ಸರ್ಕಾರಿ ಕಛೇರಿ, ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಪೂಜೆ, ದೇವರ ಫೋಟೋಗಳನ್ನು ನಿಷೇಧಿಸಿ – ಹೋರಾಟಗಾರರ ಆಗ್ರಹ

ಬೆಂಗಳೂರು : ಭಾರತೀಯ ಸಂವಿಧಾನದ ಅನುಚ್ಛೇದ 25 ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಖಾತರಿಪಡಿಸುತ್ತದೆ. ಇದು ಧರ್ಮವನ್ನು ಪ್ರತಿಪಾದಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ಒಳಗೊಂಡಿದೆ. ಈ ಅನುಚ್ಛೇದದ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯವು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ವಿಧಿಸಲಾದ ಸಮಂಜಸವಾದ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ. ಇದರರ್ಥ ವ್ಯಕ್ತಿಗಳು ತಮ್ಮ ಧರ್ಮವನ್ನು ಆಚರಿಸುವ ಹಕ್ಕನ್ನು ಹೊಂದಿದ್ದರೂ, ಅದು ಸಮಾಜದ ಸಾಮರಸ್ಯವನ್ನು ಭಂಗಗೊಳಿಸಬಾರದು ಅಥವಾ ಇತರರ ಶಾಂತಿ-ಸಾಮರಸ್ಯವನ್ನು ಉಲ್ಲಂಘಿಸಬಾರದು ಎಂದು ಶಿಕ್ಷಣ ತಜ್ಞರು, ಸಾಹಿತಿಗಳು, ಹೋರಾಟಗಾರರು ತಿಳಿಸಿದ್ದಾರೆ. ಸರ್ಕಾರಿ 

ಸಂವಿಧಾನದ ಈ ಹಕ್ಕು ವೈಯುಕ್ತಿಕ ನೆಲೆಯಲ್ಲಿ ಮೂಲಭೂತ ಹಕ್ಕಾಗಿದ್ದು , ವ್ಯಕ್ತಿಗಳು ತಮ್ಮ ತಮ್ಮ ಮನೆಯಲ್ಲಿ ಅಥವಾ ಕುಟುಂಬದಲ್ಲಿ ಅಥವಾ ತಮ್ಮ ಖಾಸಗಿ ಸ್ಥಳಗಳಲ್ಲಿ ಧಾರ್ಮಿಕ ಆಚರಣೆ ಮತ್ತು ದೇವರ ಪೂಜೆಯನ್ನು ಮಾಡಿಕೊಳ್ಳುವ ಮೂಲಕ ತಮ್ಮ ಮೂಲಭೂತ ಹಕ್ಕನ್ನು ಅನುಭವಿಸಲು ಸರ್ವಸ್ವತಂತ್ರರಿದ್ದಾರೆ. ಆದರೆ, ಸರ್ಕಾರಿ ಕಛೇರಿಗಳಲ್ಲಿ, ಶಾಲೆಗಳಲ್ಲಿ, ಕಾಲೇಜುಗಳಲ್ಲಿ ,ವಿಶ್ವವಿದ್ಯಾಲಯಗಳಲ್ಲಿ ಅಥವಾ ಇತರೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ದೇವರ ಪ್ರತಿಮೆಯನ್ನು ಸ್ಥಾಪಿಸಿ ಪೂಜಿಸುವುದು ಸಂವಿಧಾನದ ಮತಧರ್ಮ ನಿರಪೇಕ್ಷ (Secular) ತತ್ವಕ್ಕೆ ವಿರುದ್ಧವಾಗಿದ್ದು ಸಂವಿಧಾನದ ಆಶಯಕ್ಕೆ ವಿರುದ್ಧವಾಗುತ್ತದೆ.

ಇದನ್ನು ಓದಿ : ಅಸಮಾನತೆಯ ನಿಯಂತ್ರಣ ಜರೂರಾಗಿ ಆಗಬೇಕಾಗಿದೆ

ಈ ಹಿನ್ನೆಲೆಯಲ್ಲಿ, ಬೆಳಗಾವಿ ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ್ ರವರು ತಮ್ಮ ಕಚೇರಿಯಲ್ಲಿ ಗಣೇಶ ಪ್ರತಿಮೆ ಸ್ಥಾಪಿಸಿ ಪೂಜಿಸಿದ ನಡೆ ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ತರುವಂತಹದ್ದಾಗಿದೆ . ಅವರ ಸದುದ್ದೇಶ ಏನೇ ಇದ್ದರೂ, ಸರ್ಕಾರಿ ಕಚೇರಿಗಳು ಮತಧರ್ಮಗಳ ಆಚರಣೆ ಹಾಗು ಪೂಜೆಯ ಕೇಂದ್ರಗಳಲ್ಲ. ಅಲ್ಲಿ ಒಂದು ನಿರ್ದಿಷ್ಟ ಧರ್ಮದ ದೇವರ ಪ್ರತಿಮೆಗಳನ್ನು ಸ್ಥಾಪಿಸುವುದು ಭಾರತದ ಮತಧರ್ಮ ನಿರಪೇಕ್ಷ ರೂಪಿ ಸೆಕ್ಯುಲಾರ್ ಆಶಯಗಳಿಗೆ ಭಂಗ ತರುತ್ತದೆ.

ಒಬ್ಬ ಸರ್ಕಾರಿ ಅಧಿಕಾರಿ ಅಥವಾ ನೌಕರ ಸರ್ಕಾರಿ ಕಚೇರಿಯಲ್ಲಿ ಒಂದು ನಿರ್ಧಿಷ್ಟ ಧರ್ಮದ ಪ್ರತಿಮೆ ಸ್ಥಾಪಿಸುವುದು ಸಂವಿಧಾನದ ಬಹು ಧರ್ಮೀಯ ಮತ್ತು ಬಹು-ಸಂಸ್ಕೃತಿಯ ತತ್ವಕ್ಕೆ ವಿರುದ್ಧವಾಗಿದ್ದು ಎಲ್ಲಾ ಭಾರತೀಯರು ಹಿಂದೂಗಳೇ ಎಂಬ ಹಿಂದೂತ್ವವಾದಿಗಳ ಪ್ರಚಾರಕ್ಕೆ ಅಧಿಕೃತ ಮಾನ್ಯತೆ ತಂದುಕೊಂಡುತ್ತದೆ. ಈ ಎಲ್ಲಾ ಕಾರಣದಿಂದ , ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ್ ರವರ ನಡೆ ಸದುದ್ದೇಶವೇ ಆಗಿದ್ದರೂ, ದೇಶದ ಸಂವಿಧಾನಕ್ಕೆ ವಿರುದ್ಧವಾಗಿದ್ದು ಅದು ಖಂಡನೀಯ.

ಈ ಹಿನ್ನೆಲೆಯಲ್ಲಿ , ಸಂವಿಧಾನದಲ್ಲಿ ಮೌಲ್ಯಗಳನ್ನು ಸಾಧಿಸುವತ್ತ ಮೊದಲ ಹೆಜ್ಜೆಯಾಗಿ, ಎಲ್ಲಾ ಸರ್ಕಾರಿ ಕಛೇರಿ ಮತ್ತು ಶಾಲಾ-ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಧಾರ್ಮಿಕ ಪೂಜೆ, ದೇವರ ಫೋಟೋಗಳು ಅಥವಾ ಧಾರ್ಮಿಕ ಘೋಷಣೆಗಳ ಪ್ರದರ್ಶನವನ್ನು ನಿಷೇಧಿಸುವ ಬಗ್ಗೆ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳುವಂತೆ ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಡಾ . ವಿ .ಪಿ.ನಿರಂಜನಾರಾಧ್ಯ ಬೆಂಗಳೂರ,  ಬಸವರಾಜ ಸೂಳಿಭಾವಿ ಗದಗ, ಮೂಡ್ನಾಕೂಡ ಚಿನ್ನಸ್ವಾಮಿ ಬೆಂಗಳೂರ, ರಂಜಾನ ದರ್ಗಾ ಧಾರವಾಡ, ಕೆ. ಶ್ರೀನಾಥ ಬೆಂಗಳೂರು ,ಆರ್ ಎಚ್ ನಟರಾಜ ಬೆಂಗಳೂರು, ಬಿ. ಸುರೇಶ ಬೆಂಗಳೂರು, ಶ್ರೀಪಾದ ಭಟ್, ಡಾ. ಎಚ್ ಎಸ್ ಅನುಪಮಾ ಕವಲಕ್ಕಿ, ಶಿವಸುಂದರ ಬೆಂಗಳೂರು, ಸನತಕುಮಾರ ಬೆಳಗಲಿ ಧಾರವಾಡ ಮುಂತಾದವರು ಳಿಸಿದ್ದಾರೆ.

ಇದನ್ನು ನೋಡಿ : ಕೆಇಎ ಪರೀಕ್ಷೆ ಮುಂದೂಡಿ – ಪರೀಕ್ಷಾರ್ಥಿಗಳ ಆಗ್ರಹJanashakthi Media

 

Donate Janashakthi Media

Leave a Reply

Your email address will not be published. Required fields are marked *