ಯುಎಪಿಎ ಪ್ರಕರಣದಲ್ಲಿ ದಿಲ್ಲಿ ಹೈಕೋರ್ಟ್ ತೀರ್ಪು ಅತ್ಯಂತ ಸ್ವಾಗತಾರ್ಹ

ನ್ಯಾಯಾಲಯ ಸರಕಾರದ ಮುಖಕ್ಕೆ ಕನ್ನಡಿ ಹಿಡಿದಿದೆ-ಸಿಪಿಐ(ಎಂ) ಪೊಲಿಟ್ ಬ್ಯುರೊ

ಈಶಾನ್ಯ ದಿಲ್ಲಿಯ ಹಿಂಸಾಚಾರಕ್ಕೆ ಸಂಬಂಧಪಟ್ಟ ಯು.ಎ.ಪಿ.ಎ. ಪ್ರಕರಣದಲ್ಲಿ ದಿಲ್ಲಿ ಹೈಕೋರ್ಟ್ ಮೂವರು ಬಂಧಿತರಿಗೆ ಜಾಮೀನು ನೀಡಿರುವುದನ್ನು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ ಸ್ವಾಗತಿಸಿದೆ. ಸಂವಿಧಾನಬಾಹಿರ ಸಿ.ಎ.ಎ. ವಿರುದ್ಧ ಪ್ರತಿಭಟಿಸುತ್ತಿದ್ದ ಕಾರ್ಯಕರ್ತರ ವಿರುದ್ಧ ಕೇಸುಗಳನ್ನು ಉತ್ಪಾದಿಸುವ ಮೂಲಕ ಗೃಹ ಮಂತ್ರಾಲಯ ಎಸಗಿರುವ ದೊಡ್ಡ ಅನ್ಯಾಯವನ್ನು ಸರಿಪಡಿಸುವತ್ತ ಇದು ಒಂದು ಅತ್ಯಂತ ಸ್ವಾಗತಾರ್ಹ ಹೆಜ್ಜೆ ಎಂದು ಅದು ಹೇಳಿದೆ.

ಇದನ್ನು ಓದಿ: ದೆಹಲಿ ಹೈಕೋರ್ಟ್‌ನಿಂದ ಜಾಮೀನು ಪಡೆದ ಜೆಎನ್‌ಯು, ಜಾಮಿಯಾ ವಿದ್ಯಾರ್ಥಿಗಳು

ಅದರಲ್ಲೂ “ಭಿನ್ನಮತವನ್ನು ಹತ್ತಿಕ್ಕುವ ಆತುರದಲ್ಲಿ, ಗೃಹ ಮಂತ್ರಾಲಯದ ಮನದಲ್ಲಿ ಸಂವಿಧಾನ ಭರವಸೆ ನೀಡಿರುವ ಪ್ರತಿಭಟನೆಯ ಹಕ್ಕು ಮತ್ತು ಭಯೋತ್ಪಾದಕ ಚಟುವಟಿಕೆಯ ನಡುವಿನ ಗೆರೆ ಸ್ವಲ್ಪಮಟ್ಟಿಗೆ ಮಸುಕಾಗುತ್ತಿರುವಂತೆ ಕಾಣುತ್ತದೆ. ಈ ಮನೋಭಾವ ಜಾಡು ಹಿಡಿದರೆ ಅದು ಪ್ರಜಾಪ್ರಭುತ್ವಕ್ಕೆ ಒಂದು ವಿಷಾದಕರ ದಿನವಾಗುತ್ತದೆ” ಎಂದು ಹೈಕೋರ್ಟ್ ಹೇಳಿರುವುದು ಗಮನಾರ್ಹವಾಗಿದೆ ಎಂದು ಸಿಪಿಐ(ಎಂ) ಹೇಳಿದೆ.

ನ್ಯಾಯಾಲಯ ಸರಕಾರದ ಮುಖಕ್ಕೆ ಕನ್ನಡಿ ಹಿಡಿದಿದೆ. ಇದು, ಯಾವುದೇ ರೂಪದ ಭಿನ್ನಮತವನ್ನು ರಾಷ್ಟ್ರ-ವಿರೋಧಿ ಎಂದು ಹೇಳುವ ಮತ್ತು ವ್ಯಕ್ತಿಗಳನ್ನು ಪೀಡಿಸುವ, ಭಯಪಡಿಸುವ, ಬೆದರಿಸುವ, ಯುಎಪಿಎ ಮತ್ತು ರಾಜದ್ರೋಹದ ಕಾಯ್ದೆಗಳ ಅಡಿಯಲ್ಲಿ ಜೈಲಿಗಟ್ಟುವ ಅಸಂಖ್ಯಾತ ಕೇಸುಗಳಿಗೆ ಅನ್ವಯವಾಗುತ್ತದೆ ಎಂದಿರುವ ಸಿಪಿಐ(ಎಂ) ಈ ತೀರ್ಪನ್ನು ಸ್ವಾಗತಿಸುತ್ತಲೇ ಸರಕಾರ ಈ ಮಾನಕವನ್ನು ಎಲ್ಲ ಸುಳ್ಳು ಕೇಸುಗಳಿಗೆ ಅನ್ವಯಿಸಬೇಕು ಮತ್ತು ಎಲ್ಲ ರಾಜಕೀಯ ಬಂಧಿತರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *