ರಾಜ್ಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ರೈತ ಮಹಾ ಪಂಚಾಯತ್

ಬೆಂಗಳೂರು : ಇಂದಿನಿಂದ ಮೂರು ದಿನಗಳ ಕಾಲ ಕರ್ನಾಟಕದ ರೈತ ಹೋರಾಟಗಳ ಬಹಿರಂಗ ಸಭೆ ಯಲ್ಲಿ ಭಾಗವಹಿಸಲು ಆಗಮಿಸಿದ ದೆಹಲಿ ರೈತ ಹೋರಾಟದ ನಾಯಕರಿಗೆ ಸಂಯುಕ್ತ ಹೋರಾಟ ಕರ್ನಾಟಕ ದಿಂದ ಬೆಂಗಳೂರಿನ ಮೌರ್ಯ ಸರ್ಕಲ್ ನ ಗಾಂಧಿ ಪ್ರತಿಮೆ ಬಳಿ ಸ್ವಾಗತ ಕೋರಲಾಯಿತು.
ಸಂಯುಕ್ತ ಕಿಸಾನ್ ಮೋರ್ಚಾ ನಾಯಕರಾದ ರಾಕೇಶ್ ಸಿಂಗ್ ಟಿಕಾಯತ್ ,ಡಾ.ದರ್ಶನ್ ಪಾಲ್ ಹಾಗೂ ಯದುವೀರ್ ಸಿಂಗ್ ರವರಿಗೆ ಸ್ವಾಗತ ಕೋರಿ ಸೇರಿದ್ದ ಸಭೆಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ದ ಸಂಯೋಜಕರಾದ ಬಡಗಲಪುರ ನಾಗೇಂದ್ರ, ಕೆ.ವಿ ಭಟ್ ,ರಾಜ್ಯ ನಾಯಕರಾದ ಕೋಡಿಹಳ್ಳಿ ಚಂದ್ರಶೇಖರ್, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಎನ್ ವೆಂಕಟಾಚಲಯ್ಯ ,ಟಿ ಯಶವಂತ, ನೂರ್ ಶ್ರೀಧರ್, ಸಿರಿಮನೆ ನಾಗರಾಜ್ ಹೆಚ್ ವಿ ದಿವಾಕರ್,ಚುಕ್ಕಿ ನಂಜುಂಡಸ್ವಾಮಿ, ಕುರಬೂರು ಶಾಂತಕುಮಾರ್, ಶಿವಪ್ರಕಾಶ್, ಜಿ.ಟಿ ರಾಮಸ್ವಾಮಿ, ಶಿವಪ್ಪ ,ರವಿಕಿರಣ್ ಪೂಣಚ್ಚ,ಭಕ್ತರಹಳ್ಳಿ ಭೈರೇಗೌಡ ಮುಂತಾದವರು ಹಾಜರಿದ್ದರು.
ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ದೆಹಲಿ ನಾಯಕರು ತುಮಕೂರು ಮಾರ್ಗವಾಗಿ ಶಿವಮೊಗ್ಗ ಕ್ಕೆ ತೆರಳಿದರು.ನಾಳೆ ಹಾವೇರಿ ಯ ಕಿಸಾನ್ ಪಂಚಾಯತ್ ನಲ್ಲಿ ಭಾಗವಹಿಸಿ ,ಮಾರ್ಚ್ 22 ರಂದು ಬೆಂಗಳೂರಿನ ವಿಧಾನ ಸೌಧ ಚಲೋ ಬಹಿರಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ.
Donate Janashakthi Media

Leave a Reply

Your email address will not be published. Required fields are marked *