ ಬುದ್ದಿ ಹೇಳಿದ್ದು, ವಿದ್ಯಾರ್ಥಿನಿ ಪ್ರಾಂಶುಪಾಲರಿಗೆ ದೂರು ನೀಡಿದ್ದಾರೆ.
ಈ ದೂರಿನ ಮೇರೆಗೆ ಪ್ರಾಧ್ಯಾಪಕರನ್ನು ಕರೆಸಿದ ಕಾಲೇಜು ಮ್ಯಾನೇಜ್ಮೆಂಟ್ ಕೆಲಸಕ್ಕೆ ರಾಜೀನಾಮೆ ಕೊಡಿ ಎಂದು ಒತ್ತಾಯಿಸಿತ್ತು. ಅಲ್ಲದೇ ಒಂದುವೇಳೆ ರಾಜೀನಾಮೆ ಸಲ್ಲಿಸದಿದ್ದರೆ ಮತ್ತೊಂದು ಆರ್ವಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ತನ್ನ ಮಗನ ಸರ್ಟಿಫಿಕೇಟ್ ನೀಡುವುದಿಲ್ಲ ಎಂದು ಬೆದರಿಕೆ ಹಾಕಿ ಸಹಿ ಹಾಕಿಸಿಕೊಂಡರು ಎಂದು ದೂರಿದ್ದರು.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಕನ್ನಡಪರ ಹೋರಾಟಗಾರರು ಕಾಲೇಜಿಗೆ ಭೇಟಿ ನೀಡಿ ಆರ್ವಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಿಪಿ ನಾಗರಾಜ್ ಜತೆ ಚರ್ಚಿಸಿದ್ದಾರೆ. ಪರಿಣಾಮ ರೂಪೇಶ್ ಪುತ್ತೂರು ಮತ್ತೆ ಕೆಲಸಕ್ಕೆ ಮರಳಿದರು. ಈ ಮೂಲಕ ಸಂಜೆ ಎದ್ದಿದ್ದ ವಿವಾದ ಸುಖಾಂತ್ಯ ಕಂಡಿದೆ.
ಇದನ್ನೂ ನೋಡಿ: ಅಭಿಮಾನಿಗಳ ಉನ್ಮಾದ, ಸರ್ಕಾರದ ಅತ್ಯುತ್ಸಾಹ ಮತ್ತು ಮಾರುಕಟ್ಟೆಯ ದಾಹ Janashakthi Media