ಖಾಸಗಿ ವೀಡಿಯೋ ಲೀಕ್‌ ಮಾಡುವುದಾಗಿ ನಟ ಸುದೀಪ್‌ಗೆ ಬೆದರಿಕೆ : ದೂರು ದಾಖಲು

ಬೆಂಗಳೂರು: ನಿನ್ನ ರಾಸಲೀಲೆಗಳನ್ನು ಬಹಿರಂಗಪಡಿಸುತ್ತೇನೆ ಎಂದು ಅನಾಮಧೇಯ ವ್ಯಕ್ತಿಗಳು ಖ್ಯಾತ ಚಿತ್ರ ನಟ ಸುದೀಪ್ ಅವರಿಗೆ ಪತ್ರ ಮುಖೇನ ಬೆದರಿಕೆ ಹಾಕಿದ್ದು, ಈ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಸ್ಯಾಂಡಲ್‍ವುಡ್‍ ಕಿಚ್ಚ ಎಂದೇ ಗುರುತಿಸಿಕೊಂಡಿರುವ ಖ್ಯಾತ ಚಿತ್ರ ನಟ ಸುದೀಪ್ ಅವರಿಗೆ ಎರಡು ಅನಾಮಧೇಯ ಪತ್ರಗಳ ಮೂಲಕ ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಸುದೀಪ್ ಅವರು ಕೇರ್ ಟೇಕರ್ ಹಾಗೂ ಮ್ಯಾನೇಜರ್ ಆಗಿರುವ ನಿರ್ಮಾಪಕ ಜಾಕ್ ಮಂಜು ಅವರು ಈ ಕುರಿತಂತೆ ಪುಟ್ಟೇನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

ಸುದೀಪ್ ಅವರಿಗೆ ಅಂಚೆ ಮೂಲಕ ಬಂದಿರುವ ಪತ್ರಗಳಲ್ಲಿ ಅವರನ್ನು ಅವಾಚ್ಯ ಶಬ್ದಗಳಲ್ಲಿ ಹೀಯಾಳಿಸಿರುವ ಅನಾಮಧೇಯರು ನೀನು ಎಷ್ಟು ಹೆಣ್ಣು ಮಕ್ಕಳ ಬಾಳು ಹಾಳು ಮಾಡುತ್ತಿಯೋ ಈ ಸಲ ನಿನ್ನ ರಾಸಲೀಲೆ ಪ್ರಕರಣಗಳಿಗೆ ಕೊನೆ ಹಾಡ್ತಿವಿ. ನಿನ್ನ ಪಂಜಾಬಿ, ಚೆನ್ನೈ, ದುಬೈ, ರಾಜರಾಜೇಶ್ವರಿನಗರದ, ಶೆರಾಟನ್ ಹೋಟೆಲ್ ರಾಸಲೀಲೆ ಪ್ರಕರಣಗಳ ವಿಡಿಯೋಗಳನ್ನು ಶೀಘ್ರ ಬಹಿರಂಗಗೊಳಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ : ನಾನು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ,ಯಾರ ಹತ್ತಿರವೂ ಟಿಕೆಟ್ ಕೇಳಿಲ್ಲ : ನಟ ಕಿಚ್ಚ ಸುದೀಪ್‌ ಸ್ಪಷ್ಟನೆ

ಪ್ರೊಡ್ಯುಸರ್ಗಳಿಗೆ ಹೊಟ್ಟೆ ಉರಿಸುವ ನಿನ್ನ ಮೇಕಪ್ ಇಲ್ಲದ ಮುಖ ಜನರಿಗೆ ಗೊತ್ತಾಗಬೇಕು ಎಂದು ಅನಾಮಧೇಯರು ಬೆದರಿಕೆ ಹಾಕಿದ್ದು, ಈ ಬೆದರಿಕೆ ಪತ್ರಗಳನ್ನು ಗಂಭೀರವಾಗಿ ಪರಿಗಣಿಸಿ ಪತ್ರ ರವಾನೆ ಮಾಡಿರುವವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಾಕ್ ಮಂಜು ದೂರಿನಲ್ಲಿ ಮನವಿ ಮಾಡಿದ್ದಾರೆ.

ಜಾಕ್ ಮಂಜು ನೀಡಿರುವ ದೂರನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಸುದೀಪ್ ರಾಸಲೀಲೆ ಬಹಿರಂಗಗೊಳಿಸುವ ಬೆದರಿಕೆ ಪತ್ರದ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಸಿಬಿ ವಹಿಸಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

Donate Janashakthi Media

Leave a Reply

Your email address will not be published. Required fields are marked *