ತಪ್ಪು ಮಾಡಿದವರ ವಿರುದ್ದ ಪಕ್ಷದಿಂದಲೂ ಕ್ರಮ: ಹೆಚ್ಡಿಕೆ

ಶಿವಮೊಗ್ಗ: ಹಾಸನ ಪೆನ್​ಡ್ರೈವ್​ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಡಿದವರ ವಿರುದ್ದ ಪಕ್ಷದಿಂದಲೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್​.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಈಬಗ್ಗೆ ತನಿಖೆ ನಡೆಸಲು ಎಸ್​ಐಟಿ ರಚನೆ ಮಾಡಲಾಗಿದೆ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗುತ್ತದೆ. ಆದರೆ ಇದರಲ್ಲಿ ಕುಟುಂಬವನ್ನು ಎಳೆದು ತರುವುದು ಸರಿಯಲ್ಲ. ವ್ಯಕ್ತಿ ಬಗ್ಗೆ ಚರ್ಚಿಸಬೇಕು. ಇದರಲ್ಲಿ ದೇವೇಗೌಡರು​ ಮತ್ತು ಕುಮಾರಸ್ವಾಮಿ ಹೆಸರು ತರುವುದು ಸೂಕ್ತವಲ್ಲ. ತಪ್ಪು ಮಾಡಿದ ವ್ಯಕ್ತಿಯನ್ನು ನಾವು ವಹಿಸಿಕೊಳ್ಳುತ್ತಿಲ್ಲ. ಎಸ್​ಐಟಿ ರಚನೆಯಾಗಿದೆ ಅವರು ತನಿಖೆ ನಡೆಸಿ ವರದಿ ನೀಡುತ್ತಾರೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ಇಂತಹ ವಿಷಯಗಳು ನನಗೊಬ್ಬನಿಗೆ ಅಲ್ಲ, ಇಡೀ ಸಮಾಜಕ್ಕೆ ಮುಜಗರ ಆಗುತ್ತದೆ. ಎಸ್​ಐಟಿ ತನಿಖೆಯು ಪಾರದರ್ಶಕವಾಗಿ ನಡೆಯಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ : ಹೆಚ್ಡಿಕೆ ಹೇಳಿಕೆಯನ್ನೇ ಮೇಲ್ನೋಟಕ್ಕೆ ಸಮರ್ಥಿಸಿಕೊಂಡಂತೆ ಕಂಡ ಬಿಜೆಪಿಯ ಆರ್.ಅಶೋಕ್‌

ನಾನಾಗಲಿ ದೇವೇಗೌಡರಾಗಲಿ ಮಹಿಳೆಯರನ್ನು ಗೌರವದಿಂದ ಕಂಡಿದ್ದೇವೆ. ಚುನಾವಣೆ ಮುಂಚೆ ಈ ವಿಷಯ ತಿಳಿದಿದ್ದರೆ ಪಕ್ಷದಿಂದ ಕ್ರಮ ಕೈಗೊಳ್ಳಬಹುದಾಗಿತ್ತು. ಸದ್ಯ ತನಿಖೆ ವರದಿ ಬರಲಿ ಅದರ ಬಳಿಕ ಮತನಾಡುವೆ ಎಂದು ತಿಳಿಸಿದರು. ಉಳಿದ ಕಡೆ ಪ್ರಚಾರಕ್ಕೆ ಹೋಗುತ್ತಿದ್ದೇನೆ ಎಂದರು.

ಇದನ್ನೂ ನೋಡಿ: ಸುಳ್ಳು ಹೇಳೋದ ಮೋದಿ ಕೆಲಸ, ಮೋದಿ ಗ್ಯಾರಂಟಿ ನಂಬಬ್ಯಾಡ್ರಿ – ಪ್ರಕಾಶ್‌ ರೈ Janashakthi Media

Donate Janashakthi Media

Leave a Reply

Your email address will not be published. Required fields are marked *