ಸಿಎಂಗೆ ಕೊನೆಯ ಗಡುವು ನೀಡಿದ ಅಂಗನವಾಡಿ ನೌಕರರು – ಎರಡು ಬೇಡಿಕೆ ಈಡೇರಿಸಲು ಮುಂದಾದ ಸರಕಾರ

ಬೆಂಗಳೂರು : ಶಿಕ್ಷಕಿಯರ ಸ್ಥಾನಮಾನಕ್ಕೆ ಆಗ್ರಹಿಸಿ, ಹಾಗೂ ಗ್ಯಾಚ್ಯೂಟಿ ನೀಡುವಂತೆ ಒತ್ತಾಯಿಸಿ ಅಂಗನವಾಡಿ ನೌಕರರು ನಡೆಸುತ್ತಿರುವ ಹೋರಾಟ 10ನೇ ದಿನಕ್ಕೆ ಕಾಲಿಟ್ಟಿದೆ. ಮಂಗಳವಾರ ಎರಡು ಬೇಡಿಕೆ ಈಡೇರಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಉಳಿದ ಬೇಡಿಕೆಗಳನ್ನು ಪರಿಗಣಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳ ಮನೆಗೆ ಮತ್ತಿಗೆ ಹಾಕಲು ಅಂಗನವಾಡಿ ನೌಕರರು ನಿರ್ಧರಿಸಿದ್ದಾರೆ.

ಸಿಐಟಿಯು ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ 35 ಸಾವಿರಕ್ಕೂ ಹೆಚ್ಚು ಅಂಗನವಾಡಿ ನೌಕರರು ಭಾಗವಹಿಸಿದ್ದಾರೆ. ಬೇಡಿಕೆ ಈಡೇರುವವರೆಗೂ ಈ ಜಾಗದಿಂದ ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಹೋರಾಟ ನಿರತರಾಗಿದ್ದು. ಮೂರು ಬೇಡಿಕೆಗಳನ್ನು ಸರಕಾರ ಈಡೇರಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ಎರಡು ಬೇಡಿಕೆಗಳು ಯಾವುವು : ಅಂಗನವಾಡಿ ಶಿಕ್ಷಣದ ಅವಧಿಯನ್ನು ಮೂರು ತಾಸು ಕಡಿತಗೊಳಿಸಲಾಗಿದೆ. ಬೆಳಗ್ಗೆ 9.30 ರಿಂದ ಸಂಜೆ 4 ಗಂಟೆಯ ಬದಲಿಗೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪಾಠ ಮಾಡಲು ಸೂಚಿಸಲಾಗಿದೆ.

ಇನ್ನೂ ಎರಡನೇ ಬೇಡಿಕೆ ಯಾವುದೆಂದರೆ, 31.01.2023 ರ ಆದೇಶಕ್ಕೆ ತಿದ್ದುತಿದ್ದುಪಡಿ ಮಾಡಿ ಆ ಆದೇಶವನ್ನು ಹಿಂಪಡೆಯಲಾಗಿದೆ. 03.12.2022ರ ಮಾರ್ಗಸೂಚಿಯ ಕ್ರ.ಸಂ XII ರಲ್ಲಿನ ಮಿನಿ ಅಂಗನವಾಡಿ ಕಾರ್ಯಕರ್ತೆ/ ಅಂಗನವಾಡಿ ಸಹಾಯಕಿಯರನ್ನು ಕಾರ್ಯಕರ್ತೆಯರನ್ನಾಗಿ ಪದೋನ್ನತಿಗೆ ಗುರುತಿಸುವ ವಿಧಾನದಲ್ಲಿ “ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಪಿ.ಯು.ಸಿ. ಉತ್ತೀರ್ಣ ಹೊಂದಿದ ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊದಲ ಆದ್ಯತೆ ನೀಡುವುದು” ಎಂಬುದರ ಬದಲಾಗಿ ” ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ S.S.L.C. ಉತ್ತೀರ್ಣ ಹೊಂದಿದ ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ / ಸಹಾಯಕಿಯರಿಗೆ ಆದ್ಯತೆ ನೀಡುವುದು. ಹಾಗೂ ಒಂದೇ ಹುದ್ದೆಗೆ ಮಿನಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರು
ಅರ್ಜಿ ಸಲ್ಲಿಸಿದಲ್ಲಿ ಅರ್ಜಿದಾರರ ವಯಸ್ಸಿನಲ್ಲಿ ಹಿರಿಯರಾದವರನ್ನು ಪರಿಗಣಿಸತಕ್ಕದ್ದು ” ಎಂದು ತಿದ್ದುಪಡಿ ಮಾಡಲಾಗಿದೆ.

ಈ ಎರಡು ಆದೇಶಗಳನ್ನು ಲಿಖಿತವಾಗಿ ನೀಡಲಾಗಿದೆ. ಗ್ರಾಚ್ಯೂಟಿ ಹಾಗೂ ಶಿಕ್ಷಕಿ ಸ್ಥಾನಮಾನ ಕುರಿತಾಗಿ ಸರಕಾರ ಲಿಖಿತ ಆದೇಶ ನೀಡಬೇಕು. ಇಲ್ಲದೆ ಹೋದಲ್ಲಿ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಎಚ್ಚರಿಸಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಇಂದು ಸಂಘಟನೆಯ ನಾಯಕರ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

 

 

Donate Janashakthi Media

Leave a Reply

Your email address will not be published. Required fields are marked *