ರಾಜ್ಯ ಸಂಪುಟದ 13 ಸಚಿವರ ಹಿನ್ನಡೆ

ಬೆಂಗಳೂರು : ಚುನಾವಣಾ ಅಖಾಡದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ 24 ಸಚಿವರು ಇದ್ದಾರೆ. ಈಗಿನ ಟ್ರೆಂಡಿಂಗ್ ಪ್ರಕಾರ 13 ಜನ ಸಚಿವರು ಹಿನ್ನಡೆ ಅನುಭವಿಸಿದ್ದಾರೆ.

ಯಾವ-ಯಾವ ಸಚಿವರು? ಬಳ್ಳಾರಿ ಗ್ರಾಮೀಣ ಸಚಿವ ಬಿ. ಶ್ರೀರಾಮುಲು, ಹಿರೆಕೇರೂರು ಬಿ. ಸಿ. ಪಾಟೀಲ್, ಚಿಕ್ಕನಾಯಕನಹಳ್ಳಿ ಜೆ. ಸಿ. ಮಾಧುಸ್ವಾಮಿ, ಚಿಕ್ಕಬಳ್ಳಾಪುರ ಸಚಿವ ಡಾ. ಕೆ. ಸುಧಾಕರ್, ನಿಪ್ಪಾಣಿಯಲ್ಲಿ ಶಶಿಕಲಾ ಜೊಲ್ಲೆ, ಯಶವಂತಪುರದಲ್ಲಿ ಎಸ್. ಟಿ. ಸೋಮಶೇಖರ್, ಬೀಳಗಿಯಲ್ಲಿ ಮುರುಗೇಶ್ ನಿರಾಣಿ, ವರುಣದಲ್ಲಿ ವಿ. ಸೋಮಣ್ಣ, ಹಾಲಪ್ಪ ಆಚಾರ್, ಎಂಟಿಬಿ ನಾಗರಾಜ್, ಬಿ.ಸಿ. ನಾಗೇಶ್ ಹಿನ್ನಡೆ ಅನುಭವಿಸಿರುವ ಸಚಿವರು.

2013ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಸಂಪುಟದ ಸಚಿವರಾಗಿದ್ದ 11ಕ್ಕೂ ಅಧಿಕ ಮಂದಿ ಸೋಲು ಕಂಡಿದ್ದರು. ಆಡಳಿತ ವಿರೋಧಿ ಅಲೆ ಹೆಚ್ಚಾಗಿ ಕಾಣುತ್ತಿದ್ದು ಇನ್ನಷ್ಟು ಸಚಿವರು ಹಿನ್ನಡೆ ಅನುಭವಿಸುವ ಸಾಧ್ಯತೆ ಇದೆ.

Donate Janashakthi Media

Leave a Reply

Your email address will not be published. Required fields are marked *