ಬೈಕ್-ಆಟೋ ಮುಖಾಮುಖಿ ಡಿಕ್ಕಿ:ಕಾರ್ಮಿಕ ಮುತ್ತಪ್ಪ ಪೇಂಟರ್‌ ಸ್ಥಳದಲ್ಲಿಯೇ ಸಾವು

ಲಿಂಗಸುಗೂರು: ಬೈಕ್-ಆಟೋ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರ್ಮಿಕ ಮುತ್ತಪ್ಪ ಪೇಂಟರ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ತಾಲೂಕಿನ ಗುರುಗುಂಟ ಗ್ರಾಮದಲ್ಲಿ ಪೇಂಟರ್ (ಕಾರ್ಮಿಕ) ಕೆಲಸ ಮುಗಿಸಿಕೊಂಡು ಸ್ವ-ಗ್ರಾಮಕ್ಕೆ ಹಿಂತಿರುಗಿ ಬರುವಾಗ ಬೈಕ್-ಆಟೋ ಮಧ್ಯ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಲಿಂಗಸುಗೂರು ತಾಲೂಕಿನ ಕರಡಕಲ್ ಗ್ರಾಮದ ಮುತ್ತು ಪೇಂಟರ್ (42) ಮೃತ ಬೈಕ್ ಸವಾರನ ತಲೆಗೆ ಗಂಭೀರವಾ ಗಾಯವಾಗಿ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ.

ಇದನೂ ಓದಿ:ಕಾಟಾಚಾರದ ಬ್ಯಾರಿಕೇಡ್ : ರಸ್ತೆ ಗುಂಡಿಗೆ ಬಿದ್ದು ಕಾರ್ಮಿಕ ಸಾವು

ದೇವರಬಪೂರ ಗ್ರಾಮದ ಅಮರೇಶ್ವರ ಕ್ರಾಸ್ ಹತ್ತಿರ ಘಟನೆ ನಡೆದಿದೆ. ಬೈಕ್ ಹಾಗೂ ಆಟೋ ಜಖಂಗೊಂಡಿವೆ. ಘಟನೆಗೆ ಸಂಬಂಧಿಸಿದಂತೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರಡಕಲ್ ಗ್ರಾಮದ ಮೃತ ಮುತ್ತಪ್ಪ ಪೇಂಟರ್ (ಕಾರ್ಮಿಕ) ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮುಖ್ಯ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಮೃತ ಕಾರ್ಮಿಕನ ಕುಟುಂಬ ತೀರಾ ಬಡತನದಿಂದ ಕೂಡಿದ್ದು, ಕಾರ್ಮಿಕ ಇಲಾಖೆಯಿಂದ ಪರಿಹಾರ ನೀಡಬೇಕು.

Donate Janashakthi Media

Leave a Reply

Your email address will not be published. Required fields are marked *