ಅಂಬೇಡ್ಕರ್ ಭವನದಲ್ಲಿ ವಾಸವಾಗಿದ್ದ ವೃದ್ಧೆಯನ್ನು ಕೊಲೆಗೈದ ಗ್ರಾಪಂ ಸದಸ್ಯನ‌ ಮಗ

ಮೈಸೂರು : ಅಂಬೇಡ್ಕರ್ ಭವನದಲ್ಲಿ ವಾಸವಾಗಿದ್ದ ವೃದ್ಧೆಯನ್ನು ಗ್ರಾಮ ಪಂಚಾಯತಿ ಸದಸ್ಯನ ಮಗ ದಾರುಣವಾಗಿ ಕೊಲೆ ಮಾಡಿರುವ ಘಟನೆ ಕೆ.ಆರ್ ನಗರ ತಾಲೂಕಿನ ಹೊಸೂರು ಕಲ್ಲಹಳ್ಳಿಯಲ್ಲಿ ನಡೆದಿದೆ. ಜಯಮ್ಮ (60) ಮೃತ ದುರ್ದೈವಿ.

ಮಳೆಯಿಂದಾಗಿ ಜಯಮ್ಮ ಅವರ ಮನೆ ಕುಸಿದು ಬಿದ್ದಿತ್ತು. ವಾಸಕ್ಕೆ ಜಾಗವಿಲ್ಲದ ಕಾರಣ ಗ್ರಾಮಸ್ಥರ ಒಪ್ಪಿಗೆ ಮೇರೆಗೆ ಜಯಮ್ಮ ಹಾಗೂ ಕುಟುಂಬಸ್ಥರು ಅಂಬೇಡ್ಕರ್‌ ಭವನದಲ್ಲಿ ವಾಸ್ತವ್ಯ ಹೂಡಿದ್ದರು. ಇದನ್ನು ಸಹಿಸದ ವಿಶ್ವಕುಮಾರ್ ಎಂಬ ವ್ಯಕ್ತಿ ಭವನಕ್ಕೆ ಆಗಮಿಸಿ ಸಾಮಾನು – ಸರಂಜಾಮುಗಳನ್ನು ಎತ್ತಿಕೊಂಡು ಭವನವನ್ನು ಖಾಲಿ ಮಾಡುವಂತೆ ಪೀಡಿಸುತ್ತಿದ್ದ.

ಗ್ರಾಮ ಪಂಚಾಯತಿ ಸದಸ್ಯ ಮಹಾಲಿಂಗನ ಪುತ್ರನಾಗಿರುವ ವಿಶ್ವಕುಮಾರ್, ತಾನೂ ಗ್ರಾಪಂ ಸದಸ್ಯನ‌ ಮಗನೆಂದು, ತಾನು ಹೇಳಿದಂತೆ ಕೇಳಬೇಕು, ಹಾಗಾಗಿ ಭವನ ಖಾಲಿ ಮಾಡಿ ಎಂದು ದೌರ್ಜನ್ಯ ನಡೆಸಿ ವೃದ್ಧ ಮಹಿಳೆಯ ಜುಟ್ಟು ಹಿಡಿದೆಳದು ಗೋಡೆಗೆ ನುಗ್ಗಿದ್ದ, ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಆ ಮಹಿಳೆ ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗಿದೆ ಫೆ.13 ರಂದು ವೃದ್ಧ ಮಹಿಳೆ ನಿಧನರಾಗಿರುತ್ತಾರೆ. ಘಟನೆ ಸಂಬಂಧ ಕೆ.ಆರ್ ನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂತಹ ರಾಜಕೀಯ ಪುಡಾರಿಗಳ ಹೆಡೆಮುರಿ ಕಟ್ಟುವ ಅಗತ್ಯವಿದೆ. ನೆಮ್ಮದಿಯಾಗಿ ಬದುಕಿದ್ದ ವೃದ್ಧೆಯನ್ನು ಕೊಲೆಗೈದು ಆ ಕುಟುಂಬವನ್ನು ಬೀದಿಗೆ ತಂದಿರುವ ವಿಶ್ವಕುಮಾರ್ ಗೆ ಕಠಿಣ ಶಿಕ್ಷೆ ವಿಧಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *