ಮಳೆಯಿಂದಾಗಿ ಬೆಂ-ಮೈ ಎಕ್ಸ್‌ಪ್ರೆಸ್‌ ಹೈವೆ ಜಲಾವೃತ; ಕೆಟ್ಟುನಿಂತ ಕಾರಿಗೆ ಹಲವು ವಾಹನಗಳ ಡಿಕ್ಕಿ!

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟಿಸಲ್ಪಟ್ಟ ಬೆಂಗಳೂರು  -ಮೈಸೂರು ಎಕ್ಸ್‌ಪ್ರೆಸ್‌ ಹೈವೆ ರಾಮನಗರ ಸಮೀಪದ ಸಂಘಬಸವನದೊಡ್ಡಿ ಬಳಿ ಹೆದ್ದಾರಿ ಜಲಾವೃತವಾಗಿದೆ. ರಸ್ತೆಯಲ್ಲಿ ಮಳೆನೀರು ನಿಂತ ಪರಿಣಾಮ ವಾಹನ ಸವಾರರ ಪರದಾಡಿದರು. ಇದರಿಂದ ಮಳೆ ನೀರಿಗೆ ಸಿಲುಕಿ ಕೆಲ ವಾಹನಗಳು ಕೆಟ್ಟು ನಿಂತವು. ಈ ಯೋಜನೆಗೆ ಬರೋಬರಿ 9.500 ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಸಮಸಮ್ಯೆಗಳ ಅಗರವೇ ಮಾತಾಡುವಂತಾಗಿದೆ. ಪರಿಪೂರ್ಣವಾಗಿ ಮುಗಿಯದ ಕಾಮಗಾರಿ ಇದಾಗಿದ್ದು ಅವೈಜ್ಞಾನಿಕತೆ ಹಾಗೂ ಗುಣಮಟ್ಟ ಇಲ್ಲದಿರುವುದು ಈಗ ಸಾಬೀತಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಬಸ್ ಪ್ರಯಾಣ ದರ ಮತ್ತಷ್ಟು ದುಪ್ಪಟ್ಟು

ಮಿನಿ ಕಂಟ್ರಾಕ್ಟರ್‌ ಸಂಸದ ಪ್ರತಾಪ್‌ ಸಿಂಹ, ಎಕ್ಸ್‌ಪ್ರೆಸ್‌ ಹೈವೆ ಸಮಸ್ಯೆಗಳ ಬಗ್ಗೆ ಇಂಚಿಂಚು ಉತ್ತರ ಕೊಡುತ್ತೇನೆಂದು ಹೇಳಿದರಲ್ಲಾ, ಮಳೆ ಬಂದು ಹೈವೇ ಜಲಾವೃತ ಆಗಿದೆ. ಈ ನೀರನ್ನ ಮನೆಗೆ ತುಂಬಿಕೊಂಡು ಹೋಗಬಹುದಿತ್ತು ಎಂದು ಜನರು ವ್ಯಂಗ್ಯವಾಡುತ್ತಿದ್ದಾರೆ.

ಮಳೆನೀರು ಸರಾಗವಾಗಿ ಹರಿದುಹೋಗದೆ ಅವಾಂತರ ಸೃಷ್ಟಿಯಾಗಿದೆ. ಈ ವೇಳೆ ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುಬಾರಿ ಟೋಲ್ ಕಟ್ಟಿದ್ರೂ ಸರಿಯಾದ ವ್ಯವಸ್ಥೆ ಇಲ್ಲ ಎಂದು ಕಿಡಿಕಾರಿದ್ದಾರೆ. ಕೆಟ್ಟು ನಿಂತ ಕಾರುಗಳಿಗೆ ಕೆಲವು ವಾಹನಗಳು ಡಿಕ್ಕಿ ಹೊಡೆದಿದ್ದು, ಅಲ್ಲಿದ್ದವರು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ : ಬೆಂ-ಮೈ ಎಕ್ಸ್‌ಪ್ರೆಸ್‌ ವೇನಲ್ಲಿ ಮುಂದುವರಿದ ಅಪಘಾತ ಸರಣಿ

ಸಾಮಾನ್ಯ ರಸ್ತೆಗಳಲ್ಲೇ ದಿನನಿತ್ಯವೂ ಅಪಘಾತಗಳು ಸರ್ವೇಸಾಮಾನ್ಯವಾಗಿರುವಾಗ ಎಕ್ಸ್‌ಪ್ರೆಸ್‌ ಹೈವೆ ದಶಪಥದಂತಹ ಹೆಸರನ್ನಿಟ್ಟುಕೊಂಡು ನಿರ್ಮಾಣವಾಗಿರುವ ಇಂತಹ ರಸ್ತೆಗಳನ್ನು ನಿರ್ಮಾಣ ಮಾಡುವ ಹೆದ್ದಾರಿಗ ಪ್ರಾಧಿಕಾರದವರು ಇಂತಹ ನಿರ್ಲಕ್ಷ್ಯ ತೋರಿ ವಾಹನ ಸವಾರ ಪ್ರಾಣದ ಜೊತೆ ಚಲ್ಲಾಟವಾಡುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *