ಬಿಜೆಪಿಯಿಂದ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ ಭಿತ್ತಿಚಿತ್ರ; ಕಾಂಗ್ರೆಸ್‌ ದಿಢೀರ್‌ ಪ್ರತಿಭಟನೆ

ಕಲಬುರಗಿ : ಶಾಸಕ ಪ್ರಿಯಾಂಕ್ ಖರ್ಗೆ ಎಲ್ಲಾದರೂ ಕಾಣಿಸಿಕೊಂಡರೆ ಕ್ಷೇತ್ರಕ್ಕೆ ಭೇಟಿ ನೀಡುವಂತೆ ತಿಳಿಸಿ ಅಂತಾ ಮನವಿ‌ ಮಾಡಿರುವ ಭಿತ್ತಿಚಿತ್ರವನ್ನು ಬಿಜೆಪಿ ಯುವ ಮುಖಂಡ ಅರವಿಂದ್ ಚೌಹ್ಹಾಣ್ ನೇತೃತ್ವದಲ್ಲಿ ಅಂಟಿಸಲಾಗಿದೆ. ಬಿಜೆಪಿ ಪಕ್ಷದ ಕ್ರಮವನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ದಿಢೀರ್‌ ಪ್ರತಿಭಟನೆ ನಡೆಸಿದ್ದಾರೆ.

ಈ ವ್ಯಕ್ತಿಯನ್ನು ಚಿತ್ತಾಪುರದಲ್ಲಿ ಯಾರಾದರೂ ನೋಡಿದ್ದೀರಾ? ಕಳೆದ ಒಂದೂವರೆ ತಿಂಗಳಿನಿಂದ ನಾಪತ್ತೆಯಾಗಿದ್ದಾರೆ. ಈ ವ್ಯಕ್ತಿ ಎಲ್ಲಾದರೂ ಕಂಡು ಬಂದರೆ ಚಿತ್ತಾಪುರಕ್ಕೆ ಭೇಟಿ ನೀಡುವಂತೆ ತಿಳಿಸಿ ಎಂದು ಬಿಜೆಪಿ ಪಕ್ಷವು, ಕಾಂಗ್ರೆಸ್‌ ಶಾಸಕ ಪ್ರಿಯಾಂಕ್ ಖರ್ಗೆ ಅವರ ಭಾವಚಿತ್ರ ಸಮೇತ ಭಿತ್ತಿಚಿತ್ರವನ್ನು ಅಳವಡಿಸಿದೆ.

ಕಾಂಗ್ರೆಸ್‌ ಕಾರ್ಯಕರ್ತರು ಇಂದು(ನವೆಂಬರ್‌ 08) ಚಿತ್ತಾಪುರದ ಲಾಡ್ಜಿಂಗ್‌ ಕ್ರಾಸ್‌ ಬಳಿ ದಿಢೀರ್‌ ಪ್ರತಿಭಟನೆ ಕೈಗೊಂಡು, ಸಮಾಜದಲ್ಲಿ ಅಶಾಂತಿ ಮೂಡಿಸಲು ಸಂಚು ನಡೆಸಿರುವ ಅರವಿಂದ ಚವಾಣ್ ವಿರುದ್ಧ ಪ್ರಕರಣ ದಾಖಲಿಸಬೇಕು. ಶಾಸಕ ಪ್ರಿಯಾಂಕ್ ಅವರ ಕುರಿತು ಬಹಳ ಹಗುರವಾಗಿ ನಡೆದುಕೊಂಡಿರುವ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕೆಲ ಸಮಯದವರೆಗೆ ಸಾರಿಗೆ ಸಂಚಾರ ಅಸ್ತವ್ಯಸ್ಥಗೊಂಡಿತು. ಈ ಬಗ್ಗೆ ಪೊಲೀಸ್‌ ಅಧಿಕಾರಿ, ಪ್ರಕಾಶ ಯಾತನೂರು ಮಾತನಾಡಿ, ಭಿತ್ತಿಚಿತ್ರ ಅಂಟಿಸಿದವರ ವಿರುದ್ದ ಸಾಮಾಜಿಕ ಅಶಾಂತಿಗೆ ಭಂಗವುಂಟು ಮಾಡಲೆತ್ನಿಸಿರುವ ಕಾಯ್ದೆಯಡಿ ಪ್ರಕರಣ ದಾಖಲಿಸುತ್ತೇವೆ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈ ಬಿಡಲಾಯಿತು.

Donate Janashakthi Media

Leave a Reply

Your email address will not be published. Required fields are marked *