14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕಲ್ಲಿದ್ದಲು ಕುಲುಮೆಯಲ್ಲಿ ಸುಟ್ಟ ದುಷ್ಕರ್ಮಿಗಳು

ರಾಜಸ್ಥಾನ: ಬಿಲ್ವಾರಾ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರಗೈದು ಕಲ್ಲಿದ್ದಲು ಕುಲುಮೆಯಲ್ಲಿ ಸುಟ್ಟು ಹಾಕಿದ ಘಟನೆ ನಡೆದಿದೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇಕೆ ಮೇಯಿಸಲು ಹೋಗಿದ್ದ ಬಾಲಕಿ

ಬಿಲ್ವಾರ ಠಾಣಾ ಪ್ರಭಾರಿ ಖಿವರಾಜ್ ಗುರ್ಜರ್ ಮಾತನಾಡಿ, ಕೊಟ್ರಿ ಪ್ರದೇಶದ ನರಸಿಂಗಪುರ ಗ್ರಾಮದ ಬಾಲಕಿ ಬುಧವಾರ ಬೆಳಗ್ಗೆ ತನ್ನ ತಾಯಿಯೊಂದಿಗೆ ಹೊಲದಲ್ಲಿ ಮೇಕೆ ಮೇಯಿಸಲು ಹೋಗಿದ್ದಳು. ಮಧ್ಯಾಹ್ನದ ವೇಳೆಗೆ ತಾಯಿ ಮನೆಗೆ ವಾಪಸ್ಸಾಗಿದ್ದರೂ ಮಗಳ ಮನೆಗೆ ಬಂದಿರಲಿಲ್ಲ. ಬಹಳ ಸಮಯ ಕಳೆದರೂ ಆಕೆ ವಾಪಸ್ ಬಾರದೆ ಇದ್ದಾಗ ಕುಟುಂಬಸ್ಥರು ಊರಲ್ಲಿ ಹಾಗೂ ಸಂಬಂಧಿಕ ಮನೆಗಳಲ್ಲಿ ಹುಡುಕಾಡಿದರೂ ಎಲ್ಲಿಯೂ ಪತ್ತೆಯಾಗಿರಲಿಲ್ಲ

ಕುಟುಂಬ ಸದಸ್ಯರು ಬಾಲಕಿಯನ್ನು ಹುಡುಕಲು ಆರಂಭಿಸಿದಾಗ ಕಲ್ಲಿದ್ದಲು ಕುಲುಮೆಯ ಬಳಿ ಮಾನವನ ಮೂಳೆಗಳು ಪತ್ತೆಯಾಗಿದ್ದು,ಮಹಿಳೆಯ ನಡುವೆಯೂ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ:ಚಿತ್ರದುರ್ಗ ಕಲುಷಿತ ನೀರು ಸೇವನೆ ಪ್ರಕರಣ:ಇಬ್ಬರು ಎಂಜಿನಿಯರ್‌ ಅಮಾನತ್ತು

ಡಿಎನ್‌ಎ ಪರೀಕ್ಷೆಗೆಂದು ಬಾಲಕಿಯ ಬಳೆಗಳನ್ನು ಮತ್ತು ಶೂ ಕಳುಹಿಸಲಾಗಿದ್ದು ತನಿಖೆ ಮುಂದುವರೆಸಲಾಗಿದೆ ಘಟನೆಗೆ ಸಂಬಂಧಿಸಿ ಮೂವರುನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಆದರ್ಶ್‌ ಸಿಂಧು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *