ನವದೆಹಲಿ: ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 60-70 ಕ್ಷೇತ್ರಗಳಲ್ಲಿ ‘ಮತ ಕಳ್ಳತನ’ ಮಾಡಿದೆ ಎಂದು ಆಗಸ್ಟ್ 27ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಬಿಹಾರದ ಸೀತಾಮಢಿ ಜಿಲ್ಲೆಯಲ್ಲಿ ‘ಮತದಾರರ ಅಧಿಕಾರ ಯಾತ್ರೆ’ಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಚುನಾವಣಾ ಆಯೋಗವನ್ನು ‘ವೋಟ್ ಕಳ್ಳರು’ ಎಂದು ಕರೆದಿದ್ದಾರೆ.
“ಮುಂದಿನ ಆರು ತಿಂಗಳಲ್ಲಿ ನಾನು ಅವರನ್ನು ಬಯಲಿಗೆಳೆಯುತ್ತೇನೆ” ಎಂದು ರಾಹುಲ್ ಸವಾಲು ಹಾಕಿದ್ದಾರೆ. “ಬಿಜೆಪಿ ಮೊದಲು ನಿಮ್ಮ ಮತಗಳನ್ನು ಕದಿಯುತ್ತದೆ, ನಂತರ ನಿಮ್ಮ ಉಳಿದ ಹಕ್ಕುಗಳನ್ನು ಕಸಿಯುತ್ತದೆ” ಎಂದು ಅವರು ಜನರನ್ನುದ್ದೇಶಿಸಿ ಹೇಳಿದರು.
ಇದನ್ನೂ ಓದಿ: ನವದೆಹಲಿ | ಜವಳಿ ರಫ್ತುದಾರರನ್ನು ಬೆಂಬಲಿಸಲು ಸುಂಕ ರಹಿತ ಆಮದು ವಿಸ್ತರಿಸಿದ ಕೇಂದ್ರ
ಇದೇ ವೇಳೆ, ಮಹಾರಾಷ್ಟ್ರದಲ್ಲಿಯೂ ಲೋಕಸಭಾ ಚುನಾವಣೆಯ ನಂತರ ನಕಲಿ ಮತದಾರರನ್ನು ಸೇರಿಸಿ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ ಎಂದು ಅವರು ಆರೋಪಿಸಿದರು. “ಗುಜರಾತ್ ಮಾಡೆಲ್ ಎಂದರೆ ಮತ ಕಳ್ಳತನ” ಎಂದು ಅವರು ಟೀಕಿಸಿದರು.
ಚುನಾವಣಾ ಆಯೋಗವು ರಾಹುಲ್ ಗಾಂಧಿಯವರ ಆರೋಪಗಳನ್ನು ತಿರಸ್ಕರಿಸಿದೆ ಮತ್ತು ತಮ್ಮ ಹೇಳಿಕೆಗಳನ್ನು ಸಾಬೀತುಪಡಿಸಲು ಸಹಿ ಮಾಡಿದ ಘೋಷಣೆಯನ್ನು ಸಲ್ಲಿಸುವಂತೆ ಅಥವಾ ರಾಷ್ಟ್ರದ ಕ್ಷಮೆಯಾಚಿಸುವಂತೆ ಕೇಳಿದೆ.
ಕರ್ನಾಟಕ, ಮಹಾರಾಷ್ಟ್ರ ಮತ್ತು ಹರಿಯಾಣದ ಮುಖ್ಯ ಚುನಾವಣಾ ಅಧಿಕಾರಿಗಳು ಸಹ ರಾಹುಲ್ ಗಾಂಧಿಯವರಿಗೆ ನೋಟಿಸ್ ಜಾರಿ ಮಾಡಿ, ಅವರ ಆರೋಪಗಳಿಗೆ ಪುರಾವೆ ನೀಡುವಂತೆ ಕೇಳಿದ್ದಾರೆ. ರಾಹುಲ್ ಗಾಂಧಿಯವರ ಈ ಆರೋಪಗಳ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ (PIL) ಮಾಡಲಾಗಿದೆ.
ಇದನ್ನೂ ನೋಡಿ: 40 ವರ್ಷ ನಡೆದ ಕ್ರೈಮ್ 20 ದಿನದಲ್ಲಿ ಹೇಗೆ ಸಿಗುತ್ತೆ? ಅದಕ್ಕಿನ್ನೂ ಸಮಯ ಬೇಕು Janashakthi Media
