ಗುಂಡಿಗೆ ಬಿದ್ದು ಬಾಲಕ ಸಾವು; ದಿನವಿಡೀ ಪ್ರತಿಭಟಿಸಿದರು ಸ್ಥಳಕ್ಕೆ ಬೇಟಿ ನೀಡದ ಜಿಲ್ಲಾಧಿಕಾರಿ

ಹೊಸಪೇಟೆ:  ಗುಂಡಿಗೆ ಬಿದ್ದು ಬಾಲಕ ಸಾವನ್ನಪ್ಪಿದ ಪ್ರಕರಣ ಹೊಸಪೇಟೆ ನಗರಸಭೆ ವ್ಯಾಪ್ತಿಯ ಅನಂತಶಯನಗುಡಿಯಲ್ಲಿ ನಡೆದಿದ್ದು, ಈ ಸಂಬಂಧಿಸಿದಂತೆ ಪೌರಾಯುಕ್ತರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿ ನಗರಸಭಾ ಸದಸ್ಯರು ಧರಣಿ ಮುಂದುವರಿಸಿದ್ದಾರೆ. ಜಿಲ್ಲಾಧಿಕಾರಿ ಇನ್ನೂ ಸ್ಥಳಕ್ಕೆ ಬಂದಿಲ್ಲ ಎಂದು ಪ್ರತಿಬಟನರಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ . ಸಾವು

ಬೆಳಿಗ್ಗೆ 10 ಗಂಟೆಯಿಂದಲೇ ಧರಣಿ ಶುರುವಾಗಿದ್ದು, ಮೃತ ಬಾಲಕನ ಪೋಷಕರು, ಸ್ಥಳೀಯ ನಿವಾಸಿಗಳು ಸಹ ಪಾಲ್ಗೊಂಡಿದ್ದಾರೆ. ನಗರದಲ್ಲೇ ಇರುವ ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್ ಅವರು ಸ್ಥಳಕ್ಕೆ ಬಾರದೆ ಇರುವುದಕ್ಕೆ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನು ಓದಿ : ಶಿವಮೊಗ್ಗದಲ್ಲಿ ಕಾಡಾನೆ ದಾಳಿ: ಕೃಷಿ ಕಾರ್ಮಿಕ ಮೃತ

‘ನಗರಸಭೆಯ ಆಡಳಿತಾಧಿಕಾರಿ ಸದ್ಯ ಜಿಲ್ಲಾಧಿಕಾರಿ ಅವರೇ ಇದ್ದಾರೆ. ನಮಗೆ ನ್ಯಾಯ ಕೊಡಿಸಬೇಕು, ಪರಿಹಾರ ಕೊಡಿಸಬೇಕು. ಅಯುಕ್ತರನ್ನು ಅಮಾನತುಗೊಳಿಸಬೇಕು, ಅಲ್ಲಿಯವರೆಗೆ ಸ್ಥಳದಿಂದ ಕದಲುವುದಿಲ್ಲ’ ಎಂದು ನಗರಸಭೆ ಸದಸ್ಯರು ಮತ್ತು ಬಾಲಕನ ಪೋಷಕರು ಪಟ್ಟು ಹಿಡಿದಿದ್ದಾರೆ.

‘ಜಿಲ್ಲಾಧಿಕಾರಿ ಅವರು ಮುಖ್ಯ ಕಾರ್ಯದರ್ಶಿಯವರ ಜತೆಗೆ ಮೀಟಿಂಗ್ ನಡೆಸುತ್ತಿದ್ದಾರೆ. ಬರುವುದಕ್ಕೆ ವಿಳಂಬವಾಗುತ್ತದೆ’ ಎಂಬ ಸಂದೇಶವನ್ನು ಪೊಲೀಸರು ಧರಣಿ ನಿರತರಿಗೆ ತಿಳಿಸಿದ್ದರು. ಆದರೆ ಡಿ.ಸಿ ಬರುವ ತನಕ ಧರಣಿ ಕೊನೆಗೊಳಿಸುವುದಿಲ್ಲ ಎಂದು ಧರಣಿ ನಿರತರು ಹೇಳಿದ್ದಾರೆ. ಸಾವು

ಇದನ್ನು ನೋಡಿ : ಯು ಟರ್ನ್ ಮೋದಿಜೀ — ಮಸೂದೆಗಳನ್ನು ಹಿಂಪಡೆದ ಸರ್ಕಾರ… Janashakthi Media

Donate Janashakthi Media

Leave a Reply

Your email address will not be published. Required fields are marked *