ನವದೆಹಲಿ: ಬೆಂಗಳೂರು ಅರಮನೆ ಮೈದಾನದ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಮೈಸೂರು ರಾಜವಂಶಸ್ಥರಿಗೆ 3,400 ಕೋಟಿ ರೂ. ಟಿಡಿಆರ್ ನೀಡಬೇಕೆಂದಿದ್ದ ತನ್ನ ಹಿಂದಿನ ಆದೇಶಕ್ಕೆ ಮೇ 29 ಗುರುವಾರದಂದು ಸುಪ್ರೀಂಕೋರ್ಟ್ ತಡೆ ನೀಡಿ, ಮುಂದಿನ ವಿಚಾರಣೆಯನ್ನು ಜುಲೈ 21ಕ್ಕೆ ನಿಗದಿ ಮಾಡಿದೆ.
ಸುಪ್ರೀಂಕೋರ್ಟ್ನ ತಡೆಯಿಂದ ಕರ್ನಾಟಕ ಸರ್ಕಾರಕ್ಕೆ ಈಗ ನಿರಾಳತೆ ದೊರೆತಿದೆ.
ಇದನ್ನೂ ಓದಿ: ಬೆಂಗಳೂರು| ಎ-ಖಾತಾ – ಬಿ-ಖಾತಾ ಎರಡರ ನಡುವಿನ ವ್ಯತ್ಯಾಸವೇನು?
ಬೆಂಗಳೂರಿನ ಬಳ್ಳಾರಿ ಮತ್ತು ಜಯಮಹಲ್ ರಸ್ತೆ ವಿಸ್ತರಣೆ ಭಾಗವಾಗಿ ಕರ್ನಾಟಕ ಸರ್ಕಾರ ಸ್ವಾಧೀನಪಡಿಸಿಕೊಂಡಿದ್ದ 15 ಎಕರೆಗೂ ಹೆಚ್ಚಿನ ಭೂಮಿಗೆ ಪರಿಹಾರವಾಗಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಕಾನೂನು ಉತ್ತರಾಧಿಕಾರಿ ಹಾಗೂ ಇತರರಿಗೆ 3,400 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಟಿಡಿಆರ್ ಪ್ರಮಾಣಪತ್ರಗಳನ್ನು ಹಸ್ತಾಂತರಿಸುವಂತೆ ಸುಪ್ರೀಂಕೋರ್ಟ್ ಮೇ 22ರಂದು ಆದೇಶಿಸಿತ್ತು.
ಆದರೆ ಈ ಆದೇಶವನ್ನು ಪುನರ್ಪರಿಶೀಲಿಸುವಂತೆ ಕರ್ನಾಟಕ ಸರ್ಕಾರ ಇತ್ತೀಚೆಗೆ ಮತ್ತೊಮ್ಮೆ ಸುಪ್ರೀಂ ಮೆಟ್ಟಿಲೇರಿತ್ತು. ಪ್ರಸ್ತುತ ತನ್ನ ತೀರ್ಪಿಗೆ ತಡೆಯಾಜ್ಞೆ ನೀಡಿರುವ ತ್ರಿಸದಸ್ಯ ನ್ಯಾಯಪೀಠ, ಕರ್ನಾಟಕ ಸಲ್ಲಿಸಿರುವ ಪುನರ್ಪರಿಶೀಲನಾ ಅರ್ಜಿಯ ಮುಂದಿನ ವಿಚಾರಣೆಯನ್ನು ಜು.21ರಿಂದ ಪ್ರಾರಂಭಿಸಲಿದೆ.
ಒಂದು ವೇಳೆ ಈ ಪುನರ್ಪರಿಶೀಲನಾ ಅರ್ಜಿ ಮುಂದಿನ ವಿಚಾರಣೆಗಳಲ್ಲಿ ತಿರಸ್ಕೃತಗೊಂಡರೆ ಹಿಂದಿನ ಆದೇಶವೇ ಜಾರಿಯಾಗಲಿದೆ ಎಂದೂ ಪೀಠ ತಿಳಿಸಿದೆ.
ಇದನ್ನೂ ನೋಡಿ: ಫ್ಯಾಸಿಸಂ ಹುಟ್ಟು ಹೇಗಾಯಿತು ಮತ್ತು ಅದನ್ನು ಮೊದಲಿನಿಂದಲೂ ವಿರೋಧಿಸಿದ ರಾಜಕೀಯ ಶಕ್ತಿಗಳು ಯಾವುವು? Janashakthi