ಮಾಧ್ಯಮದವರಿಗೆ ಅವಾಜ್‌ ಹಾಕಿದ ಶಾಸಕರ ಬೆಂಬಲಿಗ

ಬೆಳಗಾವಿ: ಶಾಸಕರ ಬೆಂಬಲಿಗನೊಬ್ಬ ಮಾಧ್ಯಮದವರಿಗೆ ಅವಾಜ್‌ ಹಾಕಿ ಬೆದರಿಕೆ ಹಾಕಿರುವ ವಿಡೀಯೋ ವೈರಲ್‌ ಆಗಿದೆ. ಶಾಸಕ ರಾಜು ಕಾಗೆ ಬೆಂಬಲಿಗ ಶಾಸಕರ ಎದುರಿನಲ್ಲಿಯೇ ವಿಡೀಯೋ ಮಾಡಿ ಮಾಧ್ಯಮಗಳಿಗೆ ಧಮಕಿ ಹಾಕಿದ್ದಾನೆ.

ಹೀಗೆ  ರಾಜು ಕಾಗೆಯವರ ಆಪ್ತ ಎನ್ನಲಾಗಿರುವ ಸಂತೋಷ ಚುರುಮೂಲೆ ವಿಡೀಯೋ ಮಾಡಿದ್ದಾರೆ.

ಇದನ್ನೂ ಓದಿ: ಕೈದಿಯಿಂದ ಜೈಲಿನ ವಾರ್ಡನ್‌ ಮೇಲೆ ಮಾರಣಾಂತಿಕ ಹಲ್ಲೆ

ಮೀಡಿಯಾದವರಿಗೆ ಮನೆಗೆ ನುಗ್ಗಿ ಹೊಡೀತೇವೆ. ನಮ್ಮ ಕಾಗೆ ಸಾಹೇಬರ ಬಗ್ಗೆ ಯಾರಾದರೂ ಮೀಡಿಯಾದವರು ಸುದ್ದಿ ಮಾಡಿದರೆ ಅವರ ಮನೆಗೆ ಹೋಗಿ ಕೈಕಾಲು ಮುರಿಯುತ್ತೇವೆ. ಇದು ನನ್ನ ಓಪನ್‌ ಚಾಲೆಂಜ್‌ ಎಂದು ಚುರುಮೂಲೆ ಹೇಳಿದ್ದಾನೆ. ಜೊತೆಗೆ, ನಮ್ಮ ಕಾಗೆ ಸಾಹೇಬರು ಎಂದರೆ ದೇವರಿದ್ದ ಹಾಗೆ ಅವರ ಬಗ್ಗೆ ಯಾರೂ ಮಾತನಾಡಬಾರದು ಎಂದು ಎಂದು ಬಹಿರಂಗವಾಗಿ ತನ್ನ ಧಿಮಾಕು ಪ್ರದರ್ಶಿಸಿದ್ದಾನೆ.

ಇದನ್ನೂ ನೋಡಿ: “ಹೊರಗುತ್ತಿಗೆಯಲ್ಲಿ ಮೀಸಲಾತಿ” – ಅರೆಹೊಟ್ಟೆಯ ಸಾಮಾಜಿಕ ನ್ಯಾಯವೇ? – ಕೆ. ಮಹಾಂತೇಶ್‌

Donate Janashakthi Media

Leave a Reply

Your email address will not be published. Required fields are marked *