ಬೆಂಗಳೂರು: ಯುಪಿಐ ಬಳಕೆದಾರರಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ಶೋಕಾಸ್ ನೋಟಿಸ್ ಜಾರಿಯಾಗಿರುವುದು ಸಣ್ಣ ವ್ಯಾಪಾರಸ್ತರಿಗೆ ಶಾಕ್ ಉಂಟುಮಾಡಿದ್ದೂ, ಈ ಹಿನ್ನಲೆಯಲ್ಲಿ ಅನೇಕ ಯುಪಿಐ ವ್ಯಾಪಾರಸ್ತರು ಬಳಕೆಯನ್ನೇ ನಿಲ್ಲಿಸಿದ್ದಾರೆ. ಈ ಬೆನ್ನಲ್ಲೇ ಶೋಕಾಸ್ ನೋಟಿಸ್ ಕೊಟ್ಟ ಅಧಿಕಾರಿಗಳು 10,000 ಕೊಟ್ರೆ ನಿಮ್ಮ ಟ್ಯಾಕ್ಸ್ ಕ್ಲಿಯರ್ ಮಾಡ್ತಾರೆ ಎಂಬುದಾಗಿ ಲಂಚಕ್ಕೆ ಬೇಡಿಕೆ ಇಡುತ್ತಿರುವುದು ವರದಿಯಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳ ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು 40 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆಸಿದಂತವರಿಗೆ ಜಿಎಸ್ಟಿ ನೋಂದಣಿ, ತೆರಿಗೆ ಕಟ್ಟುವಂತೆ ಶೋಕಾಸ್ ನೋಟಿಸ್ ನೀಡಿದ್ದಾರೆ.
ಇದನ್ನೂ ಓದಿ: ವ್ಯಾಪಾರಿಗಳಿಗೆ ಮತ್ತೊಂದು ಶಾಕ್: ಯುಪಿಐ ಬಿಟ್ಟು ಕ್ಯಾಶ್ ಪಡೆದರೂ ತೆರಿಗೆ ಅನ್ವಯ
ಹೀಗಾಗಿ ರಾಜ್ಯದ ಹಲವೆಡೆ ಯುಪಿಐ ಬಳಕೆದಾರರು ತಮ್ಮ ಯುಪಿಐ ಮೂಲಕ ವಹಿವಾಟಿಗೆ ಹಿಂದೇಟು ಹಾಕುತ್ತಿದ್ದಾರೆ.
ಇದರ ನಡುವೆ ಬೆಂಗಳೂರಿನ ವಿಜಯನಗರದ ಟ್ಯಾಕ್ಸ್ ಡಿಪಾರ್ಟಮೆಂಟ್ ಅಧಿಕಾರಿಗಳು ಶೋಕಾಸ್ ನೋಟಿಸ್ ಪಡೆದಂತ ವ್ಯಾಪಾರಿಗಳಿಗೆ ಲಂಚಕ್ಕೆ ಬೇಡಿಕೆ ಇಡುತ್ತಿರುವಂತ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಾವೆ.
ವೈರಲ್ ಆಗಿರುವಂತ ವೀಡಿಯೋಗಳಲ್ಲಿ 10,000 ಕೊಟ್ರೆ ನಿಮ್ಮ ಟ್ಯಾಕ್ಸ್ ಕ್ಲಿಯರ್ ಮಾಡ್ತಾರೆ ಎಂಬುದಾಗಿ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿರುವುದು ಕಂಡು ಬಂದಿದೆ.
ಇದನ್ನೂ ನೋಡಿ: ಗ್ರಾಮ ಸಂಕಲ್ಪ ಸಮಾವೇಶ | ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಧರಣಿಯ ನೇರಪ್ರಸಾರ.
