ಮುಸ್ಲಿಮರನ್ನು ಕೊಲ್ಲುವುದಾಗಿ ಹೇಳಿದ್ದ ಎಬಿವಿಪಿ ನಾಯಕಿ ಮೇಲೆ ಬಿತ್ತು ಕೇಸ್‌

ವಿಜಯಪುರ: ಹರ್ಷ ಹತ್ಯೆ ಖಂಡಿಸಿ ವಿಜಯಪುರದಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರಚೋದನಾಕರಿ ಹೇಳಿಕೆ ನೀಡಿದ್ದ ಹಿಂದೂ ಕಾರ್ಯಕರ್ತೆ ಪೂಜಾ ವೀರಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ.

ಫೆಬ್ರವರಿ 23 ರಂದು ಭಜರಂಗದಳ, ವಿಎಚ್‌ಪಿ ನೇತೃತ್ವದಲ್ಲಿ ವಿಜಯಪುರದಲ್ಲಿ ಪ್ರತಿಭಟನೆ ನಡೆದಿತ್ತು.ಈ ವೇಳೆ ಮಾತನಾಡಿದ್ದ ಪೂಜಾ ‘ಭಾರತವನ್ನು ಹಿಜಾಬ್ ಮಾಡಲು ಬಂದರೆ ತುಂಡು ತುಂಡಾಗಿ ಕತ್ತರಿಸುತ್ತೇವೆ. ಒಂದು ಗಂಟೆ ನಮ್ಮ ಕೈಗೆ ಸರ್ಕಾರ ಕೊಟ್ಟರೆ 60 ಸಾವಿರ ಜನರನ್ನು ಕತ್ತರಿಸುತ್ತೇವೆ ಎಂದಿದ್ದರು.

ಅವರ ಮೇಲೆ ಕೇಸ್‌ ದಾಖಲಿಸಬೇಕು ಎಂಬ ಕೂಗು ವ್ಯಾಪಕವಾಗಿ ಕೇಳಿಬಂದಿತ್ತು.  ಕೋಮು ಸೌಹಾರ್ದತಗೆ ಧಕ್ಕೆ ತರುವ ಮಾತುಗಳ ಹಿಂದೆ ಯಾರೋ ಇದ್ದಾರೆ. ಈಕೆಗೆ ಯಾರೋ ಉಪದೇಶ ಮಾಡಿ ಈ ರೀತಿ ಹೇಳಿಸಿಸಿದ್ದಾರೆ. ಸಮಗ್ರ ತನಿಖೆಯಾಗಬೇಕು ಎಂದು ಬಹಳಷ್ಟು ಜನ ಆಗ್ರಹಿಸಿದ್ದರು.

ಇದನ್ನೂ ಓದಿ : ಭಾರತವನ್ನು ಹಿಜಾಬ್‌ಮಯ ಮಾಡಲು ಬಂದರೆ ‘ಇಂಚಿಂಚಾಗಿ ಕಡಿಯುತ್ತೇವೆ’ : ಎಬಿವಿಪಿ ನಾಯಕಿಯಿಂದ ವಿವಾದಾತ್ಮಕ ಹೇಳಿಕೆ

ಈ ಹಿನ್ನೆಲೆಯಲ್ಲಿ ವಿಜಯಪುರದ ಗೋಳಗುಮ್ಮಟ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದ್ದು. ಕಲಂ 295A, 505/2 ಹಾಗೂ 506 ಅಡಿಯಲ್ಲಿ ಪೂಜಾ ವೀರಶೆಟ್ಟಿ ವಿರುದ್ಧ ಕೇಸ್ ದಾಖಲಾಗಿದೆ.  ಪೂಜಾರನ್ನು ಬಂಧಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

Donate Janashakthi Media

Leave a Reply

Your email address will not be published. Required fields are marked *