ಮಾರ್ಚ್‌ 17 ರಂದು ಸರಕು ಸಾಗಣೆ ಮಾಲೀಕರಿಂದ ಬಂದ್‌ಗೆ ಕರೆ

ಬೆಂಗಳೂರು: ಪೀಕ್ ಅವಧಿಯಲ್ಲಿ ಬೆಂಗಳೂರು  ನಗರದೊಳಗೆ ಭಾರೀ ವಾಹನಗಳ  ಓಡಾಟಕ್ಕೆ ಸಂಚಾರ ಪೊಲೀಸರು ನಿರ್ಬಂಧಿಸಿರುವುದನ್ನು ಖಂಡಿಸಿ ಇದೇ ತಿಂಗಳ ಮಾರ್ಚ್‌ 17 ರಂದು  ಸರಕು ಸಾಗಣೆ ವಾಹನಗಳ  ಮಾಲೀಕರು ಬಂದ್‌ಗೆ ಕರೆ ನೀಡಿದ್ದಾರೆ.

ಪೀಕ್ ಅವರ್‌ನಲ್ಲಿ ಬೆಂಗಳೂರು  ನಗರದೊಳಗೆ ಸರಕು ವಾಹನಕ್ಕೆ ಪ್ರವೇಶ ನಿರ್ಬಂಧಿಸಿದ ಹಿನ್ನಲೆ ಪ್ರತಿಭಟನೆ ನಡೆಸಲಾಗಿತ್ತು. ಈ ಕುರಿತು ಟ್ರಾಫಿಕ್ ಕಮೀಷನರ್  ಸಲೀಂ ಜೊತೆ ವಾಹನ ಮಾಲೀಕರು ನಡೆಸಿದ ಸಭೆ ವಿಫಲಗೊಂಡ ಕಾರಣ ಬಂದ್‌ ಗೆ ಕರೆ ನೀಡಿದ್ದಾರೆ.

ಇದನ್ನೂ ಓದಿ : ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಸರಕು ಸಾಗಣೆ ಘಟಕ ಸ್ಥಾಪನೆ

ಬಂದ್‌ ದಿನದಂದು ಕೋಳಿ ಸಾಗಾಣಿಕೆ, ದಿನಬಳಕೆ ವಸ್ತುಗಳ ಸಾಗಾಟ, ತರಕಾರಿ, ಔಷಧದ ಗಾಡಿ ಮುಂತಾದ ಆನ್‌ಲೈನ್ ವಸ್ತುಗಳ ಸಾಗಾಟದ ವಾಹನಗಳು ಸಂಪೂರ್ಣವಾಗಿ ಬಂದಾಗಲಿವೆ ಎಂದು ತಿಳಿಸಲಾಗಿದೆ.

ಬೆಂಗಳೂರಿನಲ್ಲಿ ಲಾರಿಗಳು ಸೇರಿದಂತೆ ಭಾರೀ ವಾಹನಗಳು ಪ್ರಮುಖ ರಸ್ತೆಗಳಲ್ಲಿ ಸಂಚರಿಸುವುದರಿಂದ ವಾಹನ ದಟ್ಟಣೆಗೆ ಕಾರಣವಾಗುತ್ತಿದೆ. ಈ ಹಿನ್ನೆಲೆ ಬೆಳಗ್ಗೆ 8ರಿಂದ 11ಗಂಟೆ ಹಾಗೂ ಸಂಜೆ 4ರಿಂದ 10 ಗಂಟೆಯವರೆಗೆ ಸರಕು ಸಾಗಣೆ ವಾಹನಗಳಿಗೆ ನಗರಕ್ಕೆ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ.

Donate Janashakthi Media

Leave a Reply

Your email address will not be published. Required fields are marked *