ಬಸವರಾಜ ಬೊಮ್ಮಾಯಿ ಅತ್ಯಂತ ದುರ್ಬಲ ಮುಖ್ಯಮಂತ್ರಿ: ಕಾಂಗ್ರೆಸ್ ಆರೋಪ

ಬೆಂಗಳೂರು: ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದುರ್ಬಲ ಮುಖ್ಯಮಂತ್ರಿ ಎಂದರೆ ಬಸವರಾಜ ಬೊಮ್ಮಾಯಿ ಮಾತ್ರ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್‌ ಮಾಡಿದೆ. ಕನ್ನಡಿಗರ ಮೇಲೆ ಗೋವಾ ಸವಾರಿ ಮಾಡಿದರೂ, ಮಹಾರಾಷ್ಟ್ರ ನಮ್ಮ ನೆಲಕ್ಕೆ ಕನ್ನ ಹಾಕಿದರೂ, ತೆಲಂಗಾಣ ರಾಯಚೂರಿಗೆ ಕೈ ಹಾಕಿದರೂ ಮೂಕ ಬಸವನಂತೆ ಇರುತ್ತಾರೆ ಮುಖ್ಯಮಂತ್ರಿಗಳು ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಕೇಂದ್ರದಲ್ಲಿ, ಗೋವಾದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಮೂರು ಇಂಜಿನ್ ಸರ್ಕಾರಗಳು ಸವಾರಿ ಮಾಡುತ್ತಿದ್ದರೂ ರಾಜ್ಯದ ಮುಖ್ಯಮಂತ್ರಿ ಸುಮ್ಮನಿದ್ದಾರೆ ಎಂದು ಕಾಂಗ್ರೆಸ್ ಆಪಾದಿಸಿದೆ.

ರಾಷ್ಟ್ರಧ್ವಜಕ್ಕಿಂತ ಯಾರೂ ಮೇಲಲ್ಲ. ಆದರೆ ಬಿಜೆಪಿ ಮಾತ್ರ ರಾಷ್ಟ್ರಧ್ವಜಕ್ಕಿಂತ ಭಗವಧ್ವಜ, ಬಿಜೆಪಿ ಧ್ವಜವೇ ಮೇಲು ಎಂದು ವರ್ತಿಸುತ್ತಿದೆ. ಸಚಿವ ಶ್ರೀರಾಮುಲು ಅವರು ರಾಷ್ಟ್ರಧ್ವಜಕ್ಕಿಂತ ನಾನೇ ಮೇಲು ಎನ್ನುತ್ತಿದ್ದಾರೆ. ರಾಷ್ಟ್ರಧ್ವಜದ ಬಗ್ಗೆ ಕನಿಷ್ಠ ಗೌರವ ಹೊಂದಿರದ ಬಿಜೆಪಿಗರ ನಕಲಿ ದೇಶಭಕ್ತಿ ಹೀಗೆ ಅನಾವರಣ ಆಗುತ್ತಲೇ ಇರುತ್ತದೆ ಎಂದು ಕಾಂಗ್ರೆಸ್ ಟೀಕಿಸಿದೆ.

Donate Janashakthi Media

Leave a Reply

Your email address will not be published. Required fields are marked *