ಬೆಂಗಳೂರು | ಸಂಚಾರ ದಟ್ಟಣೆ, ರಸ್ತೆಗುಂಡಿ : ಬ್ಲ್ಯಾಕ್‌ಬಕ್ ಕಂಪನಿ ಬೆಳ್ಳಂದೂರು ದಿಂದ ಕಾಡುಬೀಸನಹಳ್ಳಿಯ ಸ್ಥಳಾಂತರ

ಬೆಂಗಳೂರು: ಬೆಂಗಳೂರು ಮೂಲದ ಲಾಜಿಸ್ಟಿಕ್ ಕಂಪನಿ ‘ಬ್ಲ್ಯಾಕ್‌ಬಕ್ ಭಾರಿ ಸಂಚಾರ ದಟ್ಟಣೆ ಹಾಗೂ ಕಳಪೆ ರಸ್ತೆಯ ಸ್ಥಿತಿಯಿಂದಾಗಿ ಹೊರ ವರ್ತುಲ ರಸ್ತೆಯ ಕಾಡುಬೀಸನಹಳ್ಳಿಯ ವಸ್ವಾನಿ ಪ್ರೆಸಿಡೊದಿಂದ ಸ್ಥಳಾಂತರಗೊಳ್ಳುವುದಾಗಿ ಹೇಳಿದೆ. ಬೆಂಗಳೂರು

ಇದನ್ನೂ ಓದಿ: ಬೆಂಗಳೂರು | ಸೆಪ್ಟೆಂಬರ್ 25 ರಂದು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ನ್ಯಾಯ ಸಮಾವೇಶ

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಂಪನಿಯ ಸಹ ಸಂಸ್ಥಾಪಕ ಹಾಗೂ ಸಿಇಒ ರಾಜೇಶ್‌ ಯಬಾಜಿ, ‘ಹೊರವರ್ತುಲ ರಸ್ತೆಯ ಬೆಳ್ಳಂದೂರು ಕಳೆದ 9 ವರ್ಷಗಳಿಂದ ನಮ್ಮ ಮನೆಯೂ ಕಚೇರಿಯೂ ಆಗಿತ್ತು. ಆದರೆ ಈಗ ಅಲ್ಲಿ ಮುಂದುವರಿಯಲು ಭಾರಿ ಕಷ್ಟವಾಗುತ್ತಿದೆ. ನನ್ನ ಸಹೋದ್ಯೋಗಿಗಳಿಗೆ ಪ್ರಯಾಣ ಸಮಯ ಒಂದೂವರೆ ಗಂಟೆ ತಗುಲುತ್ತದೆ, ಹೀಗಾಗಿ ನಾವು ಸ್ಥಳಾಂತರಗೊಳ್ಳಲು ನಿರ್ಧರಿಸಿದ್ದೇವೆ. ರಸ್ತೆ ತುಂಬಾ ಗುಂಡಿಗಳಿವೆ, ದೂಳು ಆವರಿಸಿಕೊಂಡಿದೆ. ಅದನ್ನು ಸರಿ ಮಾಡುವ ಕನಿಷ್ಠ ಉಮೇದು ಕೂಡ ಕಾಣಿಸುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಇರುವ ಸಮಸ್ಯೆಗಳು ಐದು ವರ್ಷವಾದರೂ ಪರಿಹಾರವಾಗುವ ಭರವಸೆ ಇಲ್ಲ ಎಂದು ಹೇಳಿದ್ದಾರೆ. ಬೆಂಗಳೂರು

ಇದನ್ನೂ ನೋಡಿ: ಸೌಹಾರ್ದ ವಾತಾವರಣ ನೆಲೆಸುವಲ್ಲಿ ಸಮುದಾಯದ ಕೊಡುಗೆ ಅಪಾರ – ಜಸ್ಟೀಸ್ ನಾಗಮೋಹನ್ ದಾಸ್ Janashakthi Media

Donate Janashakthi Media

Leave a Reply

Your email address will not be published. Required fields are marked *