ಇಂಟರ್ನ್ಯಾಷನಲ್‌ ಏರ್ಪೋರ್ಟ್‌ ಕನ್ನಡಿ ಮೇಲೆ ಬಾಂಬ್‌ ಬೆದರಿಕೆ

ಬೆಂಗಳೂರು: ಬೆಂಗಳೂರೂ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಕೆಲದಿನಗಳಿಂದ ಬಾಂಬ್‌ ಸ್ಫೋಟದ ಬೆದರಿಕೆ ಹೆಚ್ಚಾಗುತ್ತಿದ್ದು, ಬೆಂಗಳೂರು ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ  ಮತ್ತೊಂದು ಬಾಂಬ್‌ ಸ್ಫೋಟದ ಬೆದರಿಕೆ ಕಂಡುಬಂದಿದ್ದು, ವಿಮಾನ ನಿಲ್ದಾಣದ ಮೂರನೇ ಮಹಡಿಯಲ್ಲಿರುವ ವಾಷ್‌ ರೂಮಿನ ಕನ್ನಡಿಯ ಮೇಲೆ ಬಾಂಬ್‌ ಸ್ಫೋಟ ನಡೆಸುವುದಾಗಿ ಬರೆಯಲಾಗಿದೆ. ಈ ಬೆದರಿಕೆ ಏರ್ಪೋರ್ಟ್‌  ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.

ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಕತ್ತು ಕತ್ತರಿಸಿ ಕೊಂದ ಪತಿ; ಕುಣಿಗಲ್‌ನಲ್ಲಿ ಘಟನೆ

ಸುದ್ದಿ ತಿಳಿದ ತಕ್ಷಣವೇ ಸಿಐಎಸ್‌ಎಫ್‌, ಶ್ವಾನ ದಳದ ಅಧಿಕಾರಿಗಳು ಮತ್ತು ಬಾಂಬ್‌ ಪತ್ತೆ , ನಿಷ್ಕ್ರಿಯ ದಳದ ಸಿಬ್ಬಂದಿ ಇಡೀ ವಿಮಾನ ನಿಲ್ದಾಣವನ್ನು ಜಪ್ತಿ ಹೊಡೆದಿದ್ದಾರೆ. ಯಾವುದೇ ಅನುಮಾನಾಸ್ಪದ ವಸ್ತು ಸಿಕ್ಕಿಲ್ಲದ ಕಾರಣ ಇದೊಂದು ಕಿಡಿಗೇಡಿಗಳ ಕೃತ್ಯವಿರಹುದೆಂಬ ಶಂಕೆ ವ್ಯಕ್ತವಾಗಿದೆ.

ಇದನ್ನೂ ನೋಡಿ: ಏಂಗೆಲ್ಸ್ 200 : ಪ್ರಕೃತಿಯ ಗತಿತಾರ್ಕಿಕತೆ ಪುಸ್ತಕ ಬಿಡುಗಡೆ

Donate Janashakthi Media

Leave a Reply

Your email address will not be published. Required fields are marked *